ಅಪಘಾತ ತಡೆಯಲು ರೈಲಿಗೆ ಹಳದಿ ಬಣ್ಣ ಹಚ್ಚಿ!
Team Udayavani, Sep 2, 2017, 7:50 AM IST
ಹೊಸದಿಲ್ಲಿ: ರೈಲುಗಳಿಗೆ ಹಳದಿ ಬಣ್ಣ ಹಚ್ಚುವ ಜೊತೆಗೆ, ಹೆಚ್ಚು ಪ್ರಕಾಶಮಾನವಾಗಿರುವ ದೀಪಗಳನ್ನು (ಲೈಟ್) ಬಳಸುವುದರಿಂದ ರೈಲು ಅಪಘಾತಗಳನ್ನು ತಡೆಯಲು ನೆರವಾಗಲಿದೆ ಎಂದು ವಿಶ್ವ ಬ್ಯಾಂಕ್ ಭಾರತೀಯ ರೈಲ್ವೆಗೆ ಸಲಹೆ ನೀಡಿದೆ.
“ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಸುರಕ್ಷತೆ ಹೆಚ್ಚಿಸುವಿಕೆ’ ಎಂಬ ಶೀರ್ಷಿಕೆಯ ವರದಿಯೊಂದನ್ನು ವಾರದ ಹಿಂದೆ ರೈಲ್ವೆ ಇಲಾಖೆಗೆ ಕಳುಹಿಸಿರುವ ವಿಶ್ವ ಬ್ಯಾಂಕ್, ರೈಲ್ವೆ ಸುರಕ್ಷತೆಗೆ ಸಂಬಂಧಿಸಿ ಹಲವು ಸಲಹೆಗಳನ್ನು ನೀಡಿದೆ. “ರೈಲ್ವೆ ನೌಕರರು ಎದ್ದು ಕಾಣುವಂತಹ ಬಟ್ಟೆಗಳನ್ನು ಧರಿಸಬೇಕು. ಪ್ರತಿ ರೈಲಿನಲ್ಲಿ ಕನಿಷ್ಠ 5 ತುರ್ತು ನಿರ್ಗಮನ ಅಥವಾ ಬೆಂಕಿ ನಿರ್ಗಮನ ದ್ವಾರಗಳಿರಬೇಕು.
ಸುರಕ್ಷತೆಯ ದೃಷ್ಟಿಯಿಂದ ರೈಲುಗಳ ಮುಂಭಾಗದಲ್ಲಿ ಪ್ರಕಾಶಮಾನವಾದ “ಡಿಚ್ ಲೈಟ್’ಗಳನ್ನು ಅಳವಡಿಸಬೇಕು ಎಂದು ವಿಶ್ವ ಬ್ಯಾಂಕ್ ಹೇಳಿದೆ. ರೈಲ್ವೆ ಕ್ರಾಸಿಂಗ್ಗಳಲ್ಲಿ ಕಣ್ಣಿಗೆ ರಾಚುವಂಥ ಗಾಢ ಬಣ್ಣಗಳನ್ನು ಬಳಸಿ ಕ್ರಾಸ್ ಲೈನ್ಗಳನ್ನು ಬರೆಯುವ ಮೂಲಕ ಆ ಪ್ರದೇಶ ಅಪಾಯಕಾರಿ ಎಂದು ಬಿಂಬಿಸಬೇಕು. ರೈಲುಗಳು ದೂರದಿಂದಲೂ ಕಾಣಲು ಅನುಕೂಲವಾಗುವಂತೆ ಎಲ್ಲ ರೈಲುಗಳಿಗೆ ಹಳದಿ ಬಣ್ಣ ಹಚ್ಚಲು ಸಲಹೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ