ಇಂದು ವಿಶ್ವ ಹೃದಯ ದಿನ: ಲಾಕ್ಡೌನ್ ಅಲ್ಪವಿರಾಮ; ಹೃದಯ ಆರಾಮ
ಒತ್ತಡ ಇಳಿಕೆ, ಹೃದ್ರೋಗಿಗಳ ಸಂಖ್ಯೆ ಶೇ. 40 ಕಡಿಮೆ
Team Udayavani, Sep 29, 2020, 6:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ವೇಗವಾಗಿ ಓಡುತ್ತಿದ್ದ ಜೀವನದಲ್ಲಿ ಆರು ತಿಂಗಳ ಲಾಕ್ಡೌನ್ ಎಂಬ ಅಲ್ಪವಿರಾಮವು ಹೃದಯ ಸಂಬಂಧಿ ಕಾಯಿಲೆಗಳಿಗೆ ತಾತ್ಕಾಲಿಕ ವಿರಾಮ ನೀಡಿದೆ! ಚಿಕಿತ್ಸೆ ಪಡೆಯು ತ್ತಿದ್ದವರಲ್ಲೂ ಉತ್ತಮ ಚೇತರಿಕೆ ಕಂಡು ಬಂದಿದೆ.
ಲಾಕ್ಡೌನ್ನ ನಕಾರಾತ್ಮಕ ಪರಿ ಣಾಮಗಳ ನಡುವೆ ಜನರ ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಯಾಗಿದ್ದು, “ಒತ್ತಡದ ಜೀವನ’ಕ್ಕೆ ಬ್ರೇಕ್ ಬಿದ್ದಿತ್ತು. ಇದರಿಂದ ರಕ್ತದೊತ್ತಡ ಮತ್ತು ಮಧುಮೇಹಗಳು ಹತೋಟಿಗೆ ಬಂದಿವೆ. ಈ ಮೂಲಕ ಹೃದ್ರೋಗ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ಬರುವವರ ಸಂಖ್ಯೆ ಶೇ. 40 ಕಡಿಮೆಯಾಗಿದೆ. ಅಲ್ಲದೆ ಈಗಾಗಲೇ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಶೇ.70 ಮಂದಿಯಲ್ಲಿ ಹಿಂದಿಗಿಂತ ಈಗ ಹೃದಯದ ಆರೋಗ್ಯ ಉತ್ತಮವಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು.
ಜೀವನ ಶೈಲಿ ಬದಲಾವಣೆ!
ಲಾಕ್ಡೌನ್ ಸಮಯ ಬಹುತೇಕರು ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಜನರ ಓಡಾಟ ಕಡಿಮೆ ಇತ್ತು. ಇದರಿಂದ ಕಚೇರಿ ಒತ್ತಡ, ಟ್ರಾಫಿಕ್, ವಾಯುಮಾಲಿನ್ಯದಿಂದ ದೂರ ಉಳಿದಂತಾಗಿದೆ. ಕುಟುಂಬಸ್ಥ ರೊಂದಿಗೆ ಸಂತೋಷವಾಗಿ ದಿನಕಳೆದಿ ದ್ದಾರೆ. ಕೊರೊನಾ ಭಯದಿಂದ ಆರೋಗ್ಯ ಕರ ಆಹಾರ ಸೇವಿಸಿದ್ದಾರೆ. ಇದರಿಂದ ಹೃದಯ ಆರೋಗ್ಯವಾಗಿದೆ ಎನ್ನುತ್ತಾರೆ ಹೃದ್ರೋಗ ತಜ್ಞ ಡಾ| ಕೆ.ವಿ. ಶ್ರೀಕಾಂತ್.
ಜಯದೇವ ಆಸ್ಪತ್ರೆಗೆ ಬರು ವವರ ಸಂಖ್ಯೆ ಶೇ.40ರಷ್ಟು ಕಡಿಮೆ ಯಾಗಿದೆ. ಇದಕ್ಕೆ ಲಾಕ್ಡೌನ್, ಸಂಚಾರ ವ್ಯತ್ಯಯ ಮತ್ತು ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾ ಗಿರು ವುದು ಪ್ರಮುಖ ಕಾರಣ ಗಳಾ ಗಿರ ಬಹುದು. ಲಾಕ್ಡೌನ್ ವೇಳೆ ಜನರು ಒತ್ತಡದ ಜೀವನ ಶೈಲಿ ಯಿಂದ ಹೊರಬಂದಿದ್ದಾರೆ.
– ಡಾ| ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರು
ಜಗತ್ತಿನಾದ್ಯಂತ ಜನರ ಸಾವಿನ ಕಾರಣದಲ್ಲಿ ಹೃದ್ರೋಗಕ್ಕೆ ಮೊದಲ ಸ್ಥಾನ.
1.79 ಕೋಟಿ ಪ್ರತೀ ವರ್ಷ ಜಗತ್ತಿನಾದ್ಯಂತ ಹೃದ್ರೋಗದಿಂದ ಸಾವು.
110 ಕೋಟಿ ವಯಸ್ಕರಲ್ಲಿ ರಕ್ತದೊತ್ತಡ ಸಮಸ್ಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ