ಉಗ್ರರು ಉ.ಪ್ರ.ಕ್ಕೆ ಕಾಲಿಟ್ಟಿದ್ದರೆ ಕೊಂದು ಬಿಡುತ್ತಿದ್ದೆವು: ಯೋಗಿ
Team Udayavani, Jan 25, 2019, 6:45 AM IST
ಮುಂಬಯಿ : ಪ್ರಯಾಗ್ರಾಜ್ ನಲ್ಲೀಗ ನಡೆಯುತ್ತಿರುವ ಕುಂಭಮೇಳದಲ್ಲಿ ರಾಸಾಯನಿಕ ದಾಳಿ ನಡೆಸುವ ಮೂಲಕ ಸಹಸ್ರಾರು ಅಮಾಯಕರನ್ನು ಕೊಲ್ಲುವ ಸಂಚು ನಡೆಸಿ ಮಹಾರಾಷ್ಟ್ರ ಎಟಿಎಸ್ ನಿಂದ ಬಂಧಿತರಾಗಿರುವ ‘ಐಸಿಸ್ ನಂಟಿನ 9 ಶಂಕಿತ ಉಗ್ರರು ಒಂದೊಮ್ಮೆ ಉತ್ತರ ಪ್ರದೇಶವನ್ನು ಪ್ರವೇಶಿಸಿದ್ದರೆ ಅವರನ್ನು ನಾವು ಕೊಂದು ಮುಗಿಸುತ್ತಿದ್ದೆವು’ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸಮೂಹ ನಾಶದ ರಾಸಾಯನಿಕ ದಾಳಿ ಮಾಡುವ ಸಂಚು ಹೊಂದಿದ್ದ ಐಸಿಸ್ ನಂಟಿನ 9 ಶಂಕಿತರನ್ನು ಬಂಧಿಸಿರುವ ಮಹಾರಾಷ್ಟ್ರ ಎಟಿಎಸ್ ಮತ್ತು ಸರಕಾರವನ್ನು ಸಿಎಂ ಯೋಗಿ ಅಭಿನಂದಿಸಿದರು.
ಮುಂಬಯಿಯಲ್ಲಿ ನಡೆದಿದ್ದ ಉ.ಪ್ರ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಯೋಗಿ ಅವರು “ಉಗ್ರರ ಮೂಲೋತ್ಪಾಟನೆಯೇ ನನ್ನ ಸರಕಾರದ ಗುರಿ; ಅದರಲ್ಲಿ ಯಾವುದೇ ರಾಜಿ ಇಲ್ಲ. ಉಗ್ರ ನಿಗ್ರಹವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.
ಸ್ಥಳೀಯ ಬಿಜೆಪಿ ನಾಯಕರೋರ್ವರು ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಉ.ಪ್ರ. ರಾಜ್ಯಪಾಲ ರಾಮ ನಾಯಕ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ