ಕೊಲೆ ಮಾಡಿ ಅಲೆದಾಡಿದ!
Team Udayavani, Dec 11, 2017, 6:00 AM IST
ನೋಯ್ಡಾ: ಅಭ್ಯಾಸದಲ್ಲಿ ಹಿಂದುಳಿದಿದ್ದಕ್ಕಾಗಿ ಬೈದಿದ್ದ ತಾಯಿ ತಂಗಿಯನ್ನೇ ಹತ್ಯೆಗೈದ ಗ್ರೇಟರ್ ನೋಯ್ಡಾದ 16 ವರ್ಷದ ಬಾಲಕ ಪೊಲೀಸರಿಗೆ ಸಿಕ್ಕಿಬೀಳುವ ಮುನ್ನ, ಗೊತ್ತುಗುರಿಯಿಲ್ಲದೇ ಆರಕ್ಕೂ ಹೆಚ್ಚು ರಾಜ್ಯಗಳಿಗೆ ಸುತ್ತಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಹುತೇಕ ಪ್ಯಾಸೆಂಜರ್ ಟ್ರೇನ್ನಲ್ಲಿ ಓಡಾಡಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದ. ಸಹಪ್ರಯಾಣಿಕರು ಕೊಟ್ಟ ಆಹಾರವನ್ನೇ ತಿಂದುಕೊಂಡಿದ್ದ. ಕೆಲವು ಬಾರಿ ದುಡ್ಡು ಕೊಟ್ಟು ಖರೀದಿಸಿದ್ದ. ಹತ್ಯೆ ಮಾಡಿದ ನಂತರ ಗೊಂದಲಕ್ಕೊಳಗಾಗಿದ್ದ. ಎಲ್ಲಿಗೆ ಹೋಗಬೇಕು ಎಂದು ಗೊತ್ತಿರಲಿಲ್ಲ. ಆದರೆ ಸುಮ್ಮನೆ ರೈಲ್ವೆ ಸ್ಟೇಷನ್ನಲ್ಲಿ ಇಳಿದು ಮತ್ತೂಂದು ರೈಲು ಹತ್ತುತ್ತಿದ್ದ.
ಮುಘಲ್ ಸರಾಯ್ ರೈಲ್ವೆ ನಿಲ್ದಾಣದಲ್ಲಿ ಇಳಿದ ಬಾಲಕ ಅಲ್ಲಿಂದ ಅಪರಿಚಿತರ ಮೊಬೈಲ್ ಪಡೆದು ತಂದೆಗೆ ಕರೆ ಮಾಡಿದ್ದ. ನಂತರ ಅದೇ ಮೊಬೈಲ್ಗೆ ಕರೆ ಮಾಡಿದಾಗ ಮೊಘಲ್ಸರಾಯ್ನಲ್ಲಿ ಇರುವುದು ತಿಳಿದುಬಂತು. ತಕ್ಷಣ ಅಲ್ಲಿನ ಪೊಲೀಸ್ ಸ್ಟೇಷನ್ ಸಂಪರ್ಕಿಸಿದ ನೊಯ್ಡಾ ಪೊಲೀಸರು ಬಾಲಕ ಅಲ್ಲಿನ ಘಾಟ್ ಒಂದರಲ್ಲಿ ಇರುವುದು ತಿಳಿದು ಬಂಧಿಸಿದ್ದಾರೆ. ಬಾಲಕನನ್ನು ನೋ ಯ್ಡಾಗೆ ಕರೆದುಕೊಂಡು ಬರು ವಾಗ ಅಳು ತ್ತಿದ್ದ. ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಅನುಭವಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರಂಭದಲ್ಲಿ ತಂಗಿಯ ಸಾಯಿಸುವ ಉದ್ದೇಶ ಇರಲಿಲ್ಲ. ಆದರೆ ತನ್ನ ಕೃತ್ಯ ತಂಗಿಗೆ ಗೊತ್ತಾಗಬಹುದು ಎಂದು ಆಕೆಯನ್ನೂ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನಿಗೆ ಪಾಲಕರು ಮೊಬೈಲ್ ಕೊಡಿಸಿರಲಿಲ್ಲವಾದ್ದರಿಂದ, ಫ್ಲಾಟ್ ತೊರೆಯುವ ಮುನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಬಂದಿದ್ದ. ಕೊಂದ ಬಳಿಕ ಕತ್ತರಿ ಹಾಗೂ ಪಿಜ್ಜಾ ಕಟ್ಟರ್ನಿಂದ ತಾಯಿ, ತಂಗಿಯ ಮುಖಗಳನ್ನು ವಿರೂಪಗೊಳಿಸಿದ್ದ ಎಂದಿದ್ದಾರೆ ಪೊಲೀಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್