“ನೀವು ನಮ್ಮ ಹೃದಯ ನಿವಾಸಿ’
Team Udayavani, Jun 30, 2019, 5:26 AM IST
ಹೊಸದಿಲ್ಲಿ: “ಅಧಿಕೃತ ಬಂಗಲೆ ಯಿಂದ ನೀವು ತೆರವಾಗಿರಬಹುದು. ಆದರೆ ನಮ್ಮ ಹೃದಯದಲ್ಲಿ ನೀವು ಸದಾ ನೆಲೆಸಿರು ತ್ತೀರಿ’. ಇದು ನಟ, ರಾಜಕಾರಣಿ ಅನುಪಮ್ ಖೇರ್ ಅವರು, ಸುಷ್ಮಾ ಸ್ವರಾಜ್ ಬಗ್ಗೆ ಮಾಡಿದ ಟ್ವೀಟ್.
ಅಂದ ಹಾಗೆ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಅವರು, ಈ ಹಿಂದಿನ ಸರಕಾರದಲ್ಲಿ ತಮಗೆ ನೀಡಲಾಗಿದ್ದ ಸರಕಾರಿ ಬಂಗಲೆಯನ್ನು ತಾವು ತೆರವುಗೊಳಿಸಿರುವು ದಾಗಿ ಶನಿವಾರ, ಟ್ವಿಟರ್ನಲ್ಲಿ ಪ್ರಕಟಿಸಿದ್ದರು.
“ಹೊಸದಿಲ್ಲಿಯ ಸಫªರ್ಗಂಜ್ ಲೇನ್ನಲ್ಲಿನ ನನ್ನ ಅಧಿಕೃತ ನಿವಾಸವಾಗಿದ್ದ ನಂ. 8ನೇ ಬಂಗಲೆಯನ್ನು ತೆರವುಗೊಳಿಸಿದ್ದೇನೆ. ಹಾಗಾಗಿ, ಆ ನಿವಾಸದಲ್ಲಿನ ಅಂಚೆ ವಿಳಾಸಕ್ಕಾಗಲೀ, ದೂರವಾಣಿ ಸಂಪರ್ಕಕ್ಕಾಗಲಿ ನಾನಿನ್ನು ದೊರಕುವುದಿಲ್ಲ’ ಎಂದು ಟ್ವೀಟ್ನಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಾವಿರಾರು ಟ್ವೀಟಿಗರು, ವಿದೇಶಾಂಗ ಸಚಿವೆಯಾಗಿ ಸುಷ್ಮಾ ಅವರು ಮಾಡಿರುವ ಕೆಲಸಗಳನ್ನು ಶ್ಲಾ ಸಿ ಅವರಿಗೆ ಧನ್ಯವಾದ ಅರ್ಪಿಸಿದರು.
ಇದೇ ವೇಳೆ, ಅನುಪಮ್ ಖೇರ್ ಕೂಡ ಟ್ವೀಟ್ ಮಾಡಿ, “ನೀವೊಬ್ಬ ಬಿಜೆಪಿಯ ಘನತೆವೆತ್ತ ನಾಯಕಿ. ಅಧಿಕೃತ ನಿವಾಸದಿಂದ ನೀವು ತೆರವಾಗಿರಬಹುದು. ಆದರೆ, ನಮ್ಮೆಲ್ಲರ ಹೃದಯದಲ್ಲಿ ನೀವು ಸದಾ ನೆಲೆಸಿರುತ್ತೀರಿ. ನಿಮ್ಮಂಥ ಧೀಮಂತ ನಾಯಕಿಯರಿಂದಲೇ ಜಾಗತಿಕ ರಾಜಕೀಯ ಸುಸ್ಥಿತಿಯಲ್ಲಿದೆ’ ಎಂದಿದ್ದಾರೆ. ಇನ್ನೂ ಅನೇಕರು ಸುಷ್ಮಾ ಅವರೊಬ್ಬ ಮಾದರಿ ನಾಯಕಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ಎಲ್ಲರ ಮನ ಗೆದ್ದವರು ಎಂದು ಶ್ಲಾ ಸಿದ್ದಾರೆ. ಜತೆಗೆ ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದೂ ಬರೆದುಕೊಂಡಿದ್ದಾರೆ.