ವಿಮಾನದಲ್ಲೂ ಇನ್ನು ವೈಫೈ


Team Udayavani, May 3, 2018, 12:00 AM IST

Air-India-Flight-900.jpg

ಹೊಸದಿಲ್ಲಿ: ಭಾರತದಲ್ಲಿನ್ನು ವಿಮಾನದಲ್ಲಿ ಸಂಚರಿಸುವಾಗ ಪ್ರಯಾಣಿಕರು ತಮ್ಮ ಮೊಬೈಲ್‌ ಗ‌ಳನ್ನು ಸುಮ್ಮನೆ ಜೇಬಿನಲ್ಲಿಟ್ಟುಕೊಳ್ಳಬೇಕಿಲ್ಲ. ಇತರ ದೇಶಗಳಲ್ಲಿ ಹಾರಾಡುವಾಗಿನಂತೆಯೇ ವೈಫೈ ಹಾಗೂ ಇಂಟರ್‌ ನೆಟ್‌ ಸೌಲಭ್ಯ ಭಾರತದಲ್ಲೂ ಸಿಗಲಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಕೇಂದ್ರ ಸರಕಾರದ ಟೆಲಿಕಾಂ ಆಯೋಗ ಸಮ್ಮತಿ ನೀಡಿದೆ.

ಮುಂದಿನ 3-4 ತಿಂಗಳಲ್ಲಿ ಈ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಟೆಲಿಕಾಂ ಕಂಪೆನಿಗಳು, ವಿಮಾನಯಾನ ಸಂಸ್ಥೆಗಳು ಇದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕಿರುತ್ತದೆ. ಅಷ್ಟೇ ಅಲ್ಲ, ಪ್ರಯಾಣಿಕರು ವೈಫೈಗಾಗಿ ಹೆಚ್ಚುವರಿ ವೆಚ್ಚವನ್ನೂ ತೆರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪದೇ ಪದೆ ವಿಮಾನ ಪ್ರಯಾಣ ಮಾಡುವವರಿಗೆ ಟೆಲಿಕಾಂ ಸಂಸ್ಥೆಗಳು ವಿಶೇಷ ಪ್ಯಾಕೇಜ್‌ ಗಳನ್ನೂ ಘೋಷಿಸಬಹುದಾಗಿದೆ.

ಈ ಸೌಲಭ್ಯವನ್ನು ವಿಮಾನಯಾನ ಸಂಸ್ಥೆ ಒದಗಿಸಿದರೆ ವಿಮಾನವು 3 ಸಾವಿರ ಮೀಟರ್‌ ಎತ್ತರಕ್ಕೆ ಏರುತ್ತಿದ್ದಂತೆಯೇ ಪ್ರಯಾಣಿಕರು ವೈಫೈಗೆ ಸಂಪರ್ಕ ಸಾಧಿಸಬಹುದಾಗಿದೆ. ಸಾಮಾನ್ಯವಾಗಿ ವಿಮಾನ 3 ಸಾವಿರ ಮೀಟರ್‌ ಏರಲು 4-5 ನಿಮಿಷ ಬೇಕು. ಅಷ್ಟೇ ಅಲ್ಲ, ವೈಫೈ ಮೂಲಕ ಇಂಟರ್‌ ನೆಟ್‌ ಕರೆಗಳನ್ನೂ ಮಾಡಬಹುದು.

ಅಂದರೆ ವಾಟ್ಸ್‌ಆ್ಯಪ್‌, ಸ್ಕೈಪ್‌ ಮೂಲಕ ಮೊಬೈಲ್‌ಗ‌ಳಿಗೆ ಕರೆ ಮಾಡಬಹುದಾಗಿದೆ. ಈ ವೇಳೆ ಮೊಬೈಲ್‌ನ ಏರ್‌ಪ್ಲೇನ್‌ ಮೋಡ್‌ ಆಫ್ ಮಾಡಬೇಕು. ಸಾಮಾನ್ಯವಾಗಿ ವಿಮಾನ ಪ್ರಯಾಣದಲ್ಲಿ ಮೊಬೈಲ್‌ ನ ಏರ್‌ ಪ್ಲೇನ್‌ ಮೋಡ್‌ ಆನ್‌ ಮಾಡಬೇಕಾಗುತ್ತದೆ. ಈ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸಲು ವಿಮಾನಯಾನ ಸಂಸ್ಥೆಗಳು ಭಾರೀ ವೆಚ್ಚ ಮಾಡಬೇಕಿದೆ ಎಂದು ಹೇಳಲಾಗಿದೆ. ಆದರೆ ಈ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಭಾರತೀಯ ಸಂಸ್ಥೆಗಳು ಪೈಪೋಟಿ ನೀಡಬಹುದಾಗಿದೆ. ವಿಶ್ವದ 30ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ಸದ್ಯ ಇಂಟರ್‌ನೆಟ್‌ ಹಾಗೂ ಕರೆಗಳ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸುತ್ತಿವೆ.

ಟೆಲಿಕಾಂ ಒಂಬುಡ್ಸ್‌ ಮನ್‌ ರಚನೆ
ಟೆಲಿಕಾಂ ಕಂಪೆನಿಗಳಿಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸಲು ಟೆಲಿಕಾಂ ಒಂಬುಡ್ಸ್‌ ಮನ್‌ ರಚನೆಗೂ ಟೆಲಿಕಾಂ ಆಯೋಗ ನಿರ್ಧರಿಸಿದೆ. ಇಲಾಖೆಗೆ ಪ್ರತಿ 3 ತಿಂಗಳಿಗೆ 1 ಕೋಟಿ ದೂರುಗಳು ಬರುತ್ತವೆ. ಹೀಗಾಗಿ ದೂರು ನಿರ್ವಹಣೆಗೆ ಹೆಚ್ಚುವರಿ ಅಧಿಕಾರ ಅಗತ್ಯವಿದೆ ಎಂದು ಟ್ರಾಯ್‌ ಆಗ್ರಹಿಸಿತ್ತು. ಶೀಘ್ರದಲ್ಲೇ ಟ್ರಾಯ್‌ ಕಾಯ್ದೆಗೆ ತಿದ್ದುಪಡಿ ತಂದು, ಒಂಬುಡ್ಸ್‌ ಮನ್‌ ಕಾರ್ಯನಿರ್ವಹಣೆಯ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತ್ಯೇಕ ಲೈಸೆನ್ಸ್‌ ನೀಡಲು ಕೇಂದ್ರ ನಿರ್ಧಾರ
ವಿಮಾನದಲ್ಲಿ ವೈಫೈ ಸೇವೆ ಒದಗಿಸುವುದಕ್ಕಾಗಿಯೇ ಸಂಸ್ಥೆಗಳಿಗೆ ಪ್ರತ್ಯೇಕ ಲೈಸೆನ್ಸನ್ನು ಸರಕಾರ ಒದಗಿಸಲಿದೆ. ಈ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ. ಈ ಸೇವಾ ಪೂರೈಕೆದಾರರಿಗೆ ವಾರ್ಷಿಕ 1 ರೂ. ಶುಲ್ಕ ವಿಧಿಸಲಾಗುತ್ತದೆ. ಇಂಟರ್ನೆಟ್‌ ದರವನ್ನು ಸರಕಾರ ನಿಯಂತ್ರಿಸುವುದಿಲ್ಲ.

ಈ ಸೌಲಭ್ಯ ದೇಶೀಯ ಪ್ರಯಾಣದಲ್ಲಿ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ, ವಿದೇಶಕ್ಕೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. 2-3 ಗಂಟೆಗಳ ಪ್ರಯಾಣದಲ್ಲಿ ವೈಫೈಗಾಗಿ 200 ರಿಂದ 300 ರೂ. ವೆಚ್ಚ ಮಾಡಲು ಜನರು ಇಷ್ಟಪಡುವುದಿಲ್ಲ.
– ಅಂಬರ್‌ ದುಬೆ, ಕೆಪಿಎಂಜಿ ಇಂಡಿಯಾ ಮುಖ್ಯಸ್ಥ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.