ಖಾಸಗಿ ಪ್ರಯೋಗಾಲಯಗಳಲ್ಲಿ 2,500 ರೂ. ನಿಗದಿ
Team Udayavani, Jun 20, 2020, 10:09 AM IST
ಮುಂಬಯಿ, ಜೂ. 19: ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಕೊರೊನಾ ಪರೀಕ್ಷೆಗಳಿಗೆ ರಾಜ್ಯ ಸರಕಾರ 2,200 ರೂ. ಮತ್ತು 2,800 ರೂ. ನಿಗದಿ ಪಡಿಸಿತ್ತು. ಆದರೆ ರೋಗಿ ಸ್ವತಃ ಪರೀಕ್ಷೆಗಾಗಿ ನೇರ ಪ್ರಯೋಗಾಲಯಕ್ಕೆ ಹೋಗುವವರಿಂದ ಪ್ರಯೋಗಾಲಯವು 2800 ರೂ. ತೆಗೆದುಕೊಳ್ಳುವ ಬದಲು 2,500 ರೂ. ಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಟೋಪೆ ಹೇಳಿದ್ದಾರೆ.
ರಾಜ್ಯ ಸರಕಾರ ಕೆಲವು ದಿನಗಳ ಹಿಂದೆ ಕೋವಿಡ್ ಪರೀಕ್ಷೆಗಳ ದರವನ್ನು ನಿಗದಿಪಡಿಸಿತ್ತು. ಪ್ರಯೋಗಾಲಯ, ಆಸ್ಪತ್ರೆಯಿಂದ ರೋಗಿಯ ಸ್ವ್ಯಾಬ್ ತೆಗೆದುಕೊಳ್ಳಲು 2,200 ರೂ. ಮತ್ತು ರೋಗಿಯ ಮನೆಗೆ ಹೋಗಿ ಪರೀಕ್ಷೆಗೆ ಸ್ವ್ಯಾಬ್ ತೆಗೆದುಕೊಳ್ಳಲು 2,500 ರೂ. ಪಡೆಯುವಂತೆ ದರ ನಿಗದಿ ಪಡಿಸಿತ್ತು. ಆದರೆ ಕೆಲವು ಸಂದರ್ಭಗಳಲ್ಲಿ, ರೋಗಿಗಳು ಸ್ವತಃ ಪರೀಕ್ಷೆಗಾಗಿ ನೇರ ಪ್ರಯೋಗಾಲಯಕ್ಕೆ ಹೋಗುತ್ತಾರೆ. ಪ್ರಯೋಗಾಲವು ಪರೀಕ್ಷೆಗಾಗಿ ಅವರಿಂದ 2,800 ರೂ. ಪಡೆಯುತ್ತದೆ. ವಾಸ್ತವಿಕವಾಗಿ ರೋಗಿಯು ಸ್ವತಃ ನೇರ ಹೋಗುವುದರಿಂದ ಪ್ರಯೋಗಾಲಯಕ್ಕೆ ಪಿಪಿಇ ಕಿಟ್ನ ವೆಚ್ಚ ಮತ್ತು ಸಾರಿಗೆ ವೆಚ್ಚ ಬರುವುದಿಲ್ಲ. ಆ ಸಂದರ್ಭದಲ್ಲಿ ಪ್ರಯೋಗಾಲಯವು ರೋಗಿಗಳಿಂದ 2,500 ರೂ.ಗಳನ್ನು ಪಡೆಯಬೇಕು ಎಂದು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು ರೂ . 2,200ರಿಂದ 2,800 ರೂ.ಗಳ ನಡುವೆ ಒಂದು ಹಂತವಾಗಿ 2,500 ರೂಗಳನ್ನು ನಿಗದಿಪಡಿಸಿದೆ ಎಂದು ರಾಜೇಶ್ ಟೋಪೆ ಮಾಹಿತಿ ನೀಡಿದ್ದಾರೆ.
ಮುಂಬಯಿ ಜನತೆಗೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಲಭ್ಯವಾಗಲಿದೆ. ಪ್ರತಿ ವಾರ್ಡ್ ನಲ್ಲಿ ಆ್ಯಂಬುಲೆನ್ಸ್ಗಳು ಲಭ್ಯವಾಗುವಂತೆ ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ 500 ಆ್ಯಂಬುಲೆನ್ಸ್ ಗಳು ಲಭ್ಯವಿದ್ದು, ಮಹೀಂದ್ರಾ ಗ್ರೂಪ್ನಿಂದ 50 ಆ್ಯಂಬುಲೆನ್ಸ್ಗಳನ್ನು ಖರೀದಿಸಲಾಗಿದ್ದು, ಈ ವಾರದಲ್ಲಿ 150 ಆ್ಯಂಬುಲೆನ್ಸ್ಗಳು ಲಭ್ಯವಾಗಲಿವೆ. ಇದರ ಜತೆಗೆ ಮುಂಬಯಿ ಜನರ ಆರೋಗ್ಯ ಸೌಲಭ್ಯಕ್ಕೆ 650 ಆ್ಯಂಬುಲೆನ್ Õಗಳು ಲಭ್ಯವಿರುತ್ತವೆ. ನಾಗರಿಕರು ವಾರ್ಡ್ ನಲ್ಲಿರುವ ವಾರ್ ಕೊಠಡಿಯನ್ನು ಸಂಪರ್ಕಿಸಿ ಆ್ಯಂಬ್ಯುಲೆನ್ಸ್ ನೋಂದಾಯಿಸಿಕೊಳ್ಳಬೇಕು. ಈ ಸೇವೆ ನಾಗರಿಕರಿಗೆ ಉಚಿತವಾಗಿ ಲಭ್ಯವಿರುತ್ತದೆ ಎಂದು ಆರೋಗ್ಯ ಸಚಿವ ಟೋಪೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ