- Saturday 14 Dec 2019
ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ 28ನೇ ವಾರ್ಷಿಕ ಮಹೋತ್ಸವ
"ದೇವಾಲಯಗಳು ಧರ್ಮ ಬೋಧಕ ಕೇಂದ್ರಗಳಾಗಬೇಕು': ಸಾಂತಿಂಜ ಜನಾರ್ದನ ಭಟ್
Team Udayavani, Jun 16, 2019, 3:43 PM IST
ಮುಂಬಯಿ: ದೂರ ಹೋಗಿರುವ ಬಂಧುಗಳನ್ನು ಆಯಸ್ಕಾಂತದಂತೆ ಮನೆಗೆ ಕರೆದು ತಂದು ಮನುಷ್ಯ ಒಂಟಿಯಲ್ಲ ಸಮಾಜ ಜೀವಿ ಎಂಬ ಸತ್ಯವನ್ನು ಊರಿನ ಜಾತ್ರೆಗಳು ಸಾರುತ್ತವೆ. ಇದರಲ್ಲಿ ದೈವಿಕ ಆರಾಧನೆಯೊಂದಿಗೆ ಊರ ಪರವೂರ ಜನರ ಒಡನಾಟ ಸಿಗುತ್ತದೆ. ಸಹಬಾಳ್ವೆಯ ಆದರ್ಶ ಇರುವ ಉತ್ಸವಗಳು ಜನರನ್ನು ಒಗ್ಗೂಡಿಸಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದು ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾತಿಂಜ ಜನಾರ್ಧನ್ ಭಟ್ ಅವರು ಅಭಿಪ್ರಾಯಿಸಿದರು.
ಜೂ. 14ರಂದು ಮೀರಾರೋಡ್ ಪೂರ್ವದ ಮೀರಾ ಕೋ. ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್, ರಾಷ್ಟ್ರೀಯ ಹೆ¨ªಾರಿ ಸಮೀಪದ ಹೊಟೇಲ್ ಅಮರ್ ಪ್ಯಾಲೇಸ್ ಹಿಂದುಗಡೆಯಿರುವ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಇದರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 28ನೇ ವಾರ್ಷಿಕ ಮಹೋತ್ಸವದ ಧರ್ಮ ಸಂದೇಶದಲ್ಲಿ ಆಶೀರ್ವಚನ ನೀಡಿದ ಅವರು, ದೇವಾಲಯಗಳು ಧರ್ಮ ಭೋದಕ ಕೇಂದ್ರಗಳಾಗಬೇಕು. ಸಾಂಸ್ಕೃತಿಕ ಅನಾವರಣ, ವಿಭಿನ್ನ ಸಂಸ್ಕಾರಗಳ ಕೊಂಡುಕೊಳ್ಳುವಿಕೆ ಅಲ್ಲಿ ವ್ಯವಸ್ಥಿವಾಗಿ ಆಯೋಜಿಸಬೇಕು. ಎಲ್ಲರ ಸಹಕಾರ ಹಾಗೂ ಸಹಯೋಗದಿಂದ ನೆರವೇರುವ ಪೂಜೆ ಪುನಸ್ಕಾರಗಳು ಸ್ಥಳದ ಪಾವಿತ್ರೆÂಯನ್ನು ಹೆಚ್ಚುತ್ತದೆ ಎಂದರು.
ಸಂಸ್ಥೆಯ ಸ್ಥಾಪಕ ಕೃಷ್ಣ ಜಿ. ಶೆಟ್ಟಿ, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶಿಮಂತೂರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿ, ಪ್ರಧಾನ ಅರ್ಚಕ ಸಾಣೂರು ಸಾತಿಂಜ ಜನಾರ್ದನ್ ಭಟ್ ಅವರ ಮುಂದಾಳತ್ವದಲ್ಲಿ ವೇದಮೂರ್ತಿ ಕಾಪು ಕಲ್ಯಾ ರಜನೀಶ್ ತಂತ್ರಿ ಅವರ ನೇತೃತ್ವದಲ್ಲಿ, ಪ್ರಧಾನ ಆರ್ಚಕ ಸಾಂತಿಂಜ ಮಾಧವ ಭಟ್ ಅವರ ಪೌರೋಹಿತ್ಯದಲ್ಲಿಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಶ್ರೀ ಮಾಹಾಲಿಂಗೇಶ್ವರ ದೇವರಿಗೆ ನವಕ ಪ್ರಧಾನ ಅಭಿಷೇಕ, ನವಕ ಪ್ರಧಾನ ಹೋಮ, ದ್ವಾದಶಿ ನಾರಿಕೇಳ ಗಣಹೋಮ, ಶ್ರೀ ದುರ್ಗಾದೇವಿಗೆ ದುರ್ಗಾಹೋಮ, ಪ್ರಸನ್ನ ಪೂಜೆ, ಸಂಜೆ ಮಹಾ ರಂಗ ಪೂಜೆ, ಆನಂತರ ಕುಂಟಾಡಿ ಸುರೇಶ್ ಭಟ್ ಅವರಿಂದ ಶ್ರೀ ಮಹಾಲಿಂಗೇಶ್ವರ ದೇವರ ಬಲಿ, ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ದುರ್ಗೆ, ನವ ಗ್ರಹಗಳಿಗೆ ವಿಶೇಷ ಪೂಜೆ ನಡೆಯಿತು.
ವಿಜಯ ಶೆಟ್ಟಿ ದಂಪತಿ ಮತ್ತು ಮಹೇಶ್ ಶೆಟ್ಟಿ ಪೊಲ್ಯ ದಂಪತಿ ಅವರ ಸೇವಾರ್ಥ ಪ್ರಸಾದ ರೂಪದಲ್ಲಿ ಅನ್ನದಾನ ನೆರವೇರಿತು. ಗೌರಿ ಶಂಕರ ಕಾರಿಂಜ, ದೇವರಾಜ್ ಭಟ್, ರಾಘವೇಂದ್ರ ಉಪಾಧ್ಯಾಯ, ಅನಂತ ಭಟ್, ಶ್ರೀಶ ಭಟ್, ವಾಸುದೇವ ಭಟ್, ಶೀ ವತ್ಸ ಭಟ್ ಮತ್ತಿತ್ತರು ವೈದಿಕ ತತ್ವದಡಿ ಸಹಕರಿಸಿದರು. ಟ್ರಸ್ಟಿಗಳಾದ ಸುಂದರ ಶೆಟ್ಟಿಗಾರ್, ಅನಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿ ಕುರ್ಕಾಲ್, ಪ್ರಸನ್ನ ಶೆಟ್ಟಿ ಬೋಳ ಅವರು ಉಪಸ್ಥಿತರಿದ್ದರು. ಮೀರಾ ಸೊಸೈಟಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಮುದಾಯ ಸಂಘಟನೆಗಳ ಪದಾಧಿಕಾರಿಗಳು, ಕನ್ನಡೇತರು ಕಾರ್ಯ ಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವಿಕರಿಸಿದರು.
ಚಿತ್ರ-ವರದಿ : ರಮೇಶ ಅಮೀನ್
ಈ ವಿಭಾಗದಿಂದ ಇನ್ನಷ್ಟು
-
ಪುಣೆ, ಡಿ. 12: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ದತ್ತ ಜಯಂತಿ ಆಚರಣೆಯು ಡಿ. 11 ರಂದು ಪುಣೆ ಶ್ರೀ ಗುರುದೇವ...
-
ಮುಂಬಯಿ, ಡಿ. 11: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವು ಡಿ. 8ರಂದು ಸಂಜೆ ಸಾಂತಾಕ್ರೂಜ್ನ ಬಿಲ್ಲವರ ಭವನದ ಶ್ರೀ...
-
ಮುಂಬಯಿ, ಡಿ. 9: ಪ್ರಸ್ತುತ ದಿನಗಳಲ್ಲಿ ಸಮ್ಮಾನವನ್ನು ತೆಗೆದುಕೊಳ್ಳುವುದು ಬಹಳ ಕಷ್ಟ ಅನಿಸುತ್ತಿದೆ. ಆದರೂ ಈ ಗೌರವ ನಾಡೋಜ ಪ್ರಶಸ್ತಿ ಸಿಕ್ಕಿದಷ್ಟೇ ಗೌರವ ಸ್ವೀಕರಿಸಿದ...
-
ಮುಂಬಯಿ, ಡಿ. 8: ಕನ್ನಡ ಭಾಷೆ ಉಳಿಯಬೇಕು ಅದನ್ನು ಬೆಳೆಸಬೇಕು ಎಂಬುದು ರಾಜ್ಯೋತ್ಸವ ಆಚರಣೆಯ ದಿನ ಕೇವಲ ಭಾಷಣಕ್ಕೆ ಸೀಮಿತವಾಗಿರಬಾರದು. ಕನ್ನಡವನ್ನು ಉಳಿಸಿ-ಬೆಳೆಸುವ...
-
ಮುಂಬಯಿ, ಡಿ. 6: ಮನುಷ್ಯನಿಗೆ ಜೀವನದಲ್ಲಿ ಬಡತನ, ಶ್ರೀಮಂತಿಕೆ ಶಾಶ್ವತವಲ್ಲ. ಸತ್ಯ, ಧರ್ಮದಲ್ಲಿ ನಡೆದರೆ ಆತನ ದಾರಿ ಸುಗಮವಾಗಿ ಸಾಗುತ್ತದೆ ಎಂದು ಮುಂಬಯಿ ಅಗ್ಯಾನಿಕ್...
ಹೊಸ ಸೇರ್ಪಡೆ
-
ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾಪಡೆ...
-
ಹುಬ್ಬಳ್ಳಿ: ಹೆಚ್ಚಿನ ಪ್ರಮಾಣದಲ್ಲಿ ಆಹಾರ ತ್ಯಾಜ್ಯ ಉತ್ಪತ್ತಿ ಮಾಡುವ ಹೋಟೆಲ್ಗಳು ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನಾ ಘಟಕ ಹೊಂದಬೇಕು ಎನ್ನುವ ಮಹಾನಗರ...
-
ಚಿಕ್ಕಬಳ್ಳಾಪುರ: ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕ್ಷೇತ್ರ ಬಿಡುವ ಪ್ರಶ್ನೆ ಇಲ್ಲ. ಕ್ಷೇತ್ರದಲ್ಲಿಯೇ ಮನೆ ಮಾಡಿ ಪಕ್ಷ ಸಂಘಟನೆಯ ಕೆಲಸ ಮಾಡುವುದಾಗಿ ಜೆಡಿಎಸ್...
-
ಶಶಿಕಾಂತ ಬಂಬುಳಗೆ ಬೀದರ: "ಸ್ವಚ್ಛ ಮತ್ತು ಸುಂದರ' ಬೀದರ ನಗರಕ್ಕಾಗಿ ಪಣ ತೊಟ್ಟಿರುವ ನಗರಸಭೆ ಇಲ್ಲಿನ ರಸ್ತೆಬದಿಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ವಿನೂತನ...
-
ಶಿವಮೊಗ್ಗ: ಸಂಘಟನೆಯಿಂದಾಗಿ ಉಪ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗಳಿಸಿದ್ದೇವೆ. ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಎಂಬ ಭಿನ್ನಾಭಿಪ್ರಾಯವಿಲ್ಲ ಎಂದು ಸಚಿವ...