ಬೊರಿವಲಿ ಪಶ್ಚಿಮ ಶಾಖೆಯ 28ನೇ ಸ್ಥಾಪನ ದಿನಾಚರಣೆ
Team Udayavani, Apr 21, 2021, 11:17 AM IST
ಮುಂಬಯಿ: ಬೊರಿವಲಿಪಶ್ಚಿಮದ ಪ್ರೇಮ್ ನಗರ ನಂ. 6ರಲ್ಲಿರುವ ಭಾರತ್ ಬ್ಯಾಂಕ್ನ ಶಾಖೆಯಲ್ಲಿ 28ನೇ ಸ್ಥಾಪನ ದಿನಾಚರಣೆಯು ಎ. 15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ವರ್ಷಾಚರಣೆಯ ಅಂಗವಾಗಿ ಶೇಖರ್ ಭಟ್ ಅವರಿಂದ ಗಣಪತಿಹೋಮ, ಗುರುಪೂಜೆ ಜರಗಿತು.
ಈ ಸಂದರ್ಭ ಭಾರತ್ ಬ್ಯಾಂಕ್ನ ಡಿಜಿಎಂ ಜನಾರ್ದನ ಪೂಜಾರಿ, ಸೀನಿಯರ್ ಮ್ಯಾನೇಜರ್ ವಸಂತ್ ಸಾಲ್ಯಾನ್, ಶಾಖಾ ಮ್ಯಾನೇಜರ್ ಕಸ್ತೂರಿ ಅಮೀನ್, ಅಸಿಸ್ಟೆಂಟ್ ಮ್ಯಾನೇಜರ್ಗಳಾದ ಅರುಣ್ ಸುವರ್ಣ, ದಿನೇಶ್ ಪೂಜಾರಿ, ಜಿ. ಎಂ. ಕೋಟ್ಯಾನ್, ಮೋಹನ್ ಪೂಜಾರಿ ಉಪಸ್ಥಿತರಿದ್ದರು.ಬ್ಯಾಂಕ್ನ ಸಿಬಂದಿ ಶುಭಲತಾ, ಜಯಶ್ರೀ, ಸಂಧ್ಯಾ, ಪೂಜಾ, ಪಲ್ಲವಿ, ವಿದ್ಯಾ, ರಶ್ಮಿ, ಸ್ನೇಹಾ, ನಿಶಿತಾ, ಅನಿಶಾ, ಸಂಜನಾ, ತೇಜಸ್ವಿನಿ, ರಚನಾ, ಪ್ರಸನ್ನ ಬಂಗೇರ, ವಾಮನ್ ಸಾಲ್ಯಾನ್, ಹರೀಶ್ ಪೂಜಾರಿ, ಉದಯ್ ಕರ್ಕೇರ ಅವರು ಪಾಲ್ಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.ಕಾರ್ಯಕ್ರಮದಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಿತು.