ಆಹಾರ್ ಕಾರ್ಯಕಾರಿ ಸಮಿತಿ: 11ನೇ ಮಾಸಿಕ ಸಭೆ
Team Udayavani, Dec 6, 2017, 4:22 PM IST
ಮುಂಬಯಿ: ಆಹಾರ್ನ ಕಾರ್ಯಕಾರಿ ಸಮಿತಿಯ 11ನೇ ಮಾಸಿಕ ಸಭೆಯು ನ. 27 ರಂದು ಕುರ್ಲಾ ಪೂರ್ವದಲ್ಲಿರುವ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ವಲಯ ಆರರ ಪ್ರಾಯೋಜಕತ್ವದಲ್ಲಿ ಉಪಾಧ್ಯಕ್ಷ ಅಮರ್ ಎಸ್. ಶೆಟ್ಟಿ ಮತ್ತು ತಂಡದವರ ಆಯೋಜನೆಯಲ್ಲಿ ಜರಗಿತು.
ವಲಯ 11ರ ಉಪಾಧ್ಯಕ್ಷ ಅಮರ್ ಎಸ್. ಶೆಟ್ಟಿ ಅವರು ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಹಾರ್ನ ಅಧ್ಯಕ್ಷ ಆದರ್ಶ್ ಶೆಟ್ಟಿ ಅವರು, ನವೆಂಬರ್ನಲ್ಲಿ ನಿಯೋಗವು ಕೈಗೊಂಡಿರುವ ಕಾರ್ಯಕ್ರಮ ಹಾಗೂ ಅವುಗಳ ಬೆಳವಣಿಗೆಯನ್ನು ವಿವರಿಸಿ, ಕೇಂದ್ರ ಸರಕಾರವು ಜಿಎಸ್ಟಿ ಕೌನ್ಸಿಲ್ನ ಮೂಲಕ ಜಿಎಸ್ಟಿಯಲ್ಲಿ ಆದ ಕಡಿತವನ್ನು ಶ್ಲಾಘಿಸಿದರು. ನಮ್ಮ ಬೇಡಿಕೆ ಶೇ. 18ರಿಂದ ಶೇ. 12ಕ್ಕೆ ಇಳಿಸುವುದಾಗಿತ್ತು. ಜಿಎಸ್ಟಿ ಕೌನ್ಸಿಲ್ ಅದನ್ನು ಶೇ. 5ಕ್ಕೆ ಇಳಿಸಿದೆ. ಇದನ್ನು ಆಹಾರ್ ನಿಯೋಗವು ಮುಕ್ತವಾಗಿ ಸ್ವೀಕರಿಸಿದೆ. ನಿಜವಾದ ಲೆಕ್ಕಪತ್ರದೊಂದಿಗೆ ಗ್ರಾಹಕರಿಂದ ಶೇ. 5 ರಷ್ಟು ಜಿಎಸ್ಟಿ ಸಂಗ್ರಹಿಸಿ ಸಮಯಕ್ಕೆ ಸರಿಯಾಗಿ ಸರಕಾರಕ್ಕೆ ಪಾವತಿಸಿ. ನಾವೆಲ್ಲ ಕಳೆದುಕೊಂಡಿರುವ ವ್ಯಾಪಾರವನ್ನು ಮತ್ತೆ ಪಡೆಯಬೇಕು. ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸದೇ ಇದ್ದಲ್ಲಿ ತೆರಿಗೆ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಾಗಿ ಬರಬಹುದು. ಕೆಲವು ಹೊಟೇಲ್ಗಳಲ್ಲಿ ಜಿಎಸ್ಟಿ ನಂಬರ್ ಇಲ್ಲದೆಯೆ ಜಿಎಸ್ಟಿ ದರವನ್ನು ಲಗತ್ತಿಸುತ್ತಾರೆ. ಇದು ಖಂಡನೀಯ. ದಯವಿಟ್ಟು ಇದರಿಂದ ದೂರವಿರಿ. ಪ್ರತಿಯೊಬ್ಬ ಹೊಟೇಲಿಗರು ತಮ್ಮ ಜಿಎಸ್ಟಿ ನಂಬರ್ನ್ನು ಹೊಟೇಲಿನ ಪ್ರಮುಖ ಜಾಗದಲ್ಲಿ ಖಡ್ಡಾಯವಾಗಿ ಪ್ರದರ್ಶಿಸತಕ್ಕದ್ದು. ಆಹಾರ್ ನಿಯೋಗವು ರಾಜ್ಯ ವಿತ್ತ ಸಚಿವ ಸುಧೀರ್ ಮುಂಗತ್ತಿವಾರ್ ಹಾಗೂ ಸಂಸತ್ ಸಚಿವ ಗೋಪಾಲ್ ಶೆಟ್ಟಿ ಅವರನ್ನು ಭೇಟಿಯಾಗಿ, ಪುಷ್ಪಗುತ್ಛ ನೀಡಿ ಜಿಎಸ್ಟಿಯ ಕಡಿತಕ್ಕಾಗಿ ನಿಯೋಗವು ಕೃತಜ್ಞತೆ ಸಲ್ಲಿಸಿದೆ. ಹೈದ್ರಾಬಾದ್ ಉಚ್ಚ ನ್ಯಾಯಾಲಯದ ಎಂಆರ್ಪಿ ನಿರ್ಣಯದ ಬಗ್ಗೆ ಮಾಹಿತಿ ನೀಡಿದ ಅವರು, ಹೊಟೇಲ್ಗಳಲ್ಲಿ ಎಂಆರ್ಪಿಗಿಂತ ಅಧಿಕ ಚಾರ್ಜ್ ಮಾಡಬಹುದಾಗಿದೆ. ಆದರೆ ಪಾರ್ಸೆಲ್ಗಳಿಗೆ ಎಂಆರ್ಪಿಗಿಂತ ಹೆಚ್ಚಾಗಿ ಶುಲ್ಕ ವಿಧಿಸುವ ಹಾಗಿಲ್ಲ. ನಾಗಪುರ ಮುನ್ಸಿಪಾಲ್ ವೇಜಸ್ ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಲಾಗಿದೆ. ಘನತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ, ಆದ್ರì ಮತ್ತು ಶುಷ್ಕ ಕಸಗಳನ್ನು ಪ್ರತ್ಯೇಕವಾಗಿ ಬೇಪರ್ಡಿಸಿ ಮಹಾನಗರ ಪಾಲಿಕೆಗೆ ಕೊಡತಕ್ಕದ್ದು. ಘನತ್ಯಾಜ್ಯದ ಬಗ್ಗೆ ನಮ್ಮ ನಿಯೋಗವು ಹೊಸ ಪ್ರಸ್ತಾಪವೊಂದನ್ನು ಮುನ್ಸಿಪಾಲ್ ಕಮಿಷನರ್ಗೆ ಸಲ್ಲಿಸಲಾಗುವುದು ಎಂದು ನುಡಿದರು.
ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಸಲಹೆ ಗಾರರುಗಳಾದ ಸುಧಾಕರ ವೈ ಶೆಟ್ಟಿ ಅವರು, ಸಲಹೆ-ಸೂಚನೆಗಳನ್ನು ನೀಡಿ, ಆಹಾರ್ ಅಧ್ಯಕ್ಷ ಆದರ್ಶ್ ಶೆಟ್ಟಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ, ಕಳೆದ 3 ವರ್ಷಗಳ ಅವರ ಕಾರ್ಯಾವಧಿಯಲ್ಲಿ ಬಹ ಳಷ್ಟು ಅಭಿವೃದ್ಧಿಪರ ಕಾರ್ಯಗಳು ನಡೆದಿರುವುದು ಅಭಿನಂದನೀಯವಾಗಿದೆ ಎಂದರು.
ಆಹಾರ್ನ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸುನೀಲ್ ಶೆಟ್ಟಿ ಅವರು ಮಾತನಾಡಿ, ಡಿಸೆಂಬರ್ 21ರಂದು ನಡೆಯುವ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಎಲ್ಲರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು.
ಆಹಾರ್ನ ಉಪಾಧ್ಯಕ್ಷರುಗಳಾದ ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ್ ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುನೀಲ್ ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ರವೀಂದ್ರನಾಥ್ ನೀರೆ, ವಲಯ ಆರರ ಉಪಾಧ್ಯಕ್ಷ ಅಮರ್ ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್ ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ವಲಯ ಒಂಭತ್ತರ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಅವರು ತಮ್ಮ ತಮ್ಮ ವಲಯಗಳ ಸದಸ್ಯರ ಸೇರ್ಪಡೆ ಮತ್ತು ಸಾಧನೆಗಳನ್ನು ವಿವರಿಸಿದರು.
ಸಭೆಯಲ್ಲಿ ಪಾಲ್ಗೊಂಡ ವಿವಿಧ ಮಳಿಗೆಗಳ ಪ್ರಾಯೋಜಕರನ್ನು ಗೌರವ ಕಾರ್ಯದರ್ಶಿ ವಿಶ್ವಪಾಲ್ ಎಸ್. ಶೆಟ್ಟಿ ಅವರು ಪರಿಚಯಿಸಿದರೆ, ಅಧ್ಯಕ್ಷ ಆದರ್ಶ್ ಶೆಟ್ಟಿ ಅವರು ಅವರು ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಶೆಟ್ಟಿ ವಂದಿಸಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು