ಅಂಬರನಾಥ್ ಕರ್ನಾಟಕ ವೈಭವ ಸಂಸ್ಥೆ : ಕರ್ನಾಟಕ ರಾಜ್ಯೋತ್ಸವ
Team Udayavani, Dec 26, 2018, 4:51 PM IST
ಅಂಬರನಾಥ್: ಮಹಾರಾಷ್ಟ್ರದ ಮಣ್ಣಿನಲ್ಲಿ ಹುಟ್ಟಿ ಬೆಳೆದ ನಮ್ಮ ಮಕ್ಕಳಿಗೆ ನಮ್ಮ ಸಿರಿವಂತ ಕನ್ನಡ ನಾಡಿನ ಹಿರಿಮೆಗಳನ್ನು ಪರಿಚಯಿಸುವ ಮುಖಾಂತರ ಹೊರನಾಡಿನಲ್ಲಿಯೂ ಕನ್ನಡತನವನ್ನು ಉಳಿಸಿ ಬೆಳೆಸಬೇಕೆಂದು ಪ್ರದೇಶದ ಖ್ಯಾತ ಬಿಲ್ಡರ್ ಹಾಗೂ ಅಂಬರನಾಥ್ ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ಆರ್. ಬಿ. ಹೆಬ್ಬಳ್ಳಿ ನುಡಿದರು.
ಡಿ.21ರಂದು ಅಂಬರನಾಥ್ ಪಶ್ಚಿಮದ ಶಿವಂ ಮಂಗಲ ಕಾರ್ಯಾ ಲಯ ದಲ್ಲಿ ಕರ್ನಾಟಕ ವೈಭವ ಸಂಸ್ಥೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ಕೇವಲ ನವೆಂಬರ್ 1ಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡದ ಉತ್ಸವಗಳು ನಿತ್ಯ ನಿರಂತರವಾಗಿರಬೇಕೆಂದರು.
ಗೌರವ ಅತಿಥಿಯಾಗಿ ಆಗಮಿಸಿದ ಅಂಬರ್ನಾಥ್ನ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಯುವರಾಜ್ ಶೆಟ್ಟಿ, ಕನ್ನಡ ಭಾಷೆ ಒಂದು ಅಯಸ್ಕಾಂತವಿದ್ದಂತೆ ನಮ್ಮ ಈ ಸಿರಿವಂತ ಭಾಷೆ, ಸಂಸ್ಕೃತಿ ಹಾಗೂ ಕಲೆಗಳಿಗೆ ಪರಭಾಷಿಕರು ಮನಸೋತಿದ್ದಾರೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.
ಇನ್ನೋರ್ವ ಗೌರವ ಅತಿಥಿ ಸ್ವಾಭಿಮಾನ ಸಂಘಟನೆ ಶಹರ ಪ್ರಮುಖ ವಿಕಾಸ್ ಹೇಮರಾಜ್ ಸೋಮೇಶ್ವರ್ ಅವರು ಮಾತನಾಡಿ, ನಿಮ್ಮ ಮಕ್ಕಳು ಶಿವಾಜಿ ಮಹಾರಾಜ್ ಹಾಗೂ ಭಗತ್ಸಿಂಗ್ರಂತಹ ಮಹಾನ್ ವ್ಯಕ್ತಿಗಳಾಗಬೇಕಾದರೆ ಅವರನ್ನು ಮೊಬೈಲ್ನಿಂದ ದೂರವಿಡಿ. ಶಿಕ್ಷಕರು ಶಿಕ್ಷಣವನ್ನು ಶಾಲೆಯಲ್ಲಿ ಕಲಿಸುತ್ತಾರೆ ಆದರೆ ಸಂಸ್ಕಾರವನ್ನು ಮನೆಯಲ್ಲಿಯೇ ಕಲಿಸಬೇಕು. ಎಂದು ಹೇಳಿದರು.
ಶಿವಸೇನೆ ನಗರ ಪ್ರಮುಖ ಅರವಿಂದ್ ವಾಳೆಕರ್ ಹಾಗೂ ನಗರಾಧ್ಯಕ್ಷೆ ಮನೀಷಾ ವಾಳೆಕರ್ ಶಿವಾಜಿ ಹಾಗೂ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿ ಚಾಲನೆ ನೀಡಿದರು.
ವೇದಿಕೆಯಲ್ಲಿ ಇತರ ಗಣ್ಯರಾಗಿ ವಿಕಾಸ್ ಸೋಮೇಶ್ವರ, ಎಚ್.ಆರ್.ಚಲವಾದಿ, ನಿಖೀಲ್ ವಾಳೆಕರ್, ಧನಶ್ರೀ ವಾಳೆಕರ್, ವಿ.ಎಂ. ಖಾದಿ, ಬಸವಂತ ಪೂಜಾರಿ, ಚಿದಾನಂದ ಚಲವಾದಿ, ಎಂ.ಎಸ್. ಜಲದೆ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಆರ್. ಬಿ. ಹೆಬ್ಬಳ್ಳಿ ಸ್ವಾಗತಿಸಿದರೆ, ಸಹಕಾರ್ಯದರ್ಶಿ ಎಚ್.ಆರ್. ಚಲವಾದಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ವಿ. ಎಂ. ಖಾದಿ ಸಂಸ್ಥೆ ನಡೆದು ಬಂದ ದಾರಿ, ಯೋಚನೆ ಮತ್ತು ಯೋಜನೆಗಳನ್ನು ವಿವರಿಸಿದರು. ಎಸ್. ನಿಜಲಿಂಗಪ್ಪ ಕನ್ನಡ ಶಾಲೆಯ ಮಕ್ಕಳ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಕಲೆಯನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಶಿಕ್ಷಕರಾದ ಅಜಯ್ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ, ಶಶಿಕಾಂತ್ ಮಡಿವಾಳ ವಂದಿಸಿದರು. ಶಿಕ್ಷಕರಾದ ಕೆ.ವಿ. ಜಲದೆ, ಅನಿತಾ ರಾಜೊಳ್ಳಿ ಎಚ್. ಹೊನ್ನಳ್ಳಿ ಮತ್ತಿತರರು ಸಹಕರಿಸಿದರು.
ಚಿತ್ರ-ವರದಿ: ಗುರುರಾಜ್ ಪೋತನೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್