ಬರೋಡ ಗಾಯತ್ರಿ ಪರಿವಾರದಿಂದ ಕಾರ್ಮಿಕರಿಗೆ ನೆರವು ವಿತರಣೆ
Team Udayavani, May 17, 2021, 12:47 PM IST
ಮುಂಬಯಿ: ಕೋವಿಡ್ ಸಂಕಷ್ಟದ ದಿನಗಳಲ್ಲಿ ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ಕಂಗಾಲಾಗಿವೆ. ಅದರಲ್ಲೂ ಸಂಪಾದನೆಗೈದು ಸಂಸಾರ ನಡೆಸುತ್ತಿದ್ದವರಲ್ಲಿ ಕೆಲವು ಕಾರ್ಮಿಕರು ಕೊರೊನಾದಿಂದ ಸಾವನ್ನಪ್ಪಿದ್ದು, ಇಂತಹ ಕುಟುಂಬಗಳಿಗೆ ಗಾಯತ್ರಿ ಪರಿವಾರ ಬರೋಡದಿಂದ ಮೂರು, ನಾಲ್ಕು ತಿಂಗಳ ವರೆಗೆ ಬೇಕಾಗುವಷ್ಟು ಆಹಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆಯಲಾಯಿತು.
ಬರೊಡಾ ಮತ್ತು ಸುತ್ತಮುತ್ತಲಿನ ಸುಮಾರು 250 ಕುಟುಂಬ ಗಳಿಗೆ ಇದುವರೆಗೆ ಬರೊಡದಲ್ಲಿನ ಗಾಯತ್ರಿ ಪರಿವಾರ ಇಂತಹ ಸೇವಾ ಕಾರ್ಯದಲ್ಲಿ ನಿತ್ಯ ಕೈಜೋಡಿಸಿದ್ದು, ಅದೆಷ್ಟೋ ದಿನಕೂಲಿ ಕಾರ್ಮಿಕ ಪರಿವಾರಗಳಿಗೆ ಪ್ರಯೋಜನಕಾರಿಯಾಗಿದೆ.
ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರಸಿದ್ಧ ಗಾಯತ್ರಿ ಶಕ್ತಿ ಪೀಠ ದೇಗುಲದ ಪ್ರಮುಖ, ಗಾಯತ್ರಿ ಪರಿವಾರ ಬಂಧು, ಕೊಡುಗೈದಾನಿ ದಯಾನಂದ ಬೋಂಟ್ರಾ ಕಾರ್ಕಳ ತಿಳಿಸಿದ್ದಾರೆ. ಮಾತಾ ಗಾಯತ್ರಿ ಕೊರೊನಾ ಮಹಾಮಾರಿ ಸಾಂಕ್ರಾಮಿಕ ಸೋಂಕಿನಿಂದ ಮುಕ್ತಗೊಳಿಸಿ ದೇಶದ ಸರ್ವ ಕುಟುಂಬಗಳನ್ನು ಮತ್ತು ಎಲ್ಲರನ್ನೂ ಕಾಪಾಡಲಿ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ