ಆರ್ಥಿಕ ಸಂಕಷ್ಟದಲ್ಲಿ ಮೀರಾ ಭಾಯಂದರ್ ಮನಪಾ
Team Udayavani, May 28, 2021, 1:24 PM IST
ಭಾಯಂದರ್: ಕೊರೊನಾ ರೋಗವನ್ನು ತಡೆಗಟ್ಟಲು ಹಗಲು-ರಾತ್ರಿ ಪ್ರಯತ್ನಿಸುತ್ತಿರುವ ಮೀರಾ ಭಾಯಂದರ್ ಮಹಾನಗರ ಪಾಲಿಕೆಯು ಕಳೆದ 2 ತಿಂಗಳಲ್ಲಿ ಕೊರೊನಾ ರೋಗಿಗಳಿಗೆ ಅಗತ್ಯ ವಸ್ತುಗಳು ಹಾಗೂ ವಿವಿಧ ಯೋಜನೆಗಳಿಗಾಗಿ 6.23 ಕೋಟಿ ರೂ. ಖರ್ಚು ಮಾಡಿದ್ದ ಪರಿಣಾಮ ಬೊಕ್ಕಸ ಖಾಲಿಯಾಗಿದ್ದು, ಆರ್ಥಿಕ ಸಂಕಟಕ್ಕೆ ಒಳಗಾಗಿ ಸರಕಾರದ ಬಳಿ ನೆರವಿನ ಹಸ್ತ ಚಾಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಮೀರಾ ಭಾಯಂದರ್ ನಗರದಲ್ಲಿ ಕೊರೊನಾ ಹೆಚ್ಚು ವೇಗವಾಗಿ ಹರಡಿದೆ. ವರದಿಯ ಪ್ರಕಾರ ಮೀರಾ ಬಾಯಂದರ್ನಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 48,223ಕ್ಕೆ ತಲುಪಿದೆ, ಸಾವಿನ ಒಟ್ಟು ಸಂಖ್ಯೆ 1,248ಕ್ಕೆ ತಲುಪಿದೆ. ಕಳೆದ ಎರಡು ತಿಂಗಳಲ್ಲಿ 20,500 ಪ್ರಕರಣಗಳು ವರದಿಯಾಗಿದ್ದರೆ, 443 ಮಂದಿ ಪ್ರಾಣ ಕಳೆದುಕೊಂಡಿ¨ªಾರೆ. ನಗರದ ಸರಕಾರಿ ಆಸ್ಪತ್ರೆಗಳು ಸಹಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಪಡೆಯುವುದು ಕಷ್ಟಕರವಾಗಿದ್ದು, ರೋಗಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮನಪಾ ಕಠಿನ ನಿರ್ಬಂಧವನ್ನು ಜಾರಿಗೆ ತಂದಿದೆ. ಹೆಚ್ಚು ಹೆಚ್ಚು ರೋಗಿಗಳ ಆ್ಯಂಟಿಜನ್ ಪರೀಕ್ಷೆಗೂ ಒತ್ತು ನೀಡಲಾಗುತ್ತಿದೆ.
ಇದಕ್ಕಾಗಿ ಪುರಸಭೆ ಆಡಳಿತವು ಗೋಲ್ಡನ್ ನೆಸ್ಟ್, ಡೆಲ್ಟಾ ಮತ್ತು ಸಮೃದ್ಧಿ ಎಂಬ ಮೂರು ಕೋವಿಡ್ ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸಿದೆ. ಇದಲ್ಲದೆ ಪ್ರಮೋದ್ ಮಹಾಜನ್, ಮೀನಾ ತಾಯಿ ಠಾಕ್ರೆ ಮತ್ತು ಅಪ್ಪಾಸಾಹೇಬ್ ಧರ್ಮಾಧಿಕಾರಿ ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪಿಸಿದೆ. ಆದ್ದರಿಂದ ಆಡಳಿತವು ಈ ಆಸ್ಪತ್ರೆಯ ಆವಶ್ಯಕತೆಗಳನ್ನು ಪೂರೈಸುವಲ್ಲಿ ಒತ್ತು ನೀಡುತ್ತಿದೆ. ಇವುಗಳಲ್ಲಿ ಮುಖ್ಯವಾಗಿ ಆಹಾರ, ಔಷಧ, ಆಮ್ಲಜನಕ, ಹಾಸಿಗೆ ಮತ್ತು ಲಸಿಕೆ ಕೇಂದ್ರಗಳು ಸೇರಿವೆ.
ಒಂದೆಡೆ ನಿಗಮದ ಆರ್ಥಿಕ ಸಂಪನ್ಮೂಲಗಳು ಕ್ಷೀಣಿಸಿ ಹಣದ ಕೊರತೆಯಿದ್ದರೆ, ಮತ್ತೂಂದೆಡೆ ಕ್ರಮಗಳಿಗಾಗಿ 6.23 ಕೋಟಿ ರೂ.ಗಳ ವೆಚ್ಚದಿಂದಾಗಿ ಭಾರೀ ಆರ್ಥಿಕ ಬಿಕ್ಕಟ್ಟು ಉಂಟಾ ಗಿದೆ. ಆಮ್ಲಜನಕ ಮತ್ತು ಔಷಧಗಳ ಬೆಲೆ ಮೂರು ಪಟ್ಟು ಹೆಚ್ಚಿರುವುದರಿಂದ ಅದನ್ನು ಪೂರೈಸಲು ನೆರವು ಒದಗಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯ ಲೆಕ್ಕಪರಿಶೋಧಕ ಅಧಿಕಾರಿ ಶರದ್ ಬೆಲ್ವಾಟೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!