ಪಿಂಪ್ರಿ ಬಿಲ್ಲವ  ಸಂಘದ ವಾರ್ಷಿಕ ಮಹಾಸಭೆ, ಸ್ನೇಹ ಸಮ್ಮಿಲನ


Team Udayavani, Aug 8, 2018, 2:26 PM IST

0708mum02.jpg

ಪುಣೆ: ಇಂದು ನಮ್ಮ ಸಾಮಾಜಿಕ ಜೀವನದಲ್ಲಿ ವಿವಿಧ ರೀತಿಯಲ್ಲಿಯ ಸಮಾಜ  ಸೇವಾ ಕಾರ್ಯಗಳನ್ನು ನೋಡುತ್ತೇವೆ. ಅದು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಅಥವಾ ಅರೋಗ್ಯ ಸಂಬಂಧಿ ಸೇವೆಗಳಾಗಿರಲಿ,  ಅದು ನೇರವಾಗಿ ವ್ಯಕ್ತಿ ಅಥವಾ ಸಮೂಹಕ್ಕೆ ಸಿಗುವಂತಾಗಬೇಕು. ಈ ರೀತಿಯ ಸೇವಗಳಿಂದ ಸಮಾಜದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆೆ. ಇದು ಸೇವೆಯನ್ನು ನೀಡಿದ ವ್ಯಕ್ತಿ ಅಥವಾ ಸಂಸ್ಥೆಗೆ ತೃಪ್ತಿಯನ್ನು ತರುತ್ತದೆ. ಆದರೆ ಇಂದಿನ ದಿನಗಳಲ್ಲಿ ಪ್ರಚಾರಕ್ಕಾಗಿ, ಪ್ರಚಾರ ಬಯಸುವಂಥಹ ಸೇವೆಗಳನ್ನು ನಾವು ಕಾಣುತ್ತೇವೆ. ಇದು ಇಂದಿನ ನಾಗರಿಕ ಸಮಾಜದಲ್ಲಿ ಒಂದು ಕೆಟ್ಟ ರೀತಿಯ ಸಂದೇಶವನ್ನು ನೀಡುತ್ತಿದೆ. ನಾವು ಮಾಡುವ ಯಾವುದೇ ರೀತಿಯ ಸೇವೆಗಳು ನಿಸ್ವಾರ್ಥ ಮನೋಭಾವದಿಂದ ಕೂಡಿ ಪ್ರಚಾರ ಬಯಸದೆ ಇದ್ದಾಗ ಆ ಸೇವೆಯು ಶ್ರೇಷ್ಠವಾಗಬಹುದು ಎಂದು    ತುಳು ಜಾನಪದ ವಿದ್ವಾಂಸ ಪ್ರೊ|  ಡಾ| ಗಣೇಶ್‌ ಅಮೀನ್‌ ಸಂಕಮಾರ್‌  ಹೇಳಿದರು.
ಭೋಸ್ರಿಯ ಅಂಕುಶ್‌ ರಾವ್‌ ಲಾಂಡೆY ಸಭಾ  ಭವನದಲ್ಲಿ ನಡೆದ  ಬಿಲ್ಲವ ಸಂಘ,  ಬ್ರಹ್ಮಶ್ರೀ ನಾರಯಣ ಗುರು ಸೇವಾ ಸಮಿತಿ  ಪಿಂಪ್ರಿ  ಇದರ ವಾರ್ಷಿಕ ಮಹಾಸಭೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಘಟನೆ ಮತ್ತು  ವ್ಯಕ್ತಿ ಬದುಕಿನ ಸಂಬಂಧ, ವ್ಯಕ್ತಿ ವ್ಯಕ್ತಿಯ ಸಂಬಂಧ. ವ್ಯಕ್ತಿ ಸಮಾಜದ ಸಂಬಂಧವನ್ನು ಅರಿತು ಕಾರ್ಯವನ್ನು ಯಾವ ಸಂಘವು ಮಾಡುವುದೋ ಅದು ಶ್ರೇಷ್ಠ ಸಂಘಟನೆಯಗಬಹುದು. ಸಂಘಟನೆಯಿಂದ ಸಮಾಜದ ಉದ್ಧಾರವಾಗಬಹುದು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ನಮಲ್ಲಿ ತೊಡಗಿಸಿಕೊಂಡರೆ ಸನ್ಮಾರ್ಗದ ದಾರಿಯಲ್ಲಿ ಮಾಡುವ ಸೇವೆಗಳು ಜನಮಾನಸವನ್ನು ತಲುಪುತ್ತವೆೆ. ಈ ನಿಟ್ಟಿನಲ್ಲಿ ಪಿಂಪ್ರಿ-ಬಿಲ್ಲವ ಸಂಘದ ಕಾರ್ಯ ಶ್ಲಾಘನೀಯ. ಯುವ ಜನತೆಯನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಮಾದರಿಯಾಗಿದೆ ಎಂದು ನುಡಿದರು.
ಪಿಂಪ್ರಿ ಬಿಲ್ಲವ ಸಂಘದ   ಅಧ್ಯಕ್ಷ ಎಸ್‌. ಟಿ. ಸಾಲ್ಯಾನ್‌ ಅವರ  ಅಧ್ಯಕ್ಷತೆಯಲ್ಲಿ  ಜರಗಿದ ಸ್ನೇಹಸಮ್ಮಿಲನ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ  ಸಂಘದ ಕಾರ್ಯದರ್ಶಿ ಶ್ಯಾಮ್‌ ಸುವರ್ಣ, ಉಪಾಧ್ಯಕ್ಷ ಸುರೇಶ್‌ ಪೂಜಾರಿ, ಕೋಶಾದಿಕಾರಿ ವಿಜಯ ಪೂಜಾರಿ, ಸಂಘದ ಪದಾಧಿಕಾರಿಗಳಾದ ಶೇಖರ್‌ ಜತ್ತನ್‌, ಉಮೇಶ್‌ ಪೂಜಾರಿ, ಶ್ರೀಧರ್‌ ಪೂಜಾರಿ, ಗಣೇಶ ಅಂಚನ್‌, ಸದಾಶಿವ ಕಲ್ಮಾಡಿ, ಕಿರಣ್‌ ಸುವರ್ಣ, ಸಂತೋಷ್‌ ಪೂಜಾರಿ, ರವಿ ಜತ್ತನ್‌, ಶರತ್‌  ಕೋಟ್ಯಾನ್‌, ರಘು ಪೂಜಾರಿ, ಪ್ರವೀಣ್‌ ಸಾಲ್ಯಾನ್‌, ಅರುಣ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸಂಗೀತಾ ಸುವರ್ಣ, ಮೀನಾಕ್ಷಿ ಪೂಜಾರಿ ಅವರು ಉಪಸ್ಥಿತರಿದ್ದರು.
ಅತಿಥಿಯಾಗಿ ಪುಣೆ ಬಿಲ್ಲವ ಸಂಘದ ಬೆಳ್ಳಿ ಮಹೋತ್ಸವದ  ಅಧ್ಯಕ್ಷ  ವಿಶ್ವನಾಥ್‌ ಪೂಜಾರಿ ಕಡ್ತಲ ಆಗಮಿಸಿದ್ದರು. ಸಭಾ  ಕಾರ್ಯಕ್ರಮದ ಈ ಸಂದರ್ಭದಲ್ಲಿ  ಸಂಘದ ವಾರ್ಷಿಕ ಕಾರ್ಯ  ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ಶ್ಯಾಮ್‌ ಸುವರ್ಣ ಸಭೆಯ ಮುಂದಿಟ್ಟರು. ಗತ ವರ್ಷದ ವಾರ್ಷಿಕ  ಖರ್ಚು-ವೆಚ್ಚಗಳ ಲೆಕ್ಕಪತ್ರಗಳನ್ನು  ಕೋಶಾಧಿಕಾರಿ  ವಿಜಯ್‌ ಪೂಜಾರಿ ಸಭೆಗೆ  ಮಂಡಿಸಿ ಅನುಮೋದನೆ ಪಡೆದರು.
ಈ ಸಂದರ್ಭದಲ್ಲಿ  2017-2018 ಸಾಲಿನ   ಎಸ್‌ಎಸ್‌ಸಿ, ಎಚ್‌ಎಸ್‌ಸಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಸಮಾಜದ ಕುಟುಂಬಗಳಿಗೆ  ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಘದ ವತಿಯಿಂದ ಧನ ಸಹಾಯವನ್ನು ಅತಿಥಿಗಳು ವಿತರಿಸಿದರು. ಸಹಾಯ ಧನದ ವರದಿಯನ್ನು ಕ್ರಮವಾಗಿ  ಸುಂದರ ಪೂಜಾರಿ, ಪ್ರವೀಣ್‌ ಅಂಚನ್‌, ನವೀನ್‌ ಕೋಟ್ಯಾನ್‌  ಓದಿದರು. ಸಂಘದ ಸುವರ್ಣ ಮಹೋತ್ಸವ ತಯಾರಿ ಹಾಗು ಮುಂದಿನ ಕಾರ್ಯ ಯೋಜನೆಗಳ ಪ್ರಸ್ತಾಪನೆಯನ್ನು  ಗಣೇಶ್‌ ಕೋಟ್ಯಾನ್‌ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಪಿಂಪ್ರಿ ಬಿಲ್ಲವ ಸಂಘದ ಯುವ ದಳವನ್ನು ಸಂಕಮಾರ್‌ ಅವರು ಉದ್ಘಾಟಿಸಿದರು. ಶೇಖರ್‌ ಚಿತ್ರಾಪು ಅವರು ಯುವ ದಳದ ಧ್ಯೇಯೋದ್ಧೇಗಳನ್ನು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯೆಯರು ಮತ್ತು ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯಮಯ ಕಾರ್ಯಕ್ರಮ ಮತ್ತು ನೃತ್ಯ ರೂಪಕ  ಪ್ರದರ್ಶನ ಗೊಂಡಿತು. ಪುಣೆ, ಪಿಂಪ್ರಿ, ಚಿಂಚಾÌಡ್‌ ಪರಿಸರದ  ಸಮಾಜದ ಬಾಂಧವರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೂತನ್‌ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್‌ ಪೂಜಾರಿ ವಂದಿಸಿದರು. 

 ಸಂಘದ ಗತ ವರ್ಷದ  ಎÇÉಾ  ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ  ನಡೆದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಇದು ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರ ಒಗ್ಗಟ್ಟಿನ ಪ್ರತೀಕವಾಗಿದೆ. ಮುಂದೆ ನಡೆಯಲಿರುವ  ಸಂಘದ ರಾಮ ನವಮಿಯ ಸುವರ್ಣ ಮಹೋತ್ಸವ ಆಚರಣೆ, ನಗರ ಭಜನೆ ಹಾಗು  ಸಂಘದ ಕಾರ್ಯ ಯೋಜನೆಗಳಿಗೆ ತಮ್ಮೆಲ್ಲರ ಸಹಕಾರ ಬಹು ಮುಖ್ಯವಾಗಿದೆ.  ನಮ್ಮ ಮನೆಯಂತೆ ನಮ್ಮ ಸಂಘ ಎಂಬ ನಿರ್ಧಾರವನ್ನು ಮಾಡಿ ನಾವೆಲ್ಲರೂ ಯಶಸ್ವಿ ಕಾರ್ಯಗಳಲ್ಲಿ  ಭಾಗಿಗಳಾಗೋಣ.
-ಎಸ್‌. ಟಿ. ಸಾಲ್ಯಾನ್‌, 
ಅಧ್ಯಕ್ಷರು, ಪಿಂಪ್ರಿ ಬಿಲ್ಲವ ಸಂಘ.

 ಪಿಂಪ್ರಿ-ಬಿಲ್ಲವ ಸಂಘದ ಕಾರ್ಯ ಚಟುವಟಿಕೆಗಳು ಮೆಚ್ಚುವಂಥದ್ದು. ಸಮಾಜದ ಎÇÉಾ ಜನರನ್ನು ಒಟ್ಟು ಗೂಡಿಸಿ, ಯುವಕ ಯುವತಿಯರಿಗೆ ತರಬೇತಿ ನೀಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಮಾದರಿಯಾಗಿದೆ. ಪುಣೆ ಬಿಲ್ಲವ ಸಂಘದ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಪಿಂಪ್ರಿಯ ಯುವಕ, ಯುವತಿಯರ ಕಾರ್ಯ ಶ್ಲಾಘನೀಯವಾಗಿತ್ತು. ಸಮಾಜದ ಯುವ ಜನತೆ ಶಿಕ್ಷಣದೊಂದಿಗೆ ದೈಹಿಕವಾಗಿ ಬಲಾಡ್ಯರಾಗಿ ನೈತಿಕತೆಯೊಂದಿಗೆ   ಜವಾಬ್ದಾರಿಯನ್ನು ವಹಿಸುವಂತಹ ಕಾರ್ಯದತ್ತ ಮುಂದಾಗಬೇಕು. ಇದರಿಂದ ಸಮಾಜದ ಅಭಿವೃದ್ಧಿಯಾಗಲು ಸಾಧ್ಯವಿದೆ 
-ವಿಶ್ವನಾಥ್‌ ಪೂಜಾರಿ ಕಡ್ತಲ, 
ಅಧ್ಯಕ್ಷರು, ಪುಣೆ ಬಿಲ್ಲವ ಸಂಘ ಬೆಳ್ಳಿ 
ಮಹೋತ್ಸವ ಸಮಿತಿ

ಚಿತ್ರ-ವರದಿ : ಹರೀಶ್‌ ಮೂಡಬಿದ್ರೆ ಪುಣೆ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.