ಒಪ್ಪಂದದ ಕುರಿತು ಕೇಂದ್ರದ ಸಲಹೆಗೆ ಮನವಿ: ದೇಸಾಯಿ
Team Udayavani, Jun 19, 2020, 9:12 AM IST
ಮುಂಬಯಿ, ಜೂ. 18: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ಮಧ್ಯೆ ಚೀನಾದ ಉತ್ಪಾದನಾ ಕಂಪೆನಿಗಳೊಂದಿಗೆ ಇತ್ತೀಚೆಗೆ ಮಾಡಿಕೊಂಡ ಒಪ್ಪಂದಗಳ ಬಗ್ಗೆ ರಾಜ್ಯ ಸರಕಾರ ಕೇಂದ್ರದ ಸಲಹೆ ಪಡೆಯಲಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ತಿಳಿಸಿದ್ದಾರೆ.
ಚೀನಾದ ಕಂಪೆನಿಗಳಿಂದ ಹೂಡಿಕೆ ನಡೆಸಲು ಕೇಂದ್ರ ನಿರ್ಧರಿಸಿದರೆ ರಾಜ್ಯವು ಕಂಟ್ರಿ ಫಸ್ಟ್ ವಿಧಾನವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ರಾಜ್ಯ ಸರಕಾರವು ಸೋಮವಾರ ಕೇಂದ್ರಕ್ಕೆ 12 ಜ್ಞಾಪಕ ಪತ್ರಗಳನ್ನು ಸಲ್ಲಿಸಿದ್ದು, ಅದರಲ್ಲಿ ಮೂರು ಗ್ರೇಟ್ ವಾಲ್ ಮೋಟಾರ್ಸ್ ಸೇರಿದಂತೆ ಚೀನಾದ ಕಂಪೆನಿಗಳೊಂದಿಗೆ ಒಟ್ಟಾರೆಯಾಗಿ ಮಹಾರಾಷ್ಟ್ರಕ್ಕೆ, 5,020 ಕೋ. ರೂ. ಹೂಡಿಕೆಯನ್ನು ಮಾಡಲಿದೆ. ಚೀನಾದ ಆಟೋಮೊಬೈಲ್ ಕಂಪೆನಿ, ಕೈಗಾರಿಕಾ ವಿಭಾಗದ ಅದಿಕಾರಿಗಳ ಪ್ರಕಾರ, ಪುಣೆಯ ತಲೆಗಾಂವ್ನಲ್ಲಿ, 3,770 ಕೋ. ರೂ. ಹೂಡಿಕೆ ಮಾಡುವ ನಿರೀಕ್ಷೆಯಿದೆ. ಅಲ್ಲದೆ ಎಂಜಿನಿಯರಿಂಗ್ ಸಂಸ್ಥೆ ಹೆಂಗ್ಲಿ ಸಹ ಪುಣೆ ಜಿಲ್ಲಡಯಲ್ಲಿ 1,000 ಕೋ. ರೂ. ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದರೆ, ಫೋಟಾನ್ ಚೀನಾ ಜತೆಗಿನ ಜಂಟಿ ಉದ್ಯಮವಾದ ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ಸ್ ತಲೇಗಾಂವ್ನಲ್ಲಿ 250 ಕೋ. ರೂ. ಹೂಡಿಕೆ ಮಾಡುವ ನಿರೀಕ್ಷೆಯಿದೆ.
ಚೀನಾದ ಹೂಡಿಕೆಗೆ ಅವಕಾಶ ನೀಡದಿರುವ ಬಗ್ಗೆ ಭಾರತ ಸರಕಾರ ಯಾವುದೇ ನೀತಿ ನಿರ್ಧಾರವನ್ನು ತೆಗೆದುಕೊಂಡರೆ, ಅದು ನಮಗೂ ಅನ್ವಯಿಸುತ್ತದೆ. ಇಲ್ಲಿಯವರೆಗೆ, ಚೀನಾದ ಕಂಪೆನಿಗಳಿಗೆ ಹೂಡಿಕೆ ಮಾಡಲು ಅವಕಾಶ ನೀಡಬಾರದು ಎಂದು ಹೇಳುವ ಯಾವುದೇ ನಿಷೇಧ ಅಥವಾ ಸಲಹೆಯಿಲ್ಲ, ಆದ್ದರಿಂದ ನಾವು ಒಪ್ಪಂದಗಳೊಂದಿಗೆ ಮುಂದೆ ಹೋಗಿದ್ದೇವೆ. ಮುಂದೆ ಹೇಗೆ ಹೋಗಬೇಕು ಎಂದು ನಾವು ಕೇಂದ್ರವನ್ನು ಕೇಳುತ್ತೇವೆ. ಅವರು ಹೇಳಿದಂತೆ ನಾವು ಮುಂದುವರಿಯುತ್ತೇವೆ. ನಮಗೆ ದೇಶ ಮೊದಲೇ ಹೊರತು ಹೂಡಿಕೆಯಲ್ಲ. ಇವು ದ್ವಿತೀಯಕವಾಗಿದೆ ಎಂದು ದೇಸಾಯಿ ಹೇಳಿದರು. ಜೂನ್ 15ರಂದು ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಪೂರ್ವ ಲಡಾಕ್ನಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ದೇಶದಲ್ಲಿ ಚೀನಾ ವಿರೋಧಿ ಭಾವನೆಗಳು ಹೆಚ್ಚಿರುವ ಸಮಯದಲ್ಲಿ ಇದಕ್ಕೆ ನಾವು ಆಸ್ಪಾಧ ನೀಡುವಂತಿಲ್ಲ. ಆದಾಗ್ಯೂ ಚೀನಾದ ಹೂಡಿಕೆಗೆ ಅವಕಾಶ ನೀಡುವುದಿಲ್ಲ ಎಂಬ ಅಧಿಕೃತ ನಿಲುವು ಇರುವುದಿಲ್ಲ ಎಂದು ಕೈಗಾರಿಕೆಗಳ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಯೋಜನೆಗಳ ಪ್ರಾರಂಭದಲ್ಲಿ ವಿಳಂಬವನ್ನು ನಿರೀಕ್ಷಿಸಲಾಗುತ್ತಿದೆ. ಇದು ಸರಕಾರ ನೀತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ಚೀನೀ ಹೂಡಿಕೆಗಳ ವಿರುದ್ಧ ಇಲ್ಲಿಯವರೆಗೆ ಯಾವುದೇ ಸಲಹೆಗಳು ಬಂದಿಲ್ಲ. ಒಪ್ಪಂದಗಳನ್ನು ಗೌರವಿಸಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಉದ್ವಿಗ್ನತೆ ಮುಂದುವರಿದರೆ ಅವರು ನಿಜವಾಗಿ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ