ತುಳುನಾಡ ತುಳುವೆರ್ ಕಲ್ಯಾಣ್ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ
Team Udayavani, Oct 22, 2019, 4:46 PM IST
ಮುಂಬಯಿ, ಅ. 21: ಪಾರನಾಕಾ ವಸಾಯಿಗಾಂವ್ ಶ್ರೀ ಸುಕೃತೀಂದ್ರ ಕಲಾ ಮಂದಿರ ಜಿಎಸ್ಬಿ ಸಮಾಜ ಸೇವಾ ಸಂಘ ಆಯೋಜಿಸಿದ ನಲ್ವತ್ತನೇ ವಾರ್ಷಿಕ ಶಾರದೋತ್ಸವದ ಸಂದರ್ಭದಲ್ಲಿ ಅ. 4ರಂದು ಸಂಜೆ ವಸಾಯಿರೋಡ್ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಅಮೇಯ್ ಗಣೇಶ್ ಪೈ ಇವರಿಂದ ಭಕ್ತಿ ಸುಧಾ ಕಾರ್ಯಕ್ರಮವು ಭಕ್ತಾದಿಗಳನ್ನು ರಂಜಿಸಿತು. ಅವರು ಮರಾಠಿ, ಕನ್ನಡ, ಕೊಂಕಣಿ ಮತ್ತು ಹಿಂದಿ ಭಜನೆಗಳನ್ನು ಹಾಡಿದರು. ಹಾರ್ಮೋನಿಯಂನಲ್ಲಿ ನಿಡ್ಡೋಡಿ ಗುರುಪ್ರಸಾದ್ ಪ್ರಭು, ತಬಲಾದಲ್ಲಿ ಅಕ್ಷಯ್ ಅನಿಲ್ ಪೈ, ಪಖ್ವಾಜ್ನಲ್ಲಿ ಗಣೇಶ್ ಪೈ, ತಾಳದಲ್ಲಿ ಅಶೋಕ್ ಶಿಂಧೆ ಸಹಕರಿಸಿದರು. ಸ್ಮಿತಾ ಗಣೇಶ್ ಪೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಕಲಾವಿದರನ್ನು ಜಿಎಸ್ಬಿ ಸಮಾಜ ಪಾರನಾಕಾ ವಸಾಯಿಗಾಂವ್ ಸಮಿತಿಯವರು ಸಮ್ಮಾನಿಸಿ ಗೌರವಿಸಿದರು. ಪಾರನಾಕಾ ಜಿಎಸ್ಬಿ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಸಾಯಿರೋಡ್ ಜಿಎಸ್ಬಿ ಸಮಾಜ ಬಾಲಾಜಿ ಸೇವಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ