ಬಸವೇಶ್ವರ ಸಂಸ್ಥೆ ಮುಂಬಯಿ :ಮೇ 26ರಂದು ಬಸವ ಜಯಂತಿ
Team Udayavani, May 22, 2019, 4:07 PM IST
ಮುಂಬಯಿ: ಬಸವೇಶ್ವರ ತಾತ್ವಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮುಂಬಯಿ ಮೇ 26ರಂದು ಸಂಜೆ 5.30ಕ್ಕೆ 887ನೇ ಬಸವ ಜಯಂತಿಯನ್ನು ಸಂಸ್ಥೆಯ ಬಸವೇಶ್ವರ ಭವನ, ಕಂಪೌಂಡ್ನಲ್ಲಿ ಆಚರಿಸಲಿದೆ. ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಶ್ರೀ| ಮಾ. ಪ್ರಾ. ಸಿರಿ. ಪೂಜ್ಯ ಮಾತೆ ಬಸವೇಶ್ವರಿ ಇವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮವು ಜರಗಲಿದೆ.
ಮಹಾರಾಷ್ಟ್ರ ರಾಜ್ಯದ ಅಬಾಸಾಹೇಬ್ ಕಾಕಡೆ ಕಾಲೇಜ್ ಆಫ್ ಫಾರ್ಮಸಿ, ಬೋಡೆಗಾಂವ್ ಇದರ ಪ್ರಾಂಶುಪಾಲ ಡಾ| ಶಶಿಕಾಂತ ಪಟ್ಟಣ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ 10ನೇ, 12ನೇ, ಪದವೀಧರ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಸುತ್ತೂರು ಶಿವರಾತ್ರೇಶ್ವರ ವಿದ್ಯಾರ್ಥಿ ವೇತನ ನೀಡಲಾಗುವುದು. ಸದಸ್ಯ ಬಾಂಧವರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಸ್ಥೆಯ ಗೌರವ ಅಧ್ಯಕ್ಷರಾದ ಬಿ. ಜಿ. ಬಿರಾದರ, ಗೌರವ ಕಾರ್ಯದರ್ಶಿ ಎನ್. ಬಿ. ಸವಾಲಸಂಗ, ಗೌರವ ಕೋಶಾಧಿಕಾರಿ ಆರ್. ಎಸ್. ಹಿರೇಮಠ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು