ಕಾಂದಿವಲಿ ಪೂರ್ವ ಶಾಖೆ: ಸಂಸ್ಥಾಪನ ದಿನಾಚರಣೆ
ಭಾರತ್ ಕೋ-ಆಪರೇಟಿವ್ ಬ್ಯಾಂಕ್
Team Udayavani, Aug 28, 2021, 1:25 PM IST
ಕಾಂದಿವಲಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಭಾರತ್ ಕೋ-ಆಪರೇಟಿವ್ ಬ್ಯಾಂಕ್ನ 43ನೇ ಸಂಸ್ಥಾಪನ ದಿನಾಚರಣೆಯು ಆ. 21ರಂದು ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ನಲ್ಲಿರುವ ಭಾರತ್ ಬ್ಯಾಂಕ್ ಶಾಖೆಯಲ್ಲಿ ಸರಳ ರೀತಿಯಲ್ಲಿ ಜರಗಿತು.
ಗ್ರಾಹಕರಾದ ಉದ್ಯಮಿ, ಸಮಾಜ ಸೇವಕ ಬಾಬು ಸೀನ ಶೆಟ್ಟಿ ಕೇಕ್ ಕತ್ತರಿಸುವ ಮೂಲಕ ಸಂಸ್ಥಾಪನ ದಿನಾಚರಣೆಗೆ ಚಾಲನೆ ನೀಡಿದರೆ, ಯೋಗೇಶ್ ಭೋಜ ಶೆಟ್ಟಿ,ಮಧು ಬಾಳ ಅಗರ್ವಾಲ್ ಹಾಗೂ ಹಿರಿಯ ಗ್ರಾಹಕರು ದೀಪ ಪ್ರಜ್ವಲಿಸಿದರು.
ಶಾಖಾ ಪ್ರಬಂಧಕ ಹೇಮಂತ್ ಆರ್. ಅಗರ್ವಾಲ್ ಮಾತನಾಡಿ, ಬಿಲ್ಲವ ಸಮಾಜದ ಹಿರಿಯರು ನಮ್ಮ ಸಮಾಜಕ್ಕೆ ಒಂದು ಬ್ಯಾಂಕ್ ಬೇಕು ಎಂಬ ದೂರದೃಷ್ಟಿಯಿಂದ 1978ರಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಯೋಜಕತ್ವದಲ್ಲಿ ಭಾರತ್ ಬ್ಯಾಂಕನ್ನು ಸ್ಥಾಪಿಸಿದರು.
ಪ್ರಾರಂಭದ ಕಾರ್ಯಧ್ಯಕ್ಷರಾಗಿ ವರದ್ ಉಳ್ಳಾಲ್, ಬಳಿಕ ಎನ್. ಎಲ್. ಸುವರ್ಣ ಅವರು ಬ್ಯಾಂಕ್ ಅನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಬಳಿಕ ಜಯ ಸಿ. ಸುವರ್ಣರ ಕಾರ್ಯಾಧ್ಯಕ್ಷತೆಯಲ್ಲಿ ಭಾರತ್ ಬ್ಯಾಂಕ್ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿತು. ಪ್ರಸ್ತುತ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹಳಷ್ಟು ಅನುಭವ ಹೊಂದಿದವರು. ಹೊಸ ಹೊಸ ಯೋಜನೆಗಳಿಂದ ಭಾರತ್ ಬ್ಯಾಂಕ್ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದೆ ಎಂದರು.
ಇದನ್ನೂ ಓದಿ:ಮಹದಾಯಿ ಹಾಗೂ ಮೇಕೆದಾಟು ಯೋಜನೆ ಶೀಘ್ರದಲ್ಲಿ ಆರಂಭ: ಸಿಎಂ ಬೊಮ್ಮಾಯಿ
ಉಪ ಪ್ರಬಂಧಕರಾದ ಶಾರದಾ ಬೋಂಟ್ರ, ಅಧಿಕಾರಿಗಳಾದ ಅಶ್ವತ್ಥ್ ಪೂಜಾರಿ, ಶ್ವೇತಾ ಸಾಲ್ಯಾನ್, ಬಬಿತಾ ಕೋಟ್ಯಾನ್, ದೀಪಿಕಾ ಬಂಗೇರ, ಸವಿತಾ ಸುವರ್ಣ, ನಿಶಿತ್ವ ಕೋಟ್ಯಾನ್, ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ