ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಕಚೇರಿ: ಗುರುಜಯಂತಿ ಆಚರಣೆ
Team Udayavani, Sep 11, 2021, 1:00 PM IST
ಮೀರಾರೋಡ್: ಮೀರಾರೋಡ್ ಪೂರ್ವದ ಶಾಂತಿ ನಗರ ಸೆಕ್ಟರ್ 5ರ, ಸಿ-57 ಕವಿತಾ ಕಟ್ಟಡದಲ್ಲಿರುವ ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾ ಯಣಗುರುಗಳ 167ನೇ ಜಯಂತ್ಯು ತ್ಸವವು ಸೆ. 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಾಧ್ಯಕ್ಷ ವಿಶ್ವನಾಥ ಎಂ. ಸಾಲ್ಯಾನ್ ಅವರು ದೀಪ ಪ್ರಜ್ವಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಮಾನವೀಯ ಮೌಲ್ಯಗಳ ಅಡಿಯಲ್ಲಿ ವೈಜ್ಞಾನಿಕ ಆಧ್ಯಾತ್ಮಿಕ ತಳಹದಿಯ ಮೇಲೆ ಮಾನವ ಸಮಾಜವನ್ನು ಉದ್ಧರಿಸಿದವರು. ಅಂದು ಅವರು ಹಚ್ಚಿದ ಹಣತೆಯ ದೀಪ ಇಂದಿಗೂ ಮಾರ್ಗದರ್ಶನ ನೀಡುವ ದಾರಿದೀಪವಾಗಿದೆ. ಮನುಕುಲದ ಶತ್ರುಗಳಾದ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಶೋಷಿತರ ಬದುಕಿನ ಬವಣೆಯನ್ನು ನೀಗಿಸಿದ ಅವರು ಮಹಾನ್ ಜ್ಞಾನ ಜ್ಯೋತಿ ಸ್ವರೂಪರಾಗಿದ್ದಾರೆ. ಅವರ ಪಾಲನೆಯೊಂದಿಗೆ ನಾವೆಲ್ಲರೂ ಕೂಡಿ ಬಾಳ್ಳೋಣ ಎಂದರು.
ಸಮಿತಿಯ ಪ್ರಧಾನ ಆರ್ಚಕ ಶ್ಯಾಮ್ ಅಮೀನ್ ಪೌರೋಹಿತ್ಯದಲ್ಲಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನೆರವೇರಿತು. ಸಮಿತಿ ಸದಸ್ಯರಿಂದ ಗುರು ಸ್ತೋತ್ರ, ಭಜನೆ, ಓಂ ನಮೋ ನಾರಾಯಣಾ ನಮಃ ಶಿವಾಯ ಜಪ ಯಜ್ಞ ನಡೆಯಿತು. ಕಾರ್ಯದರ್ಶಿ ಎನ್. ಪಿ. ಕೋಟ್ಯಾನ್ ಅಸೋಸಿಯೇಶನ್ ಕಾರ್ಯಯೋಜನೆ ಬಗ್ಗೆ ವಿವರಿಸಿದರು. ಉಪಕಾರ್ಯಾಧ್ಯಕ್ಷ ಸುಭಾಸ್ ಎಂ. ಕರ್ಕೇರ ಸೇವಾರ್ಥಿಗಳ ಯಾದಿ ವಾಚಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ನದಾನದ ಸೇವಾರ್ಥಿಗಳಾದ ಸಂಜೀವಿ ಶಂಕರ ಪೂಜಾರಿ ಮತ್ತು ಸುಲೋಚನಾ ವಿಶ್ವನಾಥ್ ಮಾಬೀಯಾನ್ ಅವರನ್ನು ಮಹಾ ಪ್ರಸಾದವನ್ನಿತ್ತು ಗೌರವಿಸಲಾಯಿತು.
ಇದನ್ನೂ ಓದಿ:ರೈಲ್ವೇ ನಿಲ್ದಾಣದಲ್ಲಿ ಮೀನುಗಳ ಮಸಾಜ್ : ಪ್ರಯಾಣಿಕರ ಪಾದಗಳಿಗೆ ಕಚಗುಳಿ!
ಮಂದಿರದ ಹೂವಿನ ಶೃಂಗಾರ, ಶಾಮಿಯಾನ ಮತ್ತು ಧ್ವನಿವರ್ಧಕದ ಸೇವಾರ್ಥಿ ಸುಭಾಶ್ಚಂದ್ರ ಎಂ. ಕರ್ಕೇರ, ತೆಂಗಿನಕಾಯಿ ಮತ್ತು ಕುಡಿಯುವ ನೀರಿನ ಸೇವಾರ್ಥಿ ಕರಾವಳಿ ಸೌಂಡ್ನ ಮಾಲಕ ದಿನೇಶ್ ಸುವರ್ಣ, ಹಣ್ಣು ಹಂಪಲಿನ ಸೇವಾರ್ಥಿ ಶೇಖರ ಪೂಜಾರಿ, ಡ್ರೈ ಫ್ರೂ ರ್ಟ್ಸ್ ನೀಡಿದ ಸೇವಾರ್ಥಿ ಸುಂದರ ಪೂಜಾರಿ, ಹಿಂಗಾರದ ಸೇವಾರ್ಥಿ ವಿಜಯ ಎನ್. ಅಮೀನ್, ಪ್ರಸಾದದ ಸೇವಾರ್ಥಿ ಮೀರಾರೋಡು ಗೋಲ್ಡ್ ಕಾಯಿನ್ ಹೊಟೇಲ್, ಲಡ್ಡುವಿನ ಸೇವಾರ್ಥಿ ಭೋಜ ಬಿ. ಸಾಲ್ಯಾನ್, ಹೂವಿನ ಅಲಂಕಾರಗೈದ ಸುರೇಶ್ ಕೋಟ್ಯಾನ್ ಹಾಗೂ ಬಾಲಾಜಿ ಕ್ಯಾಟರರ್ ಇದರ ಲೀಲಾಧರ ಕೆ. ಪೂಜಾರಿ ಮೊದಲಾದವರನ್ನು ಗುರು ಪ್ರಸಾದದೊಂದಿಗೆ ಗೌರವಿಸಲಾಯಿತು.
ಮೀರಾರೋಡು ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭೋಜ ಬಿ. ಸಾಲ್ಯಾನ್, ಗೌರವ ಕೋಶಾಧಿಕಾರಿ ಎಚ್. ಎಂ. ಪೂಜಾರಿ, ಜತೆ ಕೋಶಾಧಿಕಾರಿ ವಿಜಯ ಎನ್. ಅಮೀನ್, ಸದಸ್ಯರಾದ ಅಶೋಕ್ ಆರ್. ಸಾಲ್ಯಾನ್, ಸುಂದರಿ ಆರ್. ಕೋಟ್ಯಾನ್, ಲೀಲಾಧರ ಕೆ. ಪೂಜಾರಿ, ಜಿ. ಕೆ. ಕೆಂಚನಕೆರೆ, ದಿನೇಶ್ ಸುವರ್ಣ, ದಯಾನಂದ ಅಮೀನ್, ವಿಶ್ವನಾಥ ಮಾಬೀಯನ್, ಸಂಜೀವಿ ಎಸ್. ಪೂಜಾರಿ, ಶೋಭಾ ಎಚ್. ಪೂಜಾರಿ, ರಾಧಾ ಎಸ್. ಕೋಟ್ಯಾನ್, ಶಂಕರ ಎಲ್. ಪೂಜಾರಿ, ಇಂದಿರಾ ಸುವರ್ಣ, ಭಾರತಿ ಅಂಚನ್, ಶಾಂಭವಿ ಜಿ. ಸಾಲ್ಯಾನ್, ರವೀಂದ್ರ ಕರ್ಕೇರ, ಯಶೋದಾ ಎಸ್. ಕೋಟ್ಯಾನ್, ಲಕ್ಷ್ಮೀ ಕೆ. ಅಮೀನ್, ವಿಜೀ ತೆಂದ್ರ ಎ. ಸನಿಲ್, ಸದಾನಂದ ಸಾಲ್ಯಾನ್, ಲಕ್ಷ್ಮೀಕಾಂತ್ ಪೂಜಾರಿ, ಜೀವನ್ ಅಮೀನ್ ಸಹಕರಿಸಿದರು. ಕೇಂದ್ರ ಕಚೇರಿಯ ಉಪಾಧ್ಯಕ್ಷ ಶ್ರೀನಿವಾಸ ಕರ್ಕೇರ, ಪ್ರತಿನಿಧಿ ಮೋಹನ್ ಡಿ. ಪೂಜಾರಿ ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ