ಸಂತ ನಿರಂಕಾರಿ ಮಂಡಳ:ಮುಂಬಯಿ ಸಮಿತಿಯಿಂದ ರಕ್ತದಾನ ಶಿಬಿರ
Team Udayavani, Jun 28, 2019, 5:15 PM IST
ಮುಂಬಯಿ: ಸಂತ ನಿರಂಕಾರಿ ಮಂಡಳ ಮುಂಬಯಿ ವತಿಯಿಂದ ರಕ್ತದಾನ ಶಿಬಿರವು ಜೂ. 23ರಂದು ವರ್ಲಿಯಲ್ಲಿ ನಡೆಯಿತು. ಸಂತ ನಿರಂಕಾರಿ ಚಾರಿಟೇಬಲ್ ಫೌಂಡೇಷನ್ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ 178 ಶಿಬಿರಾರ್ಥಿಗಳು ರಕ್ತದಾನಗೈದರು. ಸಂತ ನಿರಂಕಾರಿ ಬ್ಲಿಡ್ ಬ್ಯಾಂಕ್ ವಿಲೇಪಾರ್ಲೆಯ ಸಿಬಂದಿಗಳು ಸಹಕರಿಸಿದರು. ಬ್ಲಿಡ್ ಬ್ಯಾಂಕ್ನ ಮುಖ್ಯಸ್ಥ ಮಾರುತಿ ಕಸಾರೆ ಅವರ ನೇತೃತ್ವದಲ್ಲಿ ರಕ್ತದಾನ ನಡೆಯಿತು. ಮುಂಬಯಿ ಮಹಾನಗರ ಪಾಲಿಕೆಯು ಹೆಚ್ಚುವರಿ ಮೇಯರ್ ಹೇಮಾಂಗಿ ವರ್ಲಿಕರ್ ಅವರು ಶಿಬಿರವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ವಲಯದ ಮುಖ್ಯಸ್ಥ ಭುಪೇಂದ್ರ ಚೌಗ್, ಕ್ಷೇತ್ರಿಯ ಸೇವಾ ದಳದ ಸಂಚಾಲಕ ಶಂಕರ್ ಸೋನಾವಣೆ, ಡಿ. ಕೆ. ಮೋಹಿತೆ, ಸೆಕ್ಟರ್ ಸಂಯೋಜಕ ಗೋಪಿನಾಥ್ ಬುಮುಗಡೆ, ನಾಮೆªàವ್ ಶಿಂಧೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯಕರ್ತರು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಶಿಬಿರದಲ್ಲಿ ಸ್ಥಾನೀಯ ರಾಜಕೀಯ ಧುರೀಣರು, ಸ್ಥಳೀಯ ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಶುಭಹಾರೈಸಿದರು. ಸಂತ ನಿರಂಕಾರಿ ಮಂಡಳದ ನಿತಿನ್ ಸರ್ದೇಸಾಯಿ, ಆಶೀಷ್ ಚೆಂಬುರ್ಕರ್, ಯಶವಂತ್ ಕಿಲೇದಾರ್, ನಿಶಿಕಾಂತ್ ಶಿಂಧೆ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…