ಇಂದಿನಿಂದ ಬೊಂಬಾಯಿಡ್‌ ತುಳುಪರ್ಬ-2018


Team Udayavani, Mar 29, 2018, 4:40 PM IST

2803mum09VijayaKumarShetty.jpg

ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ನೇತೃತ್ವದ ಕಲಾಜಗತ್ತು ಮುಂಬಯಿ ವತಿಯಿಂದ ಬೊಂಬಾಯಿಡ್‌ ತುಳು ಪರ್ಬ-2018 ಸಂಭ್ರಮವು ಮಾ. 29 ಮತ್ತು ಮಾ. 30 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿದೆ.

ತುಳು ಪರ್ಬ-2018 ಸಂಭ್ರಮಕ್ಕೆ ಮಾ. 29 ರಂದು ಮಧ್ಯಾಹ್ನ 1.30 ಕ್ಕೆ ಪುಣೆಯ ಉದ್ಯಮಿ, ಕಲಾಪೋಷಕ ಪ್ರವೀಣ್‌ ಶೆಟ್ಟಿ ಪುತ್ತೂರು ಇವರು ಚಾಲನೆ ನೀಡಲಿದ್ದಾರೆ. ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಇವರು ತಮ್ಮ ವಿಶೇಷ ಅಭಿನಯದ ಮುಖೇನ ಲಿಮ್ಕಾ ಬುಕ್‌ ಆಪ್‌ ರೆಕಾರ್ಡ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಈಗಾಗಲೇ ನಿರ್ಮಿಸಿದ್ದು, ಮಾತ್ರವಲ್ಲದೆ ರಂಗಭೂಮಿಯ ಸರದಾರನಾಗಿ ಕಲಾಜಗತ್ತು ಕಲಾ ಸಂಸ್ಥೆಯ ಮುಖೇನ ಕಳೆದ ನಾಲ್ಕು ದಶಕಗಳಿಂದ ವಿವಿಧ ಹಲವಾರು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿ ನಗರ, ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕಲಾ ಶ್ರೀಮಂತಿಕೆಯೊಂದಿಗೆ ತುಳುನಾಡ ಸಂಸ್ಕಾರ ಸಂಸ್ಕೃತಿಯ ಚಿತ್ರಣವನ್ನು ತನ್ನ ಅಮೋಘ ಪ್ರತಿಭೆಯ ಮುಖೇನ ಭಿತ್ತರಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ವರ್ಷ ತನ್ನ ನೂತನ ಪರಿಕಲ್ಪನೆಯೊಂದಿಗೆ ಬೊಂಬಾಯಿಡ್‌ ತುಳುಪರ್ಬ-2018 ಎಂಬ ವಿಭಿನ್ನ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮವನ್ನು ಆಯೋಜಿಸಿ ಕಲಾ ರಸಿಕರನ್ನು ರಂಜಿಸಲಿದ್ದಾರೆ. ಎರಡು ದಿನಗಳ ಸಂಭ್ರಮದಲ್ಲಿ ಮುಂಬಯಿಯ ಸುಮಾರು 500 ಕ್ಕೂ ಹೆಚ್ಚಿನ ಕಲಾವಿದರು ಒಂದೇ ವೇದಿಕೆಯಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಾನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಕೆ,  ಕಲಾಪೋಷಕರಿಗೆ, ಸಮಾಜಮುಖೀ ಚಿಂತಕರಿಗೆ ಸಮ್ಮಾನ, ಪುರಸ್ಕಾರಗಳನ್ನಿತ್ತು ಗೌರವಿಸಲಾಗುವುದು.

ನಾಲ್ಕು ವಿಭಿನ್ನ ನಾಟಕಗಳ ಪ್ರದರ್ಶನ 
ಸಂಭ್ರಮದಲ್ಲಿ ನಾಲ್ಕು ನಾಟಕ ತಂಡಗಳಿಂದ ವೈವಿಧ್ಯಮಯ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ. ಇತ್ತೀಚೆಗೆ ತವರೂರ ಹಾಗೂ ಮಹಾನಗರಾದ್ಯಂತ ಬಿಡುಗಡೆಗೊಂಡು ಮೆಚ್ಚುಗೆ ಗಳಿಸಿದ ಪತ್ತನಾಜೆ ತುಳು ಸಿನೇಮಾದ ನಿರ್ದೇಶಕ, ನಿರ್ಮಾಪಕರಾದ ವಿಜಯ ಕುಮಾರ್‌ ಶೆಟ್ಟಿ ನಿರ್ದೇಶನದಲ್ಲಿ ಕಲಾಜಗತ್ತು ಮುಂಬಯಿ ಕಲಾವಿದರಿಂದ ಪಗರಿದ ಮಂಚವು, ಮಾತ್ರವಲ್ಲದೆ 1983 ರಲ್ಲಿ ಬಂಟರ ಭವನದಲ್ಲಿ ಸುಮಾರು 10 ಪ್ರದರ್ಶನಗಳನ್ನು ಕಂಡ ವಿಜಯಕುಮಾರ್‌ ಶೆಟ್ಟಿ ಇವರು ರಚಿಸಿ, ನಿರ್ದೇಶಿಸಿರುವ ಈ ನಲ್ಕೆ ದಾಯೆ ನಾಟಕವು ಪ್ರಸ್ತುತ ಹರೀಶ್‌ ಶೆಟ್ಟಿ ಇವರ ನಿರ್ದೇಶನದಲ್ಲಿ ತುಳುಕೂಟ ಡೊಂಬಿವಲಿ ಇದರ ಕಲಾವಿದರ ಅಭಿನಯದಲ್ಲಿ ಪ್ರದರ್ಶನಗೊಳ್ಳಲಿದೆ.

ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ರವಿ ಕುಮಾರ್‌ ಕಡೆಕಾರು ರಚಿಸಿ, ಕರುಣಾಕರ ಕೆ. ಕಾಪು ಇವರ ನಿರ್ದೇಶನದಲ್ಲಿ ಪುಸೋìತ್ತಿಜ್ಜಿ ನಾಟಕವು ಪ್ರದರ್ಶನಗೊಳ್ಳಲಿದೆ. ಅಲ್ಲದೆ ವಿರಾಜ್‌ ನಂದಿಕೂರು ರಚಿಸಿ, ಮನೋಹರ್‌ ಶೆಟ್ಟಿ ನಂದಳಿಕೆ ನಿರ್ದೇಶನದ ಆಯಿನ ಆಂಡ್‌ ಬುಡ್‌ª ಬುಡ್ಲೆ ನಾಟಕವು ರಂಗಮಿಲನ ನಿರೆಕರೆ ಕಲಾವಿದರಿಂದ ಪ್ರದರ್ಶನ ಕಾಣಲಿದೆ. ಅಲ್ಲದೆ ನಗರದ ವಿವಿಧ ಭಜನ ಮಂಡಳಿಗೆ ಭಜನಾ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ತುಳುವ ಸಿರಿ ಪ್ರಶಸ್ತಿ ಪ್ರದಾನ 
ಸಮಾರಂಭದಲ್ಲಿ 2018 ನೇ ಸಾಲಿನ ತುಳುವ ಸಿರಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಮಾರಂಭದಲ್ಲಿ ಅತಿಥಿಗಳಾಗಿ ಬೊರಿವಲಿ ಸಂಸದ ಗೋಪಾಲ್‌ ಶೆಟ್ಟಿ, ರಾಜ್ಯ ಶಿಕ್ಷಣ ಸಚಿವ ವಿನೋದ್‌ ತಾಬ್ಡೆ, ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವೀಂದ್ರ ಚವಾಣ್‌, ಸಿನಿ ಆರ್ಟ್‌ ಯೂನಿಯನ್‌  ಇದರ ಅಧ್ಯಕ್ಷ ಗೋರಕ್ಷನಾಥ್‌ ಧೋತ್ರೆ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮುನಿಯಾಲ್‌ ಸಮಾಜ ಸೇವಕ, ರಾಜಕೀಯ ಧುರೀಣ ಉದಯ ಶೆಟ್ಟಿ ಮುನಿಯಾಲ್‌, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಬಂಟರ ಸಂಘ ಮುಂಬಯಿ ಟ್ರಸ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ರಂಜನಿ ಎಸ್‌. ಹೆಗ್ಡೆ, ಬಂಟರ ಸಂಘ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟÅ ಇದರ ಅಧ್ಯಕ್ಷ ಚಂದ್ರಶೇಖರ್‌ ಪಾಲೆತ್ತಾಡಿ, ಕೈಗಾರಿಕೋದ್ಯಮಿ ಪ್ರಕಾಶ್‌ ಭಟ್‌, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ, ಐಕಾನ್‌ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ ಕೈಲಾಶ್‌ ಶ್ರೀರಂಗ ಕಾಲೆ ಮೊದಲಾದವರು ಆಗಮಿಸಲಿದ್ದಾರೆ.

ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಬೊಂಬಾಯಿಡ್‌ ತುಳು ಪರ್ಬ-2018 ಜರಗಲಿದ್ದು, ಕಾರ್ಯಕ್ರಮಕ್ಕೆ ಕಲಾ ಜಗತ್ತು ಸಂಸ್ಥೆಯ ನಗರ, ದೇಶ ವಿದೇಶಗಳ  ಅಭಿಮಾನಿ ಬಳಗ ಹಾಗೂ ಕಲಾಪೋಷಕರ ಸಹಕಾರ, ಪ್ರೋತ್ಸಾಹದ ಅವಶ್ಯಕತೆಯಿದೆ. ಈ ಸಂದರ್ಭದಲ್ಲಿ ತುಳು ಸಾಹಿತಿಗಳು ಬರೆದ ಯಾವುದೇ ಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರದರ್ಶಿಸಬಹುದು. ಈ ಅಭೂತಪೂರ್ವ ಕಾರ್ಯ ಕ್ರಮಕ್ಕೆ ಮಹಾನಗರ ಕಲಾಭಿಮಾನಿ ಗಳೆಲ್ಲರೂ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾಜಗತ್ತು ಮುಂಬಯಿ ಇದರ ರೂವಾರಿ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಮತ್ತು ಸಂಸ್ಥೆಯ ಸರ್ವ ಸದಸ್ಯರು  ತಿಳಿಸಿದ್ದಾರೆ.

ಕಲಾಜಗತ್ತು ಮುಂಬಯಿ ಆಯೋಜನೆ 
ತುಳು ನಾಟಕ, ನಲಿಕೆ, ಭಜನೆ, ಆಟ, ಕೂಟ, ತುಳುವೆರೆ ಪೊರ್ಲು ಸಾಂಸ್ಕೃತಿಕ ಉತ್ಛಯ, ಬೊಂಬಾಯಿದ ಸುಮಾರ್‌ 500 ಕಲಾವಿದೆರ್‌ ಒಂಜೆ ಕೂಟೊಟು ಒಟ್ಟಾಪಿನ ಪೊರ್ಲು ಕಂಟ್‌ದ ಲೇಸ್‌. ಬೊಂಬಾಯಿದ ಬೇತೆ ಬೇತೆ ಕ್ಷೇತ್ರದ ಸಾಧಕೆರೆಗ್‌ ಪ್ರಶಸ್ತಿ-ಪುರಸ್ಕಾರ ಕೊರ್ಧು ಮಾನಾದಿಗೆ ಮಲ್ಪುನ ಮಲ್ಲ ಮನಸ್‌ನ ಎಡ್ಡೆ ಕಾರ್ಯಕ್ರಮ. ಪತ್ತನಾಜೆ ತುಳು ಸಿನೇಮಾದ ಪುಗಾರೆ¤ದ ನಿರ್ದೇಶಕೆ -ನಿರ್ಮಾಪಕೆ, ಲಿಮ್ಕಾ ಬುಕ್‌ ರಾಷ್ಟ್ರೀಯ ದಾಖಲೆದ ಮಹಾನ್‌ ಕಲಾವಿದೆ, ಕರ್ನಾಟಕ ರಾಜ್ಯೋತ್ಸವ 2008 ಪ್ರಶಸ್ತಿ ಪಡೆದಿನ ಕಲಾಜಗತ್ತು ಸಂಸ್ಥೆದ ಸಂಸ್ಥಾಪಕೆ ಡಾ| ತೋನ್ಸೆ ವಿಜಯಕುಮಾರ್‌ ಶೆಟ್ಟಿ ಮೆರೆನ ಪರಿಕಲ್ಪನೆ, ಆಯೋಜನೆದ ತುಳುಪರ್ಬ-2008. ಉಚಿತ ಪ್ರವೇಶ  ಉಂಡು.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.