ದಾವೂದ್ನನ್ನು ಭಾರತಕ್ಕೆ ಕರೆತನ್ನಿ; ಪ್ರಧಾನಿ ಮೋದಿಗೆ ರೋಹಿತ್ ಪವಾರ್ ಮನವಿ
Team Udayavani, Aug 27, 2020, 6:04 PM IST
ಪುಣೆ: ಭೂಗತ ಪಾತಕಿ, ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನದಿಂದ ಭಾರತಕ್ಕೆ ಮರಳಿ ಕರೆತರುವಂತೆ ಶರದ್ ಪವಾರ್ ಮತ್ತು ಅವರ ಮೊಮ್ಮಗ ರೋಹಿತ್ ಪವಾರ್ ಅವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ರೋಹಿತ್ ಪವಾರ್, ದಾವೂದ್ ಇಬ್ರಾಹಿಂ ವಾಸ್ತವವಾಗಿ ಕರಾಚಿಯ ಲ್ಲಿದ್ದಾನೆ ಎಂದು ಪಾಕಿಸ್ಥಾನ ಒಪ್ಪಿ ಕೊಂಡಿದೆ. ಎಷ್ಟು ಖರ್ಚಾದರೂ ಪರವಾಗಿಲ್ಲ. ಆತನನ್ನು ಭಾರತಕ್ಕೆ ಕರೆತಂದು ನ್ಯಾಯಾಂಗಕ್ಕೆ ಒಪ್ಪಿಸಿ ಕಠಿನ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.
1993ರ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಇಬ್ರಾಹಿಂ ಕರಾಚಿಯಲ್ಲಿ ಇರುವ ತಪ್ಪೊಪ್ಪಿಗೆಯನ್ನು ಪಾಕಿಸ್ಥಾನ ಅಲ್ಲಗಳೆದಿದೆ. ಡಿ ಕಂಪನಿಯ ರಿಂಗ್ ಲೀಡರ್ ತನ್ನ ದೇಶದಲ್ಲಿಲ್ಲ ಎಂದು ಅದು ಹೇಳಿದೆ. ಶನಿವಾರ ಸಂಜೆ ಪಾಕಿಸ್ಥಾನವು 88 ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಮತ್ತು ದಾವೂದ್ ಇಬ್ರಾಹಿಂ ಸೇರಿದಂತೆ ಆತನ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿಸಿತು. ಈ ಪಟ್ಟಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರನ್ನು ಸೇರಿಸುವ ಮೂಲಕ, ದಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ತನ್ನ ದೇಶದಲ್ಲಿ ವಾಸಿಸುತ್ತಿ¨ªಾನೆ ಎಂದು ಪಾಕಿಸ್ಥಾನ ಒಪ್ಪಿಕೊಂಡಿತ್ತು ಎಂದು ಪವಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು