ಬಂಟರ ಸಂಘ: “ಬಂಟರವಾಣಿ’ಯ ಅಂತರ್ ಶಾಲಾ-ಕಾಲೇಜು ಪ್ರತಿಭಾ ಸ್ಪರ್ಧೆ
Team Udayavani, Feb 29, 2020, 6:44 PM IST
ಮುಂಬಯಿ, ಫೆ. 28: ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿಯ ವಾರ್ಷಿಕ ಅಂತರ್ ಶಾಲಾ-ಕಾಲೇಜು ಪ್ರತಿಭಾ ಸ್ಪರ್ಧೆಯು ಫೆ. 22ರಂದು ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಜರಗಿತು.
ಸಂಜೆ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಮುಲುಂಡ್ ಆರ್. ಝಡ್ ಕಾಲೇಜಿನ ಸೌಂದರ್ಯಾ ಗೌಡ ಪ್ರಥಮ, ಥಾಣೆ ನವೋದಯ ಕನ್ನಡ ಜ್ಯೂನಿಯರ್ ಕಾಲೇಜಿನ ದಿವ್ಯಾ ಗೌಡ ದ್ವಿತೀಯ, ಮುಲುಂಡ್ ವಿಪಿಎಂ ಜ್ಯೂನಿಯರ್ ಕಾಲೇಜಿನ ಚೇತನ್ ಗೌಡ ತೃತೀಯ ಬಹುಮಾನ ಗಳಿಸಿದರು. ಭಾವಗೀತೆ ಸ್ಪರ್ಧೆಯಲ್ಲಿ ಯುಕೆಎಸ್ ಕಾಲೇಜು ಬಂಟರ ಸಂಘ ಕುರ್ಲಾ ಇದರ ಸನತ್ ಶೆಟ್ಟಿ ಪ್ರಥಮ, ಅಣ್ಣಲೀಲಾ ಕಾಲೇಜು ಬಂಟರ ಸಂಘ ಕುರ್ಲಾ ಇದರ ಚೈತ್ರೇಶ್ ಶೆಟ್ಟಿ ದ್ವಿತೀಯ, ಥಾಣೆ ನವೋದಯ ಕನ್ನಡ ಜ್ಯೂನಿಯರ್ ಕಾಲೇಜಿನ ದಿಶಾ ಶೆಟ್ಟಿ ತೃತೀಯ ಬಹುಮಾನ ಗಳಿಸಿದರು.
ಸಮೂಹ ಗೀತೆ ಸ್ಪರ್ಧೆಯಲ್ಲಿ ಮುಲುಂಡ್ ಆರ್ಝಡ್ ಕಾಲೇಜಿನ ಕೀರ್ತಿ ಶೆಟ್ಟಿ ಮತ್ತು ಬಳಗ ಪ್ರಥಮ, ಮುಲುಂಡ್ ವಿಪಿಎಂ ಜ್ಯೂನಿಯರ್ ಕಾಲೇಜಿನ ಭೂಮಿಕಾ ಶೆಟ್ಟಿ ಮತ್ತು ಬಳಗ ದ್ವಿತೀಯ, ಯುಕೆಎಸ್ ಕಾಲೇಜು ಬಂಟರ ಸಂಘ ಕುರ್ಲಾ ಇದರ ಸನತ್ ಶೆಟ್ಟಿ ಮತ್ತು ಬಳಗ ತೃತೀಯ ಬಹುಮಾನ ಪಡೆದರು.
ಬಂಟರ ಸಂಘದ ಸುವರ್ಣ ಮಹೋತ್ಸವ ಚಲಿತ ಫಲಕವನ್ನು ಮುಲುಂಡ್ನ ಆರ್ಝಡ್ ಕಾಲೇಜು ಪಡೆದರೆ, ಶ್ರೀಮತಿ ಸರೋಜಿನಿ ಜೆ. ಶೆಟ್ಟಿ ಚಲಿತ ಫಲಕವನ್ನು ಯುಕೆಎಸ್ ಕಾಲೇಜು ಬಂಟರ ಸಂಘ ಕುರ್ಲಾ ಮತ್ತು ಲತಾ ಪ್ರಭಾಕರ ಶೆಟ್ಟಿ ಚಲಿತ ಫಲಕವನ್ನು ಮುಲುಂಡ್ ವಿಪಿಎಂ ಜ್ಯೂನಿಯರ್ ಕಾಲೇಜು ಗಳಿಸಿತು.
ಅಂತರ್ಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಥಾಣೆ ನವೋದಯ ಹೈಸ್ಕೂಲ್ನ ಶ್ರಾವ್ಯಾ ಶೆಟ್ಟಿ ಪ್ರಥಮ, ಮುಲುಂಡ್ ವಿಪಿಎಂ ಶಾಲೆಯ ಅಕ್ಷತಾ ದ್ವಿತೀಯ, ಡೊಂಬಿವಲಿ ಮಂಜುನಾಥ ವಿದ್ಯಾಲಯದ ಸೊಮೇಶ್ ಕೋಮಿನಾರ್ ತೃತೀಯ ಬಹುಮಾನ ಗಳಿಸಿದರು. ಭಾವಗೀತೆ ಸ್ಪರ್ಧೆಯಲ್ಲಿ ಮಂಜುನಾಥ ವಿದ್ಯಾಲಯ ಡೊಂಬಿವಲಿಯ ರತನ್ ಪ್ರಭು ಪ್ರಥ ಮ, ಗುರುನಾರಾಯಣ ರಾತ್ರಿ ಶಾಲೆಯ ನಸೀಹಾ ಖಾನ್ ದ್ವಿತೀಯ, ಥಾಣೆ ನವೋದಯ ಹೈಸ್ಕೂಲ್ನ ತನು ಶೆಟ್ಟಿ ತೃತೀಯ ಬಹುಮಾನ ಪಡೆದರು.
ಸಮೂಹ ಗೀತೆ ಸ್ಪರ್ಧೆಯಲ್ಲಿ ಗುರುನಾರಾಯಣ ರಾತ್ರಿ ಶಾಲೆಯ ಲಕ್ಷ್ಮೀ ಮತ್ತು ಬಳಗ ಪ್ರಥಮ, ಥಾಣೆ ನವೋದಯ ಹೈಸ್ಕೂಲ್ನ ಧ್ಯಾನ್ ಶೆಟ್ಟಿ ಮತ್ತು ಬಳಗ ದ್ವಿತೀಯ, ಮುಲುಂಡ್ ವಿಪಿಎಂ ಹೈಸ್ಕೂಲ್ನ ರೇಷ್ಮಾ ಗುಡಿಕಾರ ಮತ್ತು ಬಳಗ ತೃತೀಯ ಬಹುಮಾನ ಪಡೆದರು. ಬಂಟರ ಸಂಘ ಸುವರ್ಣ ಮಹೋತ್ಸವ ಚಲಿತ ಫಲಕವನ್ನು ಥಾಣೆ ನವೋದಯ ಹೈಸ್ಕೂಲ್ ಪಡೆಯಿತು. ಶಾಂತಾ ವಿಠಲ್ ಶೆಟ್ಟಿ ಚಲಿತ ಫಲಕವನ್ನು ಗುರುನಾರಾಯಣ ಹೈಸ್ಕೂಲ್ ಮತ್ತು ಡಾ| ಸುನೀತಾ ಎಂ. ಶೆಟ್ಟಿ ಚಲಿತ ಫಲಕವನ್ನು ಮುಲುಂಡ್ ವಿಪಿಎಂ ಹೈಸ್ಕೂಲ್ ಪಡೆಯಿತು.
ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಮುಖ್ಯ ಅತಿಥಿಗಳಾದ ಮುಲುಂಡ್ ಬಂಟ್ಸ್ನ ಅಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿ, ಥಾಣೆ ಬಂಟ್ಸ್ನ ಅಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ, ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾ ರಾಮ ಬಿ. ಶೆಟ್ಟಿ, ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಸಂಘದ ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಉಪಾಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಬಂಟರವಾಣಿಯ ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ವಂದಿಸಿದರು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಬಂಟ ರವಾಣಿ ಸಂಪಾದಕ ಮಂಡಳಿಯ ಡಾ| ಸುನೀತಾ ಎಂ. ಶೆಟ್ಟಿ, ಲತಾ ಸಂತೋಷ್ ಶೆಟ್ಟಿ ಇವರು ಸ್ಪರ್ಧೆಯ ಮೇಲ್ವಿಚಾರಕರಾಗಿ ಸಹಕರಿಸಿದರು. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಜಯ ಎ. ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ನವೀನ್ ಶೆಟ್ಟಿ ಇನ್ನಬಾಳಿಕೆ, ರಮ್ಯಾ ಉದಯ್ ಶೆಟ್ಟಿ ಇವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು