ಸಾಹಿತ್ಯ ಬಳಗಕ್ಕೆ ಮಕ್ಕಳ ಧ್ವನಿ ಅರ್ಥವಾಗಿದೆ: ಶ್ರೀಕೃಷ್ಣ ಉಡುಪ

ಸಾಹಿತ್ಯ ಬಳಗ ಮುಂಬಯಿ: ವಾಶಿಯಲ್ಲಿ ಮಕ್ಕಳ ಪ್ರಥಮ ಸಮ್ಮೇಳನ

Team Udayavani, Aug 19, 2019, 5:12 PM IST

mumbai-tdy-2

ಮುಂಬಯಿ, ಆ. 18: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಪ್ರಸ್ತುತ ರಜತ ಮಹೋತ್ಸವದ ಹೊಸ್ತಿಲಲ್ಲಿರುವ ಸಾಹಿತ್ಯ ಬಳಗ ಮುಂಬಯಿ ಸಂಸ್ಥೆಯ ವತಿಯಿಂದ ನವಿಮುಂಬಯಿ ಕನ್ನಡ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಆ. 17ರಂದು ಅಪರಾಹ್ನ ವಾಶಿಯ ನವಿಮುಂಬಯಿ ಕನ್ನಡ ಸಂಘದ ಸಭಾಗೃಹದಲ್ಲಿ ಮಕ್ಕಳ ಪ್ರಥಮ ಸಮ್ಮೇಳನ ನಡೆಯಿತು.

ಜೀವಿಕಾ ವಿ. ಶೆಟ್ಟಿ ಪೇತ್ರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮ್ಮೆಳನವನ್ನು ಮಾ| ಶ್ರೀಕೃಷ್ಣ ಉಡುಪ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

‘ಕವಿತಾ ವಾಚನ ಹಿರಿಯರ ಕವಿತೆಗೆ ಕಿರಿಯರ ಸ್ಪಂದನ’ ವಿಚಾರಿತ ಮೊದಲ ಗೋಷ್ಠಿಯಲ್ಲಿ ವಿದಿಶ ರಾವ್‌, ಭುವಿ ಭಟ್, ಧನುಷ್‌ ಆರ್‌. ಶೆಟ್ಟಿ, ಪೃಥ್ವಿಕಾ ಆರ್‌. ಶೆಟ್ಟಿ ಭಾಗವಹಿಸಿ ತಮ್ಮ ವಿಚಾರ ಮಂಡಿಸಿದರು.

ಜ್ಞಾನವಿ ಪೋತಿ ಅವರು ಗೋಷ್ಠಿಯನ್ನು ನಿರ್ವಹಿಸಿದರು.

ಉದ್ಘಾಟಿಸಿ ಮಾತನಾಡಿದ ಶ್ರೀಕೃಷ್ಣ ಉಡುಪ ಅವರು, ಮಕ್ಕಳಿಂದ ಮಕ್ಕಳಿಗಾಗಿ ಜರಗುವ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾದದ್ದು. ನಾವೆಲ್ಲರೂ ಹೂವು ಮಾರುವವರಾಗಬೇಕು, ಕಟ್ಟಿಗೆ ಕಡಿಯುವವರಾಗಬಾರದು. ಪ್ರಾಯಶ: ಸಾಹಿತ್ಯ ಬಳಗಕ್ಕೆ ನಮ್ಮ ಅಂತರಂಗದ ಧ್ವನಿ ಅರ್ಥವಾಗಿದೆ ಎಂದರು.

ದ್ವಿತೀಯ ಗೋಷ್ಠಿಯಲ್ಲಿ ಸಾನ್ವಿ ಶೆಟ್ಟಿ ಅವರು ‘ಶಾಲಾ ಬ್ಯಾಗ್‌ ಹೊತ್ತು ಸೋತೆ’, ನಿಧಿ ಪೂಜಾರಿ ಅವರು ‘ಕಡಿಮೆ ಅಂಕ ಪಡೆದರೆ ಮನೆಯಲ್ಲಿ ಕಿರಿಕಿರಿ’, ಸುನಿಧಿ ಶೆಟ್ಟಿ ಅವರು ‘ಟ್ಯೂಶನ್‌ ಕ್ಲಾಸ್‌ನಿಂದ ದರೋಡೆ’, ಅಪ್ರಮೇಯ ಭಟ್ ಅವರು ‘ಶಾಲಾ ಕೆಲಸ ಮತ್ತು ಮನೆ ಕೆಲಸ ನಡುವೆ ಖಾಸಾಗಿ ಕೆಲಸಕ್ಕೆ ಎಡೆ ಇಲ್ಲ’, ಪ್ರತೀಕ್ಷಾ ಭಟ್ ಅವರು ‘ನಮಗೆ ತಿಳಿಯದ ಯೋಜನಾ ಕೆಲಸಗಳು ಯಾರು ಮಾಡಬೇಕು’ ವಿಷಯಗಳಲ್ಲಿ ತಮ್ಮ ವಿಚಾರ ಮಂಡಿಸಿದರು. ಅದ್ವಿತಾ ಸಾಗರ್‌ ಗೋಷ್ಠಿ ನಡೆಸಿದರು.

ಬಳಿಕ ನಡೆಸಲ್ಪಟ್ಟ ‘ಹಿರಿಯರೊಡನೆ ಸಂವಾದ’ದಲ್ಲಿ ರಂಗನಟ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಸಮಾಜ ಸೇವಕ ಆರ್‌. ಎಲ್. ಸುಧೀರ್‌ ಶೆಟ್ಟಿ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಜ್ಯೋತಿ ಪ್ರಸಾದ್‌, ಡಾ| ವಿಜಯಾ ಎಂ. ಶೆಟ್ಟಿ, ಎನ್‌.ಆರ್‌. ರಾವ್‌ ಅವರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಾತ್ವಿಕ್‌ ರೈ, ನೇಹಾ ಹೆಗ್ಡೆ, ರಾಘವೇಂದ್ರ ಸಾಲ್ಯಾನ್‌, ಶುಭಾಶ್ರೀ ಭಟ್, ನೇಹಾ ನಾಯಕ್‌, ಸಾನ್ವಿ ಶೆಟ್ಟಿ, ಚಿರಾಯು ಪ್ರಕಾಶ್‌ ಸಂವಾದದಲ್ಲಿ ಪಾಲ್ಗೊಂಡಿದ್ದು, ದೀಪ್ಯಾ ಶಿವತ್ತಾಯ ಸಂವಾದ ನಡೆಸಿದರು.

ಸಾಹಿತ್ಯ ಬಳಗದ ಅಧ್ಯಕ್ಷ ಎಚ್. ಬಿ. ಎಲ್. ರಾವ್‌, ಎಸ್‌. ಕೆ. ಸುಂದರ್‌, ಜಗದೀಶ್‌ ರೈ, ಸಹನಾ ಭಾರದ್ವಾಜ್‌, ಸಾ. ದಯಾ, ನವಿಮುಂಬಯಿ ಕನ್ನಡ ಸಂಘದ ಬಿ. ಎಚ್. ಕಟ್ಟಿ, ಸುಜಾತಾ ರಾವ್‌ ಮತ್ತಿತರರು ಉಪಸ್ಥಿತರಿದ್ದು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದರು. ಸಾನ್ವಿ ರೈ ಮತ್ತು ಶೈಲಜಾ ಶೆಟ್ಟಿ ಯಕ್ಷಗಾನ ಶೈಲಿಯಲ್ಲಿ ಗಣಪತಿ ನಮನಗೈದರು. ಬಡಗುತಿಟ್ಟು ಮತ್ತು ತೆಂಕುತಿಟ್ಟು ಶೈಲಿಯಲ್ಲಿ ಯಕ್ಷಗಾನ ಪ್ರವೇಶ ಸಮ್ಮೇಳನಕ್ಕೆ ಚಾಲನೆ ನೀಡಿದರು. ಕೃತಿ ಚಡಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಕೆ, ತಬಲಾ ವಾದನ, ಸುಗಮ ಸಂಗೀತ, ನೃತ್ಯ ವೈಭವ, ಏಕಪಾತ್ರಾಭಿನಯ, ಸಮೂಹ ಗೀತೆ, ಜಾನಪದ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು. ನಾನು ಏನು ಆಗಬೇಕು ಎಂದು ಬಯಸುತ್ತೇನೆ ಎಂದು ಸಭೆಯಲ್ಲಿದ್ದ ಮಕ್ಕಳು ಪ್ರತಿಕ್ರಿಯಿಸಿದರು. ನವ್ಯಶ್ರೀ ಭಟ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ-ವರದಿ : ರೊನಿಡಾ ಮುಂಬಯಿ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.