ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗ: ನೆರವು ವಿತರಣೆ
Team Udayavani, Jun 28, 2018, 4:26 PM IST
ಮುಂಬಯಿ: ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗದ ವತಿಯಿಂದ ಜೂ. 22 ರಂದು ವೈದ್ಯಕೀಯ ಮನವಿಗಳಿಗೆ ಅನುಗುಣವಾಗಿ ಅನಾರೋಗ್ಯ ಪೀಡಿತರ ಮನೆಗೆ ತೆರಳಿದ ಬಳಗದ ಸದಸ್ಯರು ವಿವಿಧೆಡೆಗಳಲ್ಲಿ ವೈದ್ಯಕೀಯ ನೆರವು ನೀಡಿ ಸಹಕರಿಸಿದರು.
ಊರಿನ ಎರ್ಮಾಳ್ ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿನಯಾ ದೇವಾಡಿಗರ ಮನೆಗೆ ತೆರಳಿ 30,000 ರೂ. ವೈದ್ಯಕೀಯ ಸಹಾಯ ನೀಡಲಾಯಿತು. ಪಡುಬಿದ್ರಿಯಲ್ಲಿ ಮೂರು ದಿನಗಳ ಹಿಂದೆ ವಿದ್ಯುತ್ ಸ್ಪರ್ಶದಿಂದ ದುರ್ಮರಣಕ್ಕೀಡಾದ ವನಜಾ ದೇವಾಡಿಗರ ಮನೆಗೆ ತೆರಳಿ 10,000 ರೂ. ಗಳನ್ನು ಹಸ್ತಾಂತರಿಸಲಾಯಿತು.
ಜೂ. 23 ರಂದು ಕುಂದಾಪುರ ತಾಲೂಕು ಆಲೂರಿನ ಹೊಂದಿಕೊಡಲು ಗ್ರಾಮದಲ್ಲಿ ಅನಾರೋಗ್ಯ ಪೀಡಿತರಾಗಿ ಸೊಂಟದ ಕೆಳಗೆ ಸಂಪೂರ್ಣ ಬಲ ಕಳೆದುಕೊಂಡಿರುವ ಶೀನ ದೇವಾಡಿಗರ ಪುತ್ರ 23 ಹರೆಯದ ಉದಯ ಅವರಿಗೆ ವೀಲ್ಚೇಯರ್ನ್ನು ಬಳಗದ ವತಿಯಿಂದ ಹಸ್ತಾಂತರಿಸಲಾಯಿತು.
ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗವನ್ನು ಮುಂಬಯಿಯಲ್ಲಿ ನೆಲೆಸಿರುವ ದೇವಾಡಿಗ ಸಮಾಜ ಬಾಂಧವರು ಹೊಂದಿದ್ದು, ಊರಿನಲ್ಲಿರುವ ಅನಾರೋಗ್ಯ ಪೀಡಿತರಿಗೆ ಸಹಕರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ