ದಿಬ್ಬಣಗಲ್ಲು ಶಿವ- ಗಣಪ


Team Udayavani, Apr 14, 2018, 2:13 PM IST

2-bbb.jpg

ನಮ್ಮ ನಾಡಿನಲ್ಲಿ ಶಿವ ದೇಗುಲಗಳು ಎಲ್ಲೆಡೆ ಕಂಡು ಬರುತ್ತದೆ. ಆ ದೇವಾಲಯಗಳಲ್ಲಿ ಶಿವನಿಗೆ ಪರಿವಾರ ದೇವತೆಗಳಾಗಿ ಪಾರ್ವತಿ, ಗಣಪತಿ,ನಂದಿ,ಸುಬ್ರಹ್ಮಣ್ಯ ಇತ್ಯಾದಿ ದೇವರ ವಿಗ್ರಹ ಇರುವುದು ಸಾಮಾನ್ಯ. ಆದರೆ ಇಲ್ಲಿ ಶಿವನನ್ನು ಶಾಂತಗೊಳಿಸಿ ಭಕ್ತವತ್ಸಲನನ್ನಾಗಿಸಲು ಗಣಪತಿ ಇದ್ದಾನೆ. ಗಣಪತಿಯ, ಪ್ರಧಾನ ದೇವರಾದ ಶಿವನಿಗೆ ಸಮನಾಗಿ ಪೂಜಿಸಲ್ಪಡುವುದು ಈ ಕ್ಷೇತ್ರದಲ್ಲಿ ಮಾತ್ರ.  ಇಂತಹ ಅಪರೂಪದ ದೇವಾಲಯ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದಿಬ್ಬಣಗಲ್ಲುವಿನಲ್ಲಿದೆ.

     ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಹೊನ್ನಾವರದಿಂದ 12 ಕಿ.ಮೀ.ದೂರದಲ್ಲಿರುವ ಈ ಕ್ಷೇತ್ರದ ಶಿವ ಮತ್ತು ಗಣಪತಿಯರು ಶೀಘ್ರಫ‌ಲ ನೀಡುತ್ತಾರೆಂದು ಖ್ಯಾತವಾಗಿದೆ.

ಸ್ಥಳ ಪುರಾಣ
ಸ್ಕಂದ ಪುರಾಣದ ಪ್ರಕಾರ, ನಾರದ ಮಹರ್ಷಿಗಳ ಕೋರಿಕೆಯಂತೆ ಮಹಾಗಣಪತಿ ಇಡಗುಂಜಿಗೆ ಬಂದು ನೆಲೆಸುವ ಸಂದರ್ಭದಲ್ಲಿ ಸುತ್ತಮುತ್ತಲೂ  ಹಲವು ಪುಣ್ಯ ಕ್ಷೇತ್ರಗಳಿದ್ದವಂತೆ.  ಶರಾವತಿ ನದಿಯ ತಟದಲ್ಲಿ ಶಿವ ಪಾರ್ವತಿಯರು ಎತ್ತರದ ಗುಡ್ಡದಂಥ ನಿರ್ಜನ ಪ್ರದೇಶದಲ್ಲಿ ನೆಲೆಯಾದರಂತೆ. ಹಲವು ಶತಮಾನಗಳ ಕಾಲ ಮೇವಿಗಾಗಿ ಬರುವ ಕೌಲೆ ಹಸುವಿನ ಹಾಲಿನ ಅಭಿಷೇಕದಿಂದ ಧನ್ಯರಾಗುತ್ತಾ ನೆಲೆಯಾಗಿದ್ದರಂತೆ. ಗಣಪತಿಯೂ ಇಡಗುಂಜಿ ಕ್ಷೇತ್ರದಲ್ಲಿ ನೆಲೆಯಾಗಿ ಅಲ್ಲಿ ಅವನಿಗೆ ನಿತ್ಯ ಪೂಜೆ ಆರಂಭವಾಗುತ್ತಿದ್ದಂತೆ, ಇಲ್ಲಿನ ದೇವರಿಗೆ ಸಹ ಚಿಕ್ಕ ಗುಡಿ ನಿರ್ಮಾಣವಾಗಿ ಈ ಮಾರ್ಗದಲ್ಲಿ ಓಡಾಡುವವರಿಂದ ಪೂಜೆ ಪುನಸ್ಕಾರಗಳು ಆರಂಭವಾಯಿತು. ಪೂರ್ವಾಭಿಮುಖವಾಗಿ ನೆಲೆಯಾದ 
  ತನ್ನ ಕ್ಷೇತ್ರದ ಎದುರಿನ ರಸ್ತೆಯಲ್ಲಿ ಓಡಾಡುವ ಪ್ರತಿಯೊ ಬ್ಬರೂ ತನ್ನನ್ನು ಪೂಜಿಸಿಯೇ ಮುಂದಿನ ಪ್ರಯಾಣ ಬೆಳೆಸಬೇಕೆಂಬ ಇಚ್ಚೆ ಶಿವನದಾಗಿತ್ತು. ನೂರಾರು ವರ್ಷಗಳ ಹಿಂದೆ ಈ ಮಾರ್ಗದ ಮೂಲಕ ಮುಂದಿನ ಗ್ರಾಮಕ್ಕೆ ಸಾಗುತ್ತಿದ್ದ ಮದುವೆ ದಿಬ್ಬಣದ ಕುಟುಂಬಸ್ಥರು ಈ ದೇವರಿಗೆ ಪೂಜಿಸದೆ ಮುಂದೆ ಸಾಗಿದರಂತೆ.ಇದರಿಂದ ಕೋಪಗೊಂಡ ಶಿವನು ಇಡೀ ದಿಬ್ಬಣದ ಪರಿವಾರವೇ ಕಲ್ಲಾಗುವಂತೆ ಶಪಿಸಿದನಂತೆ.  ಪರಿಣಾಮ, ದಿಬ್ಬಣದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಕಲ್ಲಾಗಿ ಹೋದರಂತೆ. ಇದರಿಂದಾಗಿ ಈ ಸ್ಥಳಕ್ಕೆ ದಿಬ್ಬಣ ಕಲ್ಲಾದ ಸ್ಥಳ ಎಂಬ ಹೆಸರುಬಂದು ಮುಂದೆ ‘ದಿಬ್ಬಣಗಲ್ಲು’ ಎಂಬ ಹೆಸರು ಶಾಶ್ವತವಾಯಿತು ಎನ್ನುತ್ತದೆ ಇತಿಹಾಸ. 

 ದಿಬ್ಬಣವನ್ನು ಕಲ್ಲಾಗುವಂತೆ ಶಪಿಸುವಾಗ ಕೋಪಗೊಂಡ ಶಿವ ಉಗ್ರಸ್ವರೂಪಿಯಾಗಿ ಬದಲಾದನಂತೆ. ಮುಂದಿನ ದಿನಗಳಲ್ಲಿ ಗುಂಪು ಗುಂಪಾಗಿ ಸಾಗುವ ಜನರಿಗೆಲ್ಲ ಕಲ್ಲಾಗುವ ಶಾಪ ನೀಡುತ್ತಾ ತನ್ನ ಕೋಪ ಪ್ರಕಟಿಸುತ್ತಿದ್ದನಂತೆ. ಇದರಿಂದಾಗಿ, ದೇವಾಲಯದ ಎದುರಿನಲ್ಲಿ ಜಂಬಿಟ್ಟಿಗೆಯ ಕಲ್ಲುಗಳು ಸಾಲಾಗಿ ತಲೆಯೆತ್ತಿ ಗುಡ್ಡವಾಗಿ ನಿಂತವು. ಕೋಪಿಷ್ಟನಾದ ಶಿವನನ್ನು ಶಾಂತಗೊಳಿಸಿಸಲು ಭಕ್ತರೆಲ್ಲ ಸೇರಿ ಶಿವನನ್ನು ಪ್ರಾರ್ಥಿಸುತ್ತಾ, ನಾನಾ ವಿಧದಲ್ಲಿ ಭಜನೆ ಮಾಡುತ್ತಾ, ಸಾಮೂಹಿಕವಾಗಿ ರುದ್ರಪಠಣ ಮಾಡುತ್ತಾ ದೇಗುಲದ ಬಳಿ ಬಂದು ದೇವರ ವಿಗ್ರಹದ ಪಕ್ಕದಲ್ಲೇ ಪ್ರಸನ್ನ ಗಣಪತಿ ದೇವರನ್ನು ಸ್ಥಾಪಿಸಿ ಪೂಜಿಸಿದರಂತೆ. ಭಕ್ತರಿಗೆ ಅಭಯ ನೀಡಿದ ಗಣಪತಿ, ಶಿವನ ಬಳಿ ಕೋಪ ಬಿಟ್ಟು ಭಕೊ¤àದ್ಧಾರಕನಾಗಿ ಶಾಂತಚಿತ್ತ ಬೀರುವಂತೆ ಮೊರೆ ಇಟ್ಟನಂತೆ. ಆಗ ಶಾಂತನಾದ ಶಿವ ಭಕ್ತರ ಪ್ರಾರ್ಥನೆ-ಪೂಜೆಗಳಿಗೆ ಸದಾ ಕಾಲ ಪ್ರಸನ್ನನಾಗಿ ಮನೋಭಿಷ್ಟ ನೆರವೇರಿಸುತ್ತಾ ತನ್ನ ಖ್ಯಾತಿಯನ್ನು ಎಲ್ಲೆಡೆ ಪಸರಿಸಿದನಂತೆ.

  ಖರ್ವಾ ಗ್ರಾಮದ ಯಲಗುಪ್ಪೆಯ ದೊಡ್ಮನೆ ಕುಟುಂಬಸ್ಥರು ಸುಮಾರು 400 ವರ್ಷಗಳಿಂದ ತಮ್ಮ ಮನೆದೇವರೆಂದು ನಿತ್ಯ ತ್ರಿಕಾಲ ಪೂಜೆ ನಡೆಸುತ್ತಾ ಬಂದಿದ್ದಾರೆ.  2014 ರಲ್ಲಿ ಇಲ್ಲಿನ ದೇವರಿಗೆ ಅಷ್ಟಬಂಧ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು.

 ಇಲ್ಲಿನ ದೇವರಿಗೆ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ,ಹೂನ ಪೂಜೆ ನಡೆಯುತ್ತದೆ. ಗಣೇಶೋತ್ಸವದಂದು ಮಹಾಗಣಪತಿಗೆ ವೈಭವದ ಪೂಜೆ ನಡೆಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ನಿತ್ತ ಸಂಜೆ ಹರಕೆ ಹೊತ್ತ ಭಕ್ತರಿಂದ ಸರದಿ ಪ್ರಕಾರ ದಿಪೋತ್ಸವ ಸೇವೆ ನಡೆಯುತ್ತದೆ. 

  ವಿದ್ಯೆ, ಉದ್ಯೋಗ, ಸಂತಾನ ಪ್ರಾಪ್ತಿ, ಸಂಸಾರದಲ್ಲಿ ನೆಮ್ಮದಿ,ವ್ಯವಹಾರ ವೃದ್ಧಿ, ಶತ್ರುಭಯ ನಾಶ, ಇಷ್ಟಾರ್ಥ ಸಿದ್ಧಿಗಳಿಗಾಗಿ ಭಕ್ತರು ಇಲ್ಲಿಗೆ ಬಂದು ರುದ್ರಾಭಿಷೇಕ, ದೀಪೋತ್ಸವ, ಗಣಹೋಮ ಇತ್ಯಾದಿ ಹರಕೆ ಹೊರುತ್ತಾರೆ.

ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.