ದೈವೀ ಪ್ರೇರಣೆಯೇ ಸಮ್ಮಾನಕ್ಕೆ ಕಾರಣ: ಕೈವಲ್ಯ ಶ್ರೀ
Team Udayavani, May 5, 2018, 3:39 PM IST
ಮುಂಬಯಿ: ಮುಂಬಯಿಯಂಥ ಅವಿಶ್ರಾಂತ ಶಹರದಲ್ಲಿ ಜನರ ನಿರಂತರ ಪರಿಶ್ರಮ ಜೀವನದ ಮಧ್ಯೆ ಭಗವಂತನ ನಾಮಸ್ಮರಣೆ ಮಾಡಲು ಅವಕಾಶ ಕಲ್ಪಿಸಿ ಕೊಳ್ಳುವುದರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರು ನಿಪುಣರು. ಇಂತಹ ಸನ್ನಿವೇಶದ ಹಿನ್ನೆಲೆಯಲ್ಲಿ ಜಿಎಸ್ಬಿ ಸಭಾ, ಕೆಸಿಜಿ, ಬಾಲಾಜಿ ಮಂದಿರ ಕುರ್ಲಾ ತಮ್ಮ ಸುವರ್ಣ ಗಣೇಶೋತ್ಸವ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಶ್ಲಾಘನೀಯ. ದೈವೀ ಪ್ರೇರಣೆಯೇ ಮನುಷ್ಯನ ಸಮ್ಮಾನಕ್ಕೆ ಕಾರಣ. ದೇವರು ಉತ್ತಮ ಆಚಾರ ವಿಚಾರ ನೀಡಿ ಸಕಲರನ್ನು ಹರಸಲಿ ಎಂದು ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧಿಪತಿಗಳು ನೆರೆದ ಸಮಾಜ ಬಾಂಧವರನ್ನುದ್ದೇಶಿಸಿ ಆಶೀರ್ವಚಿಸಿದರು.
ಎ. 29ರಂದು ಸಂಜೆ ಗೋವಾದಿಂದ ಆಗಮಿಸಿದ ಪರಮಪೂಜ್ಯ ಗುರುವರ್ಯರನ್ನು ಕುರ್ಲಾ ಜಿಎಸ್ಬಿ ಸಭಾದ ಅಧ್ಯಕ್ಷ ಗಣೇಶ್ ಬಿ. ಕಾಮತ್, ಸುವರ್ಣ ಗಣೇಶೋತ್ಸವದ ಕಾರ್ಯಾಧ್ಯಕ್ಷ ವಿವೇಕ್ ಭಂಡಾರಿ, ಜನಾರ್ದನ್ ಭಟ್, ಕಾರ್ಯಕರ್ತರು, ಸಮಿತಿ ಸದಸ್ಯರು, ಸ್ವಯಂಸೇವಕರು, ಮಹಿಳಾ ಮಂಡಳಿ ಸದಸ್ಯರು ಪೂರ್ಣ ಕುಂಭ ಸ್ವಾಗತವನ್ನು ನೀಡಿ ಬರಮಾಡಿಕೊಂಡರು. ದೇವರ ದರ್ಶನದ ಬಳಿಕ ಮುಖ್ಯ ಪುರೋಹಿತ ಶ್ರೀ ತ್ರಿವಿಕ್ರಮ ಆಚಾರ್ಯ ಹಾಗೂ ಪ್ರಧಾನ ಅರ್ಚಕ ಗಜಾನನ ಶಾನ್ಭಾಗ್ ಅವರಿಂದ ವೇದಘೋಷ ಪಠಣ ನಡೆಯಿತು.
ಅಧ್ಯಕ್ಷರು ಭಕ್ತಿಪೂರ್ವಕವಾಗಿ ಸ್ವಾಮೀಜಿ ಅವರನ್ನು ಸ್ವಾಗತಿಸಿ, ಸ್ವಾಮೀಜಿ ಅವರ 4 ದಿನಗಳ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿ ಅನಂತರ ಅವರ ಪಾದಪೂಜೆ ಗೈದರು. ಪರಮಪೂಜ್ಯರ ಆಶೀರ್ವಚನ ಫಲಮಂತ್ರಾಕ್ಷತೆಯ ಬಳಿಕ ದೇವರ ಪೂಜೆ, ಆರತಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ