ಅಮೆರಿಕದಲ್ಲಿ ದೀಪಾವಳಿ ಸಂಭ್ರಮ
Team Udayavani, Nov 14, 2020, 8:30 AM IST
ದೀಪಾವಳಿಯೊಂದೇ ಅಲ್ಲ ; ಈ ಹಬ್ಬಗಳು ನಮ್ಮ ಭಾರತೀಯ ಪರಂಪರೆ-ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಒಂದು ಅವಕಾಶ. ಅದೇ ಕಾರಣಕ್ಕೆ ತಾಯ್ನೆಲದಿಂದ ದೂರವಿರುವ ನಮ್ಮ ಅನಿವಾಸಿ ಭಾರತೀಯರು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಒಂದು ತೂಕ ಭಾರತೀಯರಿಗಿಂತ ಹೆಚ್ಚು ಎಂದರೂ ಅತಿಶಯೋಕ್ತಿಯೇನಿಲ್ಲ.
ವಿಶ್ವವ್ಯಾಪಿಯಾಗಿ ಆಚರಿಸಲ್ಪಡುವ ದೀಪಾವಳಿ ಹಬ್ಬದ ಬಗ್ಗೆ ಇಲ್ಲಿನ ಶಾಲೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡುವುದು, ಖಾಸಗಿ ಕಂಪೆನಿಗಳಲ್ಲಿ ದೀಪಾವಳಿಯ ಆಚರಣೆ, ಶ್ವೇತಭವನದಲ್ಲಿ ದೀಪ ಬೆಳಗಿಸಿ, ವೇದಮಂತ್ರವನ್ನು ಪಠಿಸುವುದು, ಅಮೆರಿಕದ ಬಟ್ಟೆ ಅಂಗಡಿಗಳಲ್ಲಿ ಕಾಣಸಿಗುವ “ದೀಪಾವಳಿ ಸೇಲ…’ ದೀಪಾವಳಿಯ ವಿಶೇಷತೆಯನ್ನು ಎಲ್ಲರಿಗೂ ತಿಳಿಯಪಡಿಸುತ್ತವೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮನೆಗಳಲ್ಲಿ ತಾಯ್ನಾಡಿನ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿಯೇ ಹಬ್ಬ ಆಚರಿಸಲ್ಪಡುತ್ತದೆ. ನಮ್ಮ ಮನೆಯ ಪುಟ್ಟ-ಪುಟ್ಟಿಯರು ಮನೆಯಲ್ಲಿಯೇ ಆಕಾಶಬುಟ್ಟಿಗಳನ್ನು ತಯಾರಿಸುವಲ್ಲಿ ತೊಡಗಿಕೊಳ್ಳುತ್ತಾರೆ.
ನೀರುತುಂಬುವ ಹಬ್ಬದಂದು ನಮ್ಮ ಬಾಲ್ಯದಲ್ಲಿ ಸುಣ್ಣ- ಜಾಜಿನಿಂದ ಅಲಂಕೃತಗೊಂಡ ಹಂಡೆಯಲ್ಲಿನ ನೀರು ಪೂಜೆಗೊಳ್ಳುತ್ತಿದ್ದಂತೆ, ಸುಣ್ಣ-ಜಾಜಿನಿಂದ ಅಲಂಕಾರಗೊಂಡ ಪುಟ್ಟ ಬಿಂದಿಗೆಯಲ್ಲಿ ನೀರು ತುಂಬಿಸಿ, ಗಂಗಾಪೂಜೆಯನ್ನು ಮಾಡಲಾಗುತ್ತದೆ. ಮಕ್ಕಳಿಗೆ ಸಾಂಪ್ರದಾಯಿಕ ತಿಂಡಿತಿನಿಸುಗಳ ಪರಿಚಯವೂ ಇಂಥ ಹಬ್ಬಗಳಿಂದಲೇ ಆಗುತ್ತದೆ.
ಬಣ್ಣ-ಬಣ್ಣದ ರಂಗೋಲಿಯ ಚಿತ್ತಾರ, ಹಬ್ಬದ ವಿಶೇಷ ಅಡುಗೆ, ನರಕ ಚತುರ್ದಶಿಯ ಅಭ್ಯಂಜನ, ಅಮಾವಾಸ್ಯೆಯ ಲಕ್ಷ್ಮೀಪೂಜೆ, ಬಲಿಪಾಡ್ಯಮಿಯ ಪೂಜೆಯೊಂದಿಗೆ ಹಬ್ಬ ಆಚರಿಸಲ್ಪಡುತ್ತದೆ.
ಹಬ್ಬದ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಒಂದೆಡೆ ಸೇರಿ ಸಂಭ್ರಮಿಸುವುದಿದೆ. ಸಾಮುದಾಯಿಕ ಬೆರೆಯುವಿಕೆಗೂ ಇದೊಂದು ಅವಕಾಶ. ಇಲ್ಲಿನ ದೇವಸ್ಥಾನಗಳಲ್ಲಿ ನಡೆಸಲಾಗುವ ವಿಶೇಷ ಪೂಜೆಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಕೆಲವು ರಾಜ್ಯಗಳಲ್ಲಿ ಪಟಾಕಿ ಸಿಡಿಸುವ ಅನುಮತಿಯೂ ದೊರೆತಿದ್ದು, ಅಂಗಡಿಗಳಲ್ಲಿ ಪಟಾಕಿ ಮಾರಾಟವೂ ಜೋರಾಗಿ ನಡೆಯುತ್ತದೆ.
ಚಟಪಟ, ಚಟಪಟ…ಪಟಾಕಿ ಹಚ್ಚೋಣ, ಸುರುಸುರು, ಸುರುಸುರು… ಸುರುಬತ್ತಿ ಉರಿಸೋಣ, ಹಚ್ಚೋಣ…ದೀಪ ಹಚ್ಚೋಣ ಎಂದು ಹಾಡಿಕೊಂಡು ಹಬ್ಬವನ್ನು ಸಂಭ್ರಮಿಸಿದ ಬಾಲ್ಯದ ದಿನಗಳಂತೆ, ನಮ್ಮ ಮಕ್ಕಳೊಂದಿಗೆ ಇಲ್ಲಿ ಹುಟ್ಟಿ ಬೆಳೆದ ಮಕ್ಕಳೂ ದೀಪಗಳ ಹಬ್ಬವನ್ನು ಆಚರಿಸುವಲ್ಲಿ ಜತೆಯಾಗುತ್ತಾರೆ. ದೀಪಾವಳಿ ನಮ್ಮೆಲ್ಲರ ಬದುಕಿನ ಸುಂದರ ನೆನಪುಗಳಲ್ಲಿ ಪ್ರಕಾಶಿಸು
ವಂತಾಗಿದೆ.
ಸರಿತಾ ನವಲಿ, ನ್ಯೂ ಜೆರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ