ನಾಟಕ ರಂಗ ಸಿನೆಮಾ ರಂಗಕ್ಕಿಂತಲೂ ಕಠಿನ: ರಾಜಶೇಖರ ಕೋಟ್ಯಾನ್


Team Udayavani, Nov 25, 2019, 5:10 PM IST

mumbai-tdy-1

ಮುಂಬಯಿ, ನ. 24: ಕಲಾವಿದರಿಗೆ ಪ್ರೇಕ್ಷಕರು ದೇವರಂತೆ. ಎಲ್ಲರೂ ನಾಟಕವನ್ನು ನೋಡುತ್ತಾರೆ ಆದರೆ ಅದರ ಹಿಂದಿರುವ ಕಷ್ಟದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ನಾನು ಕಲಾವಿದನಾದರೂ ಓರ್ವ ಸಿನೆಮಾ ಕಲಾವಿದ. ನಾಟಕ ಮಾಡಲು ನನ್ನಿಂದ ಕಷ್ಟಸಾಧ್ಯ. ನಾಟಕ ಮಾಡುವುದು ಸುಲಭದ ಕೆಲಸವಲ್ಲ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷಡಾ| ರಾಜಶೇಖರ ಕೋಟ್ಯಾನ್‌ ಅಭಿಪ್ರಾಯಪಟ್ಟರು.

ನ. 23ರಂದು ಬೊರಿವಲಿ ಪಶ್ಚಿಮದ ಗೋವಿಂದ್‌ನಗರದ ಆ್ಯಂಪಿ ಥಿಯೇಟರ್‌ನಲ್ಲಿ ಜರಗಿದ ನವೋದಯ ಕಲಾರಂಗ ಮುಂಬಯಿ ಇದರ 32ನೇ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನಾಟಕ ಮಾಡಲು ನಾಟಕ ಕಲಾವಿದರಿಗೆ ಮಾತ್ರ ಸಾಧ್ಯ. ಆದುದರಿಂದ ನಾಟಕ ಕಲಾವಿದರನ್ನು ನಾನು ಅಭಿನಂದಿಸುತ್ತಿರುವೆನು. ನಾಟಕ ದೊಂದಿಗೆ ಅಸಹಾಯಕರಿಗೆ ಸಹಕಾರವನ್ನು ನೀಡುತ್ತಿರುವ ನವೋದಯ ಕಲಾರಂಗ ಮುಂಬಯಿಗೆ ನನ್ನ ಪ್ರೋತ್ಸಾಹವಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡಿಗ ಕಲಾವಿದರ ಪರಿಷತ್‌ ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಮಾತನಾಡುತ್ತ ಅದೆಷ್ಟೋ ಕಲಾವಿದರಿಗೆ ಆಶ್ರಯವನ್ನು ನೀಡಿದ ಈ ಸಂಸ್ಥೆ ಎತ್ತರಕ್ಕೆ ಬೆಳೆದಿದೆ. ಸಂತೋಷದ ಸಂಗತಿಯೇನೆಂದರೆ ನನ್ನೊಂದಿಗೆ ಅಭಿನಯಿಸಿದ ಮೂವರು ನಟಿಯರನ್ನು ಇಂದು ಸಮ್ಮಾನಿಸಲಾಗಿದೆ. ಮುಂಬಯಿಯಲ್ಲಿ ಊರಿನಲ್ಲಿರುವುದಕ್ಕಿಂತಲೂ ಪ್ರತಿಭಾವಂತ ಕಲಾವಿದರು, ನಿರ್ದೇಶಕರು ಮುಂತಾದವರಿದ್ದು ಇವರಿಗೆ ನಾವು ಮೊದಲು ಅವಕಾಶವನ್ನು ನೀಡಬೇಕು ಅದೇ ರೀತಿ ಊರಿಂದ ಇಲ್ಲಿಗೆ ಬರುವ ತಂಡಕ್ಕೂ ನಾವು ಪ್ರೋತ್ಸಾಹಿಸಬೇಕು ಎನ್ನುತ್ತಾ ನಾವು ನಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಪರಿವರ್ತಿಸೋಣ ಎಂದು ಕರೆಯನ್ನಿತ್ತರು.

ದಹಿಸರ್‌ ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರದ ಪ್ರಧಾನ ಅರ್ಚಕರಾದ ಗುರುಶಂಕರ್‌ ಭಟ್‌ ಮತ್ತು ಶಂಕರ್‌ ಗುರು ಭಟ್‌ ಆಶೀರ್ವಚನ ನೀಡಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯ ಉಪಾಧ್ಯಕ್ಷರಾದ ಹರೀಶ್‌ ಜಿ. ಅಮೀನ್‌ ಮಾತನಾಡಿ, ನವೋದಯ ಕಲಾರಂಗವು ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿರುವುದು ಅಭಿನಂದನೀಯ. ಈ ಸಂಘಟನೆಯಿಂದ ಹಿಂದಿನಂತೆ ಮುಂದೆಯೂ ಉತ್ತಮ ನಾಟಕಗಳು ಪ್ರದರ್ಶನಗೊಳ್ಳಲಿ ಎಂದರು.

ಇನ್ನೋರ್ವ ಅತಿಥಿ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಾಜಕುಮಾರ್‌ ಕಾರ್ನಾಡ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಕಳೆದ 32 ವರ್ಷ ಗಳಿಂದ ನಿರಂತರವಾಗಿ ನವೋದಯ ಕಲಾರಂಗವು ಕಲಾ ಕ್ಷೇತ್ರಕ್ಕೆ ಮಾಡುತ್ತಿರುವ ಸೇವೆ ಅಭಿನಂದನೀಯ. ವಿದ್ಯಾನಿಧಿ ಹಾಗೂ ಆರೋಗ್ಯ ನಿಧಿಗೂ ನಾವು ಇನ್ನೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಅತಿಥಿಯಾಗಿ ಆಗಮಿಸಿದ್ದ ಗೋರೆ ಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷರಾದ ನಾರಾಯಣ ಮೆಂಡನ್‌ ಮಾತನಾಡುತ್ತಾ, ಈ ಸಂಘಟನೆಯು ನಮ್ಮ ನಾಡಿನ ಭಾಷೆಯನ್ನು ಇಲ್ಲಿ ಉಳಿಸಿ ಬೆಳೆಸುವಂತೆ ಮಾಡುತ್ತಿದೆ ಎಂದರಲ್ಲದೆ, ಸಂಸ್ಥೆಯು ಒಂದು ನಾಟಕವನ್ನು 90 ಬಾರಿ ಪ್ರದರ್ಶಿಸಿದ್ದನ್ನು ಕೂಡ ನೆನಪಿಸಿಕೊಂಡರು.

ಇನ್ನೋರ್ವ ಅತಿಥಿ ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ. ಜಿ. ಶೆಟ್ಟಿಯವರು ಮಾತನಾಡುತ್ತಾ,ಇವತ್ತಿನ ಸಮ್ಮಾನವು ಬಹಳ ಅರ್ಥಪೂರ್ಣವಾಗಿದ್ದು, ಹೊಸ ಕಲಾವಿದರನ್ನು ಈ ಕಲಾ ಸಂಸ್ಥೆಗೆ ಸೇರಿಸುದರೊಂದಿಗೆ ವಿದ್ಯಾಭ್ಯಾಸಕ್ಕೆ ಹಾಗೂ ಶಿಕ್ಷಣಕ್ಕೆ ಸಹಕರಿಸುತ್ತಿರುವ ಈ ನಾಟಕ ಸಂಘಟನೆಯನ್ನು ಪ್ರೋತ್ಸಾಹಿಸೋಣ ಎಂದು ಹೇಳಿದರು.

ಅತಿಥಿ, ಕನ್ನಡಿಗ ಕಲಾವಿದರ ಪರಿಷತ್‌ ಮಹಾರಾಷ್ಟ್ರ ಇದರ ಉಪಾಧ್ಯಕ್ಷ ರಾದ ನಟ ಅರವಿಂದ ಶೆಟ್ಟಿ ಕೊಜಕೊಳ್ಳಿ ಅವರು ಮಾತನಾಡಿ, ಇಂದು ಇಲ್ಲಿ ಕಲಾವಿದರಾದ ನಾವು ಒಟ್ಟಾಗಿದ್ದು ಸಂತೋಷ ತಂದಿದೆ. ನಾಟಕ ರಚಿಸುವುದಕ್ಕಿಂತ ಅದನ್ನು ವೇದಿಕೆಯ ಮೇಲೆ ತರುವುದು ಸುಲಭ ಕೆಲಸವಲ್ಲ. ಇದಕ್ಕೆ ಕಲಾ ಪೋಷಕರ ಪ್ರೋತ್ಸಾಹವೂ ಬೇಕಾಗಿದೆ ಎಂದರು. ಉದ್ಯಮಿ ಅನಿಲ್‌ ಸಾಲ್ಯಾನ್‌ , ಅಶೋಕ ಸಸಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನವೋದಯ ಕಲಾರಂಗ ಮುಂಬಯಿಯ ಗೌರವ ಕಾರ್ಯದರ್ಶಿ ಪ್ರತಿಮಾ ಬಂಗೇರ ಇವರು ಕಲಾರಂಗದ ಚಟುವಟಿಕೆಯ ಮಾಹಿತಿಯಿತ್ತರು. ಮಹಾನಗರದ ಜನಪ್ರಿಯ ಕಲಾವಿದರಾದ ಜ್ಯುಲಿಯಟ್‌ ಪಿರೆರಾ, ಚಂದ್ರಾ ವತಿ ದೇವಾಡಿಗ, ಸುಧಾ ಶೆಟ್ಟಿ, ಚಂದ್ರಕಾಂತ ಸಾಲ್ಯಾನ್‌ ಸಸಿಹಿತ್ಲು ಮತ್ತು ಶಿವು ಶ್ರೀಯಾನ್‌ ಅವರನ್ನು ಸಮ್ಮಾನಿಸಲಾಯಿತು. ಯುವ ಚಿತ್ರ ನಿರ್ದೇಶಕ, ನಟ ರಂಜಿತ್‌ ಕೋಟ್ಯಾನ್‌ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನವೋದಯ ಕಲಾರಂಗ ಮುಂಬಯಿಯ ಅಧ್ಯಕ್ಷರಾದ ಶಿವ ರಾಮ ಸಚ್ಚೇರಿಪೇಟೆ ಎಲ್ಲರಿಗೂ ಅಭಾರ ಮನ್ನಿಸಿದರು. ಉಪಾಧ್ಯಕ್ಷ ರಾದ ಮನೋಹರ್‌ ಶೆಟ್ಟಿ ನಂದಳಿಕೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸುರೇಶ್‌ ಇರ್ವತ್ತೂರು, ಗೌರವ ಕೋಶಾಧಿಕಾರಿ ಚಂದ್ರಕಾಂತ್‌ ಸಾಲ್ಯಾನ್‌ ಸಸಿಹಿತ್ಲು, ಜತೆ ಕೋಶಾಧಿಕಾರಿ ರಹೀಂ ಸಚ್ಚೇರಿಪೇಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಶೆಟ್ಟಿ ಮತ್ತಿತರ ಸದಸ್ಯರು ಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮನೋರಂಜನೆಯ ಅಂಗ ವಾಗಿ ನೃತ್ಯ ಕಾರ್ಯಕ್ರಮ ಹಾಗೂ ಶಿವಕುಮಾರ್‌ ರೈ ಮುಡಿಪು ರಚಿಸಿ, ಚಂದ್ರಕಾಂತ್‌ ಸಾಲ್ಯಾನ್‌ ಸಸಿಹಿತ್ಲು ನಿರ್ದೇಶಿಸಿದ ತುಳು ಹಾಸ್ಯಮಯ ನಾಟಕ ಲಿಂಕ್‌ ಲಿಂಗಪ್ಪೆ ನವೋದಯ ಕಲಾರಂಗದ ಕಲಾವಿದರಿಂದ ಪ್ರದರ್ಶನಗೊಂಡಿತು.

 

-ಚಿತ್ರ-ವರದಿ: ಈಶ್ವರ ಎಂ. ಐಲ್‌

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.