ಶೂನ್ಯ ಪ್ರಕರಣ ದಾಖಲಾಗಲು ಎಲ್ಲರ ಶ್ರಮ ಅಗತ್ಯ: ಸಿಎಂ
Team Udayavani, Jul 28, 2020, 4:59 PM IST
ಮುಂಬಯಿ, ಜು. 27: ಆಗಸ್ಟ್ ಮೊದಲ ವಾರದಿಂದ ಲಾಕ್ಡೌನ್ ಸಡಿಲಿಕೆ ಮಾಡಲಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಮತ್ತು ರೋಗಿಗಳಿಗೆ ಉತ್ತಮ ನಿರ್ವಹಣೆಯನ್ನು ನೀಡಲು ಎಲ್ಲರ ಶ್ರಮ ಅಗತ್ಯ ಎಂದು ಹೇಳಿದ್ದಾರೆ.
ರಾಜ್ಯದ ಅನೇಕ ಜಿಲ್ಲೆಗಳು ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿವೆ. ಕಳಪೆ ದ್ವಿಗುಣ ದರ ಮತ್ತು ಹೆಚ್ಚಿನ ಸಾವಿನ ಪ್ರಮಾಣಕ್ಕೆ ಕಾರಣವಾಗಿದೆ. ಸಾವಿನ ಪ್ರಮಾಣವು ರಾಜ್ಯದಲ್ಲಿ ಶೇ. 3 ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಶೂನ್ಯಕ್ಕೆ ತರಬೇಕು. ಚಿಕಿತ್ಸೆಯ ಸಾಲಿನಲ್ಲಿ ಏಕರೂಪತೆಯನ್ನು ತರಲು ಸಹಾಯ ಮಾಡುತ್ತದೆ. ಇದು ಸಾವುನೋವುಗಳ ಕುಸಿತಕ್ಕೆ ಕಾರಣವಾಗುತ್ತದೆ ಠಾಕ್ರೆ ಹೇಳಿದರು.
ಆರೋಗ್ಯ ಮೂಲ ಸೌಕರ್ಯದತ್ತ ಚಿತ್ತ : ರಾಜ್ಯ ಸರಕಾರ ಲಾಕ್ಡೌನ್ ಸಡಿಲಿಕೆಯ ಚಿಂತನೆ ನಡೆಸುತ್ತಿದ್ದು ಈ ಹಿನ್ನಲೆಯಲ್ಲಿ ಎಲ್ಲ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸುವ ನಿರೀಕ್ಷೆಯಿದೆ. ಸಡಿಲಿಕೆ ಬಳಿಕ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತದೆ. ಆದರೆ ಇದು ಇತರ ಕೆಲವು ದೇಶಗಳಲ್ಲಿ ಕಂಡುಬರುವಂತೆ ಎರಡನೇ ತರಂಗವಾಗಿ ಬದಲಾಗಬಾರದು. ಆರೋಗ್ಯದ ಮೂಲಸೌಕರ್ಯಗಳ ಜಿಲ್ಲಾ ಮಟ್ಟದ ವರ್ಧನೆ ಮತ್ತು ಆಡಳಿತದ ಕೇಂದ್ರೀಕೃತ ಪ್ರಯತ್ನಗಳು ಈ ಹಿನ್ನೆಲೆಯಲ್ಲಿ ಹೆಚ್ಚು ಮಹತ್ವದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಔಷಧಗಳ ಅನಗತ್ಯ ಬಳಕೆ ಸಲ್ಲದು : ಆ್ಯಂಟಿವೈರಲ್ ಔಷ ಗಳಾದ ರೆಮ್ಡೆಸಿವಿರ್ ಮತ್ತು ಫೆವಿಪಿರವಿರ್ ಅನ್ನು ಬಳಸುವ ಮಾರ್ಗಸೂಚಿಗಳನ್ನು ಅನುಸರಿಸಲು ಠಾಕ್ರೆ ಅವರು, ವೈದ್ಯರ ತಂಡಗಳಿಗೆ ನಿರ್ದೇಶನ ನೀಡಿದರು. ಆ್ಯಂಟಿವೈರಲ್ ಔಷಧಗಳ ಉಪಯುಕ್ತತೆ ಮತ್ತು ಆಮ್ಲಜನಕ ಹಾಸಿಗೆಗಳ ನಿರ್ವಹಣೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯರಿಗೆ ಮಾರ್ಗದರ್ಶನ ನೀಡಲಾಯಿತು. ಇದು ಜೀವಗಳನ್ನು ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಪಡೆಯ ಸದಸ್ಯರು ಮತ್ತು ಅವರ ಸಹವರ್ತಿಗಳ ನಡುವಿನ ಸಂವಾದವು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಮುಂಬಯಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ| ಟಿ. ಪಿ. ಲಹಾನೆ ಹೇಳಿದರು.
ಆ್ಯಂಟಿವೈರಲ್ ಔಷಧಗಳ ಅನಗತ್ಯ ಬಳಕೆಯನ್ನು ವೈದ್ಯರು ತಪ್ಪಿಸಬೇಕು ಎಂದು ರಾಜ್ಯಮಟ್ಟದ ಕಾರ್ಯಪಡೆಯ ನೇತೃತ್ವ ವಹಿಸಿರುವ ಡಾ| ಸಂಜಯ್ ಓಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್