ಸೋಂಕಿತರ ನಿರ್ವಹಣೆಯತ್ತ ಗಮನ ಹರಿಸಿ: ಇಕಾಲ್ ಚಹಲ್
Team Udayavani, Sep 6, 2020, 6:39 PM IST
ನಾಗಪುರ, ಸೆ. 5: ಕೋವಿಡ್ ಸೋಂಕಿತರ ಹೆಚ್ಚಳದಿಂದ ಚಿಂತೆಗೊಳಗಾಗುವ ಬದಲಿಗೆ ಚಿಕಿತ್ಸೆಯತ್ತ ಗಮನ ಹರಿಸಬೇಕು ಎಂದು ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಚಹಲ್ ಶುಕ್ರವಾರ ಹೇಳಿದ್ದಾರೆ.
ಪರಿಸ್ಥಿತಿಯನ್ನು ಎದುರಿಸುವಾಗ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಾಮರ್ಥ್ಯವು ಪ್ರಮುಖ ಅಳತೆಕೋಲು ಆಗಿರಬೇಕು ಎಂದವರು ನುಡಿದಿದ್ದಾರೆ. ನಾಗಪುರದ ಕೋವಿಡ್ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ನಾಗಪುರ ಉಸ್ತುವಾರಿ ಸಚಿವ ನಿತಿನ್ ರೌತ್ ಅವರು ಚಹಲ್ ಮತ್ತು ತಜ್ಞ ವೈದ್ಯರ ತಂಡದ ಸಭೆ ಕರೆದಿದ್ದರು. ಚಹಲ್ ಇಲ್ಲಿ ಉನ್ನತ ಆಡಳಿತ, ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಅವರ ಜತೆಗೆ ಮಾತುಕತೆ ನಡೆಸಿದರು.
ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಎಷ್ಟು ದಿನ ಮುಂದುವರಿಯುತ್ತದೆ ಎಂದು ಯಾರಿಗೂ ಗೊತ್ತಿಲ್ಲ, ನಾವು ಈ ಸುದೀರ್ಘ ಯುದ್ಧಕ್ಕೆ ಬಲವಾದ ಸಿದ್ಧತೆಯನ್ನು ಹೊಂದಿರಬೇಕು ಎಂದರು. ಯಾವುದೇ ನಗರದ ಪರಿಸ್ಥಿತಿಯ ಮೌಲ್ಯಮಾಪನವು ಕೇವಲ ಸಂಖ್ಯೆಗಳ ಆಧಾರದ ಮೇಲೆ ಇರಬಾರದು, ಆದರೆ ಅದರ ಪ್ರಮುಖ ಅಳತೆಕೋಲು ಸೋಂಕಿತರ ನಿರ್ವಹಣೆ, ಆರೈಕೆ ಆಗಿರಬೇಕು ಎಂದರು.
ನಾಗಪುರದ ಚೇತರಿಕೆ ಪ್ರಮಾಣ ಶೇ.66.26ರಷ್ಟಿದೆ ಎಂದು ಸಚಿವ ರಾವುತ್ ಹೇಳಿದ್ದಾರೆ. ನಾವು ಕೋವಿಡ್ ಆಸ್ಪತ್ರೆಗಳಲ್ಲಿನ ಆಸ್ಪತ್ರೆ ನಿರ್ವಹಣೆ ಮತ್ತು ಚಿಕಿತ್ಸಾ ಕೊಠಡಿಗಳ ಬಗ್ಗೆ ಚರ್ಚಿಸಿದ್ದೇವೆ. ವಲಯವಾರು ಮೇಲ್ವಿಚಾರಣೆಗೆ ನಾವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಆಸ್ಪತ್ರೆಯ ಹಾಸಿಗೆಗಳ ಲಭ್ಯತೆಯನ್ನು ತಿಳಿಯಲು ನಾವು ಡ್ಯಾಶ್ ಬೋರ್ಡ್ ಸೌಲಭ್ಯವನ್ನು ಒದಗಿಸಲಿದ್ದೇವೆ ಮತ್ತು ಲ್ಯಾಬ್ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ