ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಉಚಿತ ಬ್ಲಾಂಕೆಟ್ ವಿತರಣೆ
Team Udayavani, Feb 25, 2018, 4:00 PM IST
ಮುಂಬಯಿ: ಗೋರೆ ಗಾಂವ್ ಕರ್ನಾಟಕ ಸಂಘ ಹಾಗೂ ಶ್ರೀ ಸತ್ಯಸಾಯಿ ಸಂಘಟನೆಯ ಜಂಟಿ ಆಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಸುಮಾರು 150ಕ್ಕೂ ಅಧಿಕ ಮಂದಿಗೆ ಉಚಿತ ಬ್ಲಾಂಕೆಟ್ ವಿತರಣೆಯು ಇತ್ತೀಚೆಗೆ ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಮಿನಿ ಸಭಾಗೃಹದಲ್ಲಿ ಲಾಲ್ಪುಲ್ ಚಂದ್ ಪಟೇಲ್ 163 ಇವರ ವತಿಯಿಂದ ಜರಗಿತು.
ಅತಿಥಿಯಾಗಿ ಪಾಲ್ಗೊಂಡ ಲಾಲ್ಪುಲ್ ಚಂದ್ ಪಟೇಲ್ 123 ಸಂಸ್ಥೆಯ ಮಾಸ್ಟರ್ ಡಾ| ಚೇತನ್ ಆರೋರ ಅವರು ಉಪಸ್ಥಿತರಿದ್ದರು. ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ, ಸುಮಿತ್ರಾ ಗುಜರನ್, ಕೋಶಾಧಿಕಾರಿ ವಿಶಾಲಾಕ್ಷಿ ವೊಲವೂರ, ಮಾಜಿ ಕಾರ್ಯಾಧ್ಯಕ್ಷೆ ಸುಚಲತಾ ಪೂಜಾರಿ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಸಹಾಯ ಮಾಡುತ್ತಿರಬೇಕು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ನಾರ್ ಇವರು, ಸಂಘದ ವಜ್ರಮಹೋತ್ಸವ ಸಂದರ್ಭದಲ್ಲಿ ಬ್ಲಾಂಕೆಟ್ ವಿತರಣೆ ಮಾಡುವುದರಿಂದ ವಜ್ರ ಮಹೋತ್ಸವಕ್ಕೆ ಮೆರುಗು ನೀಡಿದಂತಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತಿರಬೇಕು. ಇದು ನಮ್ಮ ಧರ್ಮವೂ ಹೌದು. ಇಂತಹ ಕಾರ್ಯಕ್ರಮಗಳು ಜರಗುವುದರಿಂದ ಬಡ ಜನರಿಗೆ ಸಹಾಯ ಹಾಗೂ ನಮ್ಮ ಸಂಘವು ಪ್ರಶಂಸೆಗೊಳಪಡುತ್ತದೆ. ಹಿಂದುಳಿದವರಿಗೆ ಸಹಾಯ ಮಾಡುವುದರಲ್ಲಿ ನಮ್ಮ ಸಂಘವು ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಸುಚಲತಾ ಪೂಜಾರಿ ಅವರು ಜನಮೆಚ್ಚುಗೆಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದರು.
ಸತ್ಯಸಾಯಿ ಸಂಘಟನೆಯ ಸದಸ್ಯರಾದ ಮೂರ್ತಿ ಅಯ್ಯರ್, ಸತೀಶ್ ಅಯ್ಯರ್, ವಿನಿತ್ ಅಮೀನ್, ಸುನೀತ್ ಅಮೀನ್, ಅನುಸೂಯಾ ಅಯ್ಯರ್, ಶೋಭಾ ಅಯ್ಯರ್, ಯುವ ವಿಭಾಗದ ಸದಸ್ಯರಾದ ಸುಜಾತಾ ಕಿರಿಮಾನ್, ನೈನಾ ಅಮೀನ್, ಸುಜಾತಾ ಸುವರ್ಣ, ಆರುಂಧತಿ, ವನಿತಾ ಪಾಲನ್, ವಿನಂತಿ ಶೆಟ್ಟಿ, ಶಾರದಾ ಬಂಗೇರ, ಸುಜಾತಾ ಕೋಟ್ಯಾನ್ ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯ ಕ್ರಮದಲ್ಲಿ ನೂರಾರು ಮಂದಿಗೆ ಉಚಿತವಾಗಿ ಬ್ಲಾಂಕೆಟ್ಗಳನ್ನು ಗಣ್ಯರು ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ