ಭಾಯಂದರ್ ಮಂಥನ್ ಸಾಮಾಜಿಕ ಸೇವಾ ಸಂಸ್ಥೆ; ಉಚಿತ ಆರೋಗ್ಯ ತಪಾಸಣೆ ಶಿಬಿರ
Team Udayavani, Sep 7, 2021, 2:24 PM IST
ಭಾಯಂದರ್: ಭಾಯಂದರ್ ಪೂರ್ವದ ಮಂಥನ್ ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವು ಸೆ. 1 ರಂದು ಅಪರಾಹ್ನ 4ರಿಂದ ರಾತ್ರಿ 9ರ ವರೆಗೆ ನವಘರ್ ರೋಡ್ನ ಸಾಯಿಪಾರ್ಕ್ ವಸತಿ ಸಂಕೀರ್ಣದ ಆವರಣದಲ್ಲಿ ನಡೆಯಿತು.
ಸ್ಥಳೀಯ ಶಾಸಕ ಪ್ರತಾಪ್ ಸರ್ನಾಯಕ್ ಮಾರ್ಗದರ್ಶನದಲ್ಲಿ ಹಾಗೂ ವಾರ್ಡ್ ನಂಬರ್ ಮೂರರ ಶಿವಸೇನೆ ಶಾಖೆಯ ಸಂಪೂರ್ಣ ಸಹಕಾರ ದೊಂದಿಗೆ ಮಂಥನ್ ಸಾಮಾಜಿಕ ಸಂಸ್ಥೆಯ ಅಧ್ಯಕ್ಷ, ಸಮಾಜ ಸೇವಕ ರಾಜೇಶ್ ವೆತೋಸ್ಕರ್ ಅವರ ಮುಂದಾಳತ್ವದಲ್ಲಿ ನಡೆದ ಈ ಶಿಬಿ ರದಲ್ಲಿ ತುಳು-ಕನ್ನಡಿಗರು ಸಹಿತ ಸುಮಾರು 297 ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.
ಇದನ್ನೂ ಓದಿ:ಯುವಕರಿಗೆ ಹೇಳಿ ಮಾಡಿಸಿದಂತಿದೆ ನಾಯ್ಸ್ ಫಿಟ್ ಕೋರ್ ಸ್ಮಾರ್ಟ್ ವಾಚ್..! ಇಲ್ಲಿದೆ ಮಾಹಿತಿ
ಮುಬಯಿ, ನಲಸೋಪರದ ರಿಯಲೇಬಲ್ ಪೆಥೋಲಜಿ ಲ್ಯಾಬ್ ಮತ್ತು ತಾಬ್ಡೆ ಆಪ್ಟಿಕಲ್ಸ್ನ ಸಿಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಾರ್ಡ್ ಕ್ರಮಾಂಕ ಮೂರರ ಶಿವಸೇನೆ ಶಾಖಾ ಅಧ್ಯಕ್ಷ ಶಶಿಕಾಂತ್ ನಾಯಕ್ ಮತ್ತು ಪದಾಧಿ ಕಾರಿಗಳು, ಸದಸ್ಯರು, ಮಂಥನ್ ಸಂಸ್ಥೆಯ ಸದಸ್ಯರಾದ ವೇಣು ಗೋಪಾಲ್ ಪುತ್ರನ್, ಸುಜಾತಾ ಕೋಟ್ಯಾನ್, ಹರೀಶ್ ಪೂಜಾರಿ, ಸಂಜಯ್ ಭಾಯಿ, ಪ್ರದೀಪ್ ತಾಬ್ಡೆ, ತಿಮ್ಮಪ್ಪ ಪೂಜಾರಿ ಮೊದಲಾದವರು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು