ಘೋಡ್ಬಂದರ್ ರೋಡ್ ಕನ್ನಡ ಅಸೋಸಿಯೇಶನ್:ವಿಹಾರ ಕೂಟ
Team Udayavani, Aug 30, 2017, 4:50 PM IST
ಮುಂಬಯಿ: ಘೋಡ್ಬಂದರ್ ರೋಡ್ ಕನ್ನಡ ಅಸೋಸಿಯೇಶನ್ ವತಿಯಿಂದ ಸಂಘದ ಸದಸ್ಯ ಬಾಂಧವರೆಲ್ಲರೂ ಒಂದಾಗಿ ಇತ್ತೀಚೆಗೆ ಅಂಬರ್ನಾಥ್ನ ಆನಂದ್ ರಿಸಾರ್ಟ್ನಲ್ಲಿ ವಿಹಾರ ಕೂಟ ಆಯೋಜಿಸಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಾಲ ಕಳೆದರು.
ಘೋಡ್ಬಂದರ್ರೋಡ್ ಕನ್ನಡ ಅಸೋಸಿಯೇಶನ್ನ ಅಧ್ಯಕ್ಷರಾದ ವಿಕ್ರಮಾನಂದ ಶೆಟ್ಟಿ ಅವರ ಸಾರಥ್ಯದಲ್ಲಿ ಆಯೋಜಿಸಲಾದ ವಿಹಾರ ಕೂಟದಲ್ಲಿ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು ತಮ್ಮ ಪರಿವಾರ ಸಮೇತರಾಗಿ ವಿಹಾರ ಕೂಟದಲ್ಲಿ ಭಾಗವಹಿಸಿದರು.
ಥಾಣೆಯ ಘೋಡ್ಬಂದರ್ನಿಂದ ಎರಡು ಬಸ್ಸುಗಳ ಮೂಲಕ ಆನಂದ್ ರಿಸಾರ್ಟ್ಗೆ ತೆರಳಿದ ಸದಸ್ಯರು ಎಡೆಬಿಡದೆ ಸುರಿಯುವ ಮಳೆಯನ್ನು ಲೆಕ್ಕಿಸದೆ ವಿಹಾರ ಕೂಟದ ಸಂಪೂರ್ಣ ಆನಂದವನ್ನು ಪಡೆದು ಸಂಭ್ರಮಿಸಿದರು.
ಸದಸ್ಯರಿಗೆಲ್ಲ ಅವರವರ ವಯೋಮಿತಿಗೆ ಅನುಗುಣವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಸ್ಥಳದಲ್ಲೇ ಬಹುಮಾನ ನೀಡಿ ಅಭಿನಂದಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ