ಗೋರೆಗಾಂವ್ ಕರ್ನಾಟಕ ಸಂಘ: ಮಹಿಳಾ ಭಾರತಿ ಸಮ್ಮೇಳನ ಸಮಾರೋಪ
Team Udayavani, Jan 3, 2019, 12:07 PM IST
ಮುಂಬಯಿ: ಯತ್ರ ನಾರ್ಯಸ್ತು ಪೂಜ್ಯಂತೆ ಇಂತಹ ಶ್ಲೋಕಗಳೆಲ್ಲ ಒಂದು ರೀತಿಯಲ್ಲಿ ಮಹಿಳೆಯರನ್ನು ಮೂರ್ಖರನ್ನಾ ಗಿಸುವುದಕ್ಕೆ ಇರುವಂಥದ್ದಾಗಿದೆ. ಪುರಾಣಗಳಿಗಿಂತ ನಮ್ಮ ಪಾಡªನಗಳಲ್ಲಿ ಮಹಿಳೆಯರ ಬಗ್ಗೆ ಬಹಳಷ್ಟು ಒಳ್ಳೆಯ ಸಂಗತಿಗಳನ್ನು ಕಾಣಬಹುದು. ಪುರುಷ ಪ್ರಧಾನ ಸಮಾಜದ ವಿರುದ್ಧ ಪಾಡªನಗಳಲ್ಲಿ ಹೆಣ್ಣಿನ ದನಿ ಗಟ್ಟಿಯಾಗಿ ಕಾಣಿಸುತ್ತದೆ. ಅಲ್ಲಿ ಹೆಣ್ಣು ಕಣ್ಣೀರು ಹಾಕುವುದಿಲ್ಲ. ಶೋಷಣೆಯ ವಿರುದ್ಧ ಪ್ರತಿಭಟಿಸುತ್ತಾಳೆ. ಕೃಷಿ ಸಮಾಜದಲ್ಲಿ ಹೆಣ್ಣು ಸಶಕ್ತಳಾಗಿ ಮೂಡಿ ಬಂದಿದ್ದಾಳೆ ಎಂದು ಸಾಹಿತಿ ಡಾ| ಇಂದಿರಾ ಹೆಗಡೆ ಅವರು ನುಡಿದರು.
ವಜ್ರ ಮಹೋತ್ಸವ ಸಂಭ್ರಮ ದಲ್ಲಿರುವ ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗವು ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಸ್ಮಾರಕ ಸಭಾಗೃಹದಲ್ಲಿ ಹಮ್ಮಿಕೊಂಡ 6 ನೇ ವಾರ್ಷಿಕ ಮಹಿಳಾ ಭಾರತಿ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ದಿನಗಳಲ್ಲಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಉದಾಹರಣೆಗೆ ಭೂತಾರಾಧನೆಯಲ್ಲಿ ಎಲ್ಲವೂ ಪಲ್ಲಟವಾಗುತ್ತಿದೆ. ಊರಲ್ಲಿ ಮನೆಗಳು ಖಾಲಿಯಾಗುತ್ತಿದ್ದು, ಎಲ್ಲ ಪರವೂರುಗಳಲ್ಲಿ ಹೆಚ್ಚಾಗಿದ್ದಾರೆ. ಊರಲ್ಲಿ ಕೇವಲ ಭೂತ ಮಾತ್ರ ಇರುತ್ತದೆ. ಭೂತಾರಾಧನೆಯ ಸಂಸ್ಕೃತಿ ಬದಲಾಗುತ್ತಿದೆ. ಪಂಬದ ಹೇಳಿದ್ದಷ್ಟೇ ಉಳಿದು ಬಿಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅಷ್ಟಮಂಗಳದಂಥ ಪ್ರಶ್ನೆಗಳಿಗೆ ಮೊರೆ ಹೋಗುವ ಬದಲು ನಾವು ನಂಬಿದ ಭೂತವನ್ನು ನಂಬಿದರೆ ಸಾಕು ಎಂದು ಬದಲಾಗುತ್ತಿರುವ ಸಂಸ್ಕೃತಿಯತ್ತ ಬೆಳಕು ಚೆಲ್ಲಿ ಮಹಿಳಾ ಭಾರತಿಯಲ್ಲಿ ಊರಿನಿಂದ ಆಗಮಿಸಿದ ಉಪನ್ಯಾಸಕಿಯರಾದ ರೇಖಾ ವಿ. ಬನ್ನಾಡಿ ಮತ್ತು ಅತ್ರಾಡಿ ಅಮೃತಾ ಶೆಟ್ಟಿ ಅವರ ಉಪನ್ಯಾಸಗಳನ್ನು ವಿಶ್ಲೇಷಿಸಿದ ಅವರು, ಬಹುತ್ವ ಭಾರತದಲ್ಲಿನ ವೈಶಿಷ್ಟÂಗಳನ್ನು ನೆನಪಿಸಿಕೊಂಡರು. ಇಂತಹ ಮಹಿಳಾ ಭಾರತಿ ಸಮ್ಮೇಳನವನ್ನು ಹಮ್ಮಿಕೊಂಡು ಸ್ತ್ರೀ ಚಿಂತನೆಗೆ ಬೆಂಬಲಿಸಿದ ಗೋರೆಗಾಂವ್ ಕರ್ನಾಟಕ ಸಂಘವನ್ನು ಅಭಿನಂದಿಸಿ ವಜ್ರಮಹೋತ್ಸವ ಸಂಭ್ರಮಕ್ಕೆ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಅವರು ಮಾತನಾಡಿ, ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಬಹಳ ಹಿಂದೆಯೇ ಮಹಿಳೆಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಾಖಲೆಯಿದೆ. ಇಂದು ಸಂತೋಷದ ಸಂಗತಿ. ಇಂದು ಸ್ತ್ರೀ ಜಗತ್ತು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಯಾವುದೇ ಕೆಲಸಕ್ಕೂ ಅವಳು ಸೈ ಎನಿಸಿದ್ದಾಳೆ. ಯುದ್ಧ ವಿಮಾನಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ. ವ್ಯಾಪಾರ, ಉದ್ಯಮಗಳನ್ನು ತಾವೇ ನಡೆಸುತ್ತಿದ್ದಾರೆ. ಹಾಗಿದ್ದೂ ಅಲ್ಲಲ್ಲಿ ತಪ್ಪು ಹುಡುಕುವವರು, ಅವಮಾನ ಮಾಡುವವರಿದ್ದಾರೆ. ಇಂದು ಹೆಣ್ಣು ಇಲ್ಲಿ ಧೈರ್ಯಶಾಲಿಯಾಗಿ ಪ್ರತಿಭಟಿಸುತ್ತಿದ್ದಾಳೆ. ಭವಿಷ್ಯದಲ್ಲಿ ಮಹಿಳೆಯರ ಸ್ಥಿತಿಗತಿ ಇನ್ನಷ್ಟು ಉತ್ತಮವಾಗಲಿದೆ. ಸುಂದರ ವಾಗಲಿದೆ. ಮಹಿಳೆಗೆ ಮನೆಯಲ್ಲೂ, ಬೆಂಬಲ ಪ್ರೋತ್ಸಾಹ ಸಿಗುತ್ತಿರಲಿ ಎಂಬ ಹಾರೈಕೆ ನನ್ನದು ಎಂದರು.
ಅತಿಥಿಗಳನ್ನು ಸುಜಾತಾ ಶೆಟ್ಟಿ ಪರಿಚಯಿಸಿದರು. ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಗೌರವಿಸಿದರು. ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಜ್ರ ಮಹೋತ್ಸವ ಆಚರಿಸುತ್ತಿರುವ ಸಂಘದ ಸಾಧನೆಗಳನ್ನು, ಯೋಜನೆಗಳನ್ನು ವಿವರಿಸಿ,
ಮಹಿಳಾ ವಿಭಾಗದ ಸಾಧನೆಗಳನ್ನು ಶ್ಲಾಘಿಸಿದರು.
ಸುಮಿತ್ರಾ ಆರ್. ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ವಜ್ರಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಎಸ್. ನಾಯಕ್ ವಂದಿಸಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ