ಗೋರೆಗಾಂವ್ ಕರ್ನಾಟಕ ಸಂಘ: ಶ್ರೀ ಪುರಂದರ ದಾಸರ ಕೀರ್ತನೆ ಸ್ಪರ್ಧೆ
Team Udayavani, Feb 26, 2019, 1:44 PM IST
ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರೀ ಪುರಂದರ ದಾಸರ ಕೀರ್ತನೆ ಸ್ಪರ್ಧೆಯು ಫೆ. 9ರಂದು ಗೋರೆಗಾಂವ್ ಪಶ್ಚಿಮದ ಕೇಶವಗೋರೆ ಸ್ಮಾರಕ ಟ್ರಸ್ಟ್ ಸಭಾಗೃಹದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಮುಂಬಯಿಯ ಹದಿನೈದು ಸಂಘ-ಸಂಸ್ಥೆಗಳು ಹಾಗೂ ಭಜನಾ ಮಂಡಳಿಗಳು ಭಾಗವಹಿಸಿದ್ದವು.
ಬಂಗೂರ್ ನಗರ ಕನ್ನಡ ಬಳಗ, ಗೋರೆಗಾಂವ್ ಕರ್ನಾಟಕ ಸಂಘ, ಶ್ರೀಮತಿ ಸುಮಿತ್ರಾ ಆರ್. ಕುಂದರ್ ಅವರ ಸಂಸ್ಮರಣೆಯಲ್ಲಿ ಸ್ಥಾಪಿಸಿದ ದತ್ತಿನಿಧಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಅವರ ಧನ ಸಂಗ್ರಹದಿಂದ ನಡೆದ ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಜಯಂತಿ ಕುಟ್ಟಿ ಶೆಟ್ಟಿ ಉಪಸ್ಥಿತರಿದ್ದರು. ಆಶಾ ಕುಲಕರ್ಣಿ, ಗೋಪಿನಾಥ್ ಎಸ್. ಬಂಗೇರ ಅವರು ಭಜನ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ಸಮೂಹ ಗಾಯನದಲ್ಲಿ ಶಿವಪ್ರಿಯ ಭಜನಾ ಮಂಡಳಿ ಮೀರಾರೋಡ್ ಪ್ರಥಮ, ಹವ್ಯಕ ಸಂಘ ಕಲೀನಾ ದ್ವಿತೀಯ, ವಿಟuಲ ಭಜನಾ ಮಂಡಳಿ ಮೀರಾರೋಡ್ ತೃತೀಯ ಬಹುಮಾನ ಪಡೆದವು.
ವೈಯಕ್ತಿಕ ವಿಭಾಗದಲ್ಲಿ ಗೋಪಾಲಕೃಷ್ಣ ಭಜನಾ ಮಂಡಳಿಯ ವಿನಯಾ ಅನಂತಕೃಷ್ಣ ಅವರು ಪ್ರಥಮ, ವಿರಾರ್ ಜಿಎಸ್ಬಿ ಸೇವಾ ಮಂಡಳದ ಪ್ರಭಾ ಸುವರ್ಣ ದ್ವಿತೀಯ, ಶಿವಪ್ರಿಯಾ ಭಜನಾ ಮಂಡಳಿ ಮೀರಾರೋಡ್ ಇದರ ಕಾವ್ಯಾ ಇವರು ತೃತೀಯ ಬಹುಮಾನ ಪಡೆದರು.
ಸಮೂಹಗಾಯನಲ್ಲಿ ಶಿವಪ್ರಿಯ ಭಜನಾ ಮಂಡಳಿಗೆ ಚಲಿತ ಫಲಕ ಮತ್ತು ವೈಯಕ್ತಿಕ ವಿಭಾಗದಲ್ಲಿ ಜಿ. ಎಸ್. ಕಾರಂತರು ಪ್ರಾಯೋಜಿಸಿದ ಚಲಿತ ಫಲಕವನ್ನು ವಿನಯಾ ಕೃಷ್ಣರಿಗೆ ಪ್ರದಾನಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಇಂದಿರಾ ಮೊಲಿ ಕಾರ್ಯಕ್ರಮ ನಿರ್ವಹಿಸಿದರು.
ಮಾಜಿ ಕಾರ್ಯಾಧ್ಯಕ್ಷೆ ವಸಂತಿ ಕೋಟೆಕಾರ್ಬಹುಮಾನಿತರ ಯಾದಿಯನ್ನು ಓದಿದರು. ಮಾಜಿ ಕಾರ್ಯಾಧ್ಯಕ್ಷೆ ಸುಮಿತ್ರಾ ಕುಂದರ್ ಮತ್ತು ಮಾಜಿ ಸಂಚಾಲಕಿ ಸುಗುಣಾ ಬಂಗೇರ, ಗ್ರಂಥಾಯನ ನಿರ್ದೇಶಕಿ ಪದ್ಮಜಾ ಮಣ್ಣೂರ ಅವರು ಸಹಕರಿಸಿದರು. ಮುಖ್ಯ ಅತಿಥಿಗಳು ಮತ್ತು ತೀರ್ಪುಗಾರರನ್ನು ಶುಭದಾ ಪೋದ್ದಾರ್, ಚಂದ್ರಾವತಿ ಬಿ. ಶೆಟ್ಟಿ, ಸುಮತಿ ಶೆಟ್ಟಿ ಪರಿಚಯಿಸಿದರು.
ಸಂಚಾಲಕಿ ಉಷಾ ಪಿ. ಸುವರ್ಣ ವಂದಿಸಿದರು. ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು,ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ
ದರು. ಸಂಗೀತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ