ಗಲ್ಫ್ ಕನ್ನಡಿಗ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿಜೂರು ಜಿ ಮೋಹನ್ ದಾಸ್ ವಿಧಿವಶ
ಮಣಿಪಾಲದ ಕೆಎಂಸಿಯಲ್ಲಿ ಡಿ ಫಾರ್ಮ್ ಮಾಡಿದ್ದ ಮೋಹನದಾಸ್ ಅವರು ಗಲ್ಫ್ ರಾಜ್ಯದಲ್ಲಿ ವಿವಿಧ ಉನ್ನತ ಹುದ್ದೆಯಲ್ಲಿದ್ದರು.
Team Udayavani, Aug 31, 2020, 4:30 PM IST
ಬೈಂದೂರು: 2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಅನಿವಾಸಿ ಭಾರತೀಯ ಬೈಂದೂರು ಮೂಲದ ಬಿ.ಜಿ.ಮೋಹನ್ ದಾಸ್ ಅವರು ಅನಾರೋಗ್ಯದಿಂದ ಸೋಮವಾರ(ಆಗಸ್ಟ್ 31, 2020) ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಮಣಿಪಾಲದ ಕೆಎಂಸಿಯಲ್ಲಿ ಡಿ ಫಾರ್ಮ್ ಮಾಡಿದ್ದ ಮೋಹನದಾಸ್ ಅವರು ಗಲ್ಫ್ ರಾಜ್ಯದಲ್ಲಿ ವಿವಿಧ ಉನ್ನತ ಹುದ್ದೆಯಲ್ಲಿದ್ದು, ಅಲ್ಲಿಯ ಕನ್ನಡಿಗರ ಏಳಿಗೆಗಾಗಿ ದುಡಿದಿದ್ದರು. ಕನ್ನಡ ಕೂಟವನ್ನು ಕಟ್ಟಿ ಸಾಹಿತ್ಯ ಚಟುವಟಿಕೆ ನಡೆಸುತ್ತಿದ್ದರು.
ಸುಮಾರು 1980ರ ದಶಕದಲ್ಲಿ ಮಣಿಪಾಲದಿಂದ ಗಲ್ಫ್ ಸೇರಿದ್ದ ಬಿಜೂರು ಮೋಹನದಾಸ್ ಅವರು ಯುಎಇಯ ದುಬೈನಲ್ಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದ್ದ ಕೀರ್ತಿ ಇವರದ್ದಾಗಿತ್ತು.
ದುಬೈನಲ್ಲಿ ಸಾಕಷ್ಟು ಕನ್ನಡಪರ ಸಾಹಿತ್ಯ ಚಟುವಟಿಕೆಯ ರೂವಾರಿಯಾಗಿದ್ದರು. ಇವರ ಈ ಸೇವಾ ಕಾರ್ಯವನ್ನು ಪರಿಗಣಿಸಿ ಹುಟ್ಟೂರಾದ ಬಿಜೂರಿನಲ್ಲಿ ಮೋಹನದಾಸ್ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ