ವಿಶೇಷ ಪೂಜೆ-ಸಾಧಕರಿಗೆ ಗೌರವಾರ್ಪಣೆ
Team Udayavani, Apr 23, 2021, 11:17 AM IST
ಮುಂಬಯಿ: ಮೀರಾರೋಡ್ ಶ್ರೀ ಶನೀಶ್ವರ ಮಂದಿರದಲ್ಲಿ ಇತ್ತೀಚೆಗೆ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು.ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಇದರ ಲ್ಯಾಮಿಂಟನ್ರೋಡ್ ಶಾಖೆಯ ಪ್ರಬಂಧಕಾರದ ವೀರೇಂದ್ರ ಕುಂದರ್ ಮತ್ತು ಶನಿ ಮಹಾತ್ಮ ಪೂಜಾ ಸಮಿತಿ ಖಾರ್ ರೋಡ್ ಇದರ ಜತೆ ಕೋಶಾಧಿಕಾರಿ ನಾಗೇಶ್ ಸುವರ್ಣ ಅವರನ್ನು ಮಂದಿರದ ವತಿಯಿಂದ ವಿದ್ವಾನ್ ವಿಷ್ಣು ಮೂರ್ತಿ ಅಡಿಗ ಮತ್ತು ಗೌರವ ಅಧ್ಯಕ್ಷರಾದ ವಿನೋದ್ ವಾಘಸಿಯಾ ಅವರು ದೇವರ ಮಹಾಪ್ರಸಾದವನ್ನಿತ್ತು ಗೌರವಿಸಿ ಶುಭಹಾರೈಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಗುಣಕಾಂತ್ ಶೆಟ್ಟಿ ಕರ್ಜೆ, ಕೋಶಾಧಿಕಾರಿ ಅಚ್ಚುತಾ ಕೋಟ್ಯಾನ್, ಪೂಜಾ ಸಮಿತಿಯ ಭುವಾಜಿ ನಾರಾಯಣ ಶೆಟ್ಟಿ, ಜತೆ ಕೋಶಾಧಿಕಾರಿ ಜಯಕರ ಶೆಟ್ಟಿ ಮುದ್ರಾಡಿ, ಉಷಾ ದಿನೇಶ್ ಶೆಟ್ಟಿಗಾರ್, ಶಕುಂತಳಾ ಶೆಟ್ಟಿ, ಕಸ್ತೂರಿ ಶೆಟ್ಟಿ, ವಿನಯ್ ಹರೀಶ್ ಶೆಟ್ಟಿ, ಕಾರ್ಯಾ ಶೆಟ್ಟಿಗಾರ್, ಜಯೇಶ್ ಸುವರ್ಣ, ಶ್ರೇಯಸ್, ಅರ್ಚಕರಾದ ನೀರವ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಕಳ ಸದಾನಂದ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು