ಸವಾಲಿನ ಮಧ್ಯೆ ಬದುಕು ಕೊಟ್ಟಿಕೊಳ್ಳ ಬೇಕಿದೆ ಹೊಟೇಲ್‌ ಕಾರ್ಮಿಕರು


Team Udayavani, Oct 7, 2020, 6:35 PM IST

Mumbai-tdy-1

ಸಾಂದರ್ಭಿಕ ಚಿತ್ರ

ಮುಂಬಯಿ, ಅ. 6: ಬದಲಾಗುತ್ತಿರುವ ಕಾಲದ ಜತೆಗೆ ಹೊಂದಿಕೊಂಡು ಬದುಕನ್ನು ಕಟ್ಟಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇದು ಪ್ರಕೃತಿಯ ನಿಯಮವೂ ಹೌದು. ಕೋವಿಡ್‌ಮನುಕುಲಕ್ಕೆ ಅನೇಕ ರೀತಿಯ ಸವಾಲನ್ನು ತಂದೊಡ್ಡಿದರೂ ಜೀವನವನ್ನು ಮತ್ತೆ ಹಳಿಗೇರಿಸುವ ಪ್ರಯತ್ನ ನಮ್ಮದಾಗಿರಬೇಕು. ಮುಂಬಯಿ ನಗರ ಮೊದಲಿನಂತಿಲ್ಲ. ಆರೇಳು ತಿಂಗಳುಗಳಿಂದ ನಿಂತ ನೀರಾಗಿದ್ದ ಮಹಾನಗರ ಪ್ರಸ್ತುತ ಮತ್ತೆ ನಿಧಾನಗತಿಯಲ್ಲಿ ಪೂರ್ವಸ್ಥಿತಿಯತ್ತ ಸಾಗುತ್ತಿರುವುದನ್ನು ಕಾಣಬಹುದು. ಅದರಲ್ಲೂ ಮಾರ್ಚ್‌ ಕೊನೆಯಲ್ಲಿ ಮುಚ್ಚಿದ್ದ ಹೊಟೇಲ್‌, ಕ್ಯಾಂಟಿನ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಮತ್ತೆ ತೆರೆಯಲು  ಸರಕಾರ ಅನುಮತಿ ನೀಡಿದ್ದು, ಹೊಟೇಲ್‌ ಕಾರ್ಮಿಕರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ.

ಹೊಟ್ಟೆಪಾಡಿಗಾಗಿ ನಗರ ಸೇರಿದ ಹೊಟೇಲ್‌ ಕಾರ್ಮಿಕರಿಗೆ ಲಾಕ್‌ಡೌನ್‌ನಿಂದಾಗಿ ನಿತ್ಯದ ದುಡಿಮೆ ಇಲ್ಲದೆ ಅನೇಕ ರೀತಿಯ ಸಂಕಷ್ಟ ಗಳು ಎದುರಾದವು. ಹಲವು ಮಂದಿ ಹೊಟೇಲ್‌ ಉದ್ಯಮಿಗಳು ಕಾರ್ಮಿಕರಿಗೆ ಕೆಲವು ತಿಂಗಳ ಕಾಲ ಅರ್ಧ ವೇತನ ನೀಡಿರು ವುದಲ್ಲದೆ, ಆಹಾರದ ಕಿಟ್‌ಗಳನ್ನು ವಿತರಿಸಿ ರುವುದು ಸಹಕಾರಿಯಾಗಿತ್ತು. ಲಾಕ್‌ಡೌನ್‌ ಹಂತ ಹಂತವಾಗಿ ಸಡಿಲಗೊಂಡ ಬಳಿಕ ಹೆಚ್ಚಿನ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ತೆರಳಿದ್ದಾರೆ.

ಸ್ವತಃ ಸುರಕ್ಷೆ, ಗ್ರಾಹಕ ಸುರಕ್ಷೆ : ಇನ್ನೊಂದೆಡೆ ಪ್ರತೀ ಹೊಟೇಲ್‌ನಲ್ಲಿ ಗ್ರಾಹಕರ ಹರಿವನ್ನು ನಿಭಾಯಿಸಲು ಹಲವು ಸುರಕ್ಷಾ ಕ್ರಮಗಳನ್ನು ಜಾರಿಗೆ ತರುವುದರೊಂದಿಗೆ ಇಲ್ಲಿ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಿದೆ. ಹೆಚ್ಚಿನ ಹೊಟೇಲ್‌ ಗಳಲ್ಲಿ ಕಚೇರಿ, ಭದ್ರತೆ, ಮನೆಗೆಲಸ, ಅಡುಗೆಮನೆ, ಲಾಂಡ್ರಿ ಮತ್ತು ಭದ್ರತೆ ಸಹಿತ ಪ್ರತೀ ವಿಭಾಗಕ್ಕೆ ಸುರಕ್ಷೆ ಮತ್ತು ನೈರ್ಮಲ್ಯ ನಿಯಮಗಳನ್ನು ವಿಧಿಸಲಾಗಿದೆ. ಇವೆಲ್ಲವುಗಳಿಗೆ ಒಗ್ಗಿಕೊಂಡು ಹೊಟೇಲ್‌ ಕಾರ್ಮಿಕರು ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಇದೆ. ಸಿಬಂದಿ ಧರಿಸಬೇಕಾದ ರಕ್ಷಣಾತ್ಮ  ಉಡುಗೆ-ತೊಡುಗೆಯಲ್ಲದೆ ಹೋಟೆಲ್‌ ಪ್ರವೇಶಿಸುವವರೆಲ್ಲರೂ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಬೇಕಿದೆ. ಇದು ಕಾರ್ಮಿಕರಿಗೆ ಸೋಂಕು ಹರಡುವ ಭೀತಿಯನ್ನು ದೂರಗೊಳಿಸಿದಂತಾಗಿದೆ

ಚಾಲನೆಗೊಳ್ಳುತ್ತಿವೆ ಹೊಟೇಲ್‌-ರೆಸ್ಟೋರೆಂಟ್‌ :  ಪ್ರಸ್ತುತ ಅನೇಕ ಹೊಟೇಲ್‌ಗ‌ಳು ತೆರೆಯುತ್ತಿರುವುದರಿಂದ ಆರು ತಿಂಗಳು ದುಡಿಮೆ ಇಲ್ಲದೆ ಇದ್ದ ಹೊಟೇಲ್‌, ಕ್ಯಾಂಟಿನ್‌ ಗಳ ಕಾರ್ಮಿಕರು ಮತ್ತೆ ನಿಧಾನವಾಗಿ ನಗರ-ಉಪನಗರಗಳಿಗೆ ಬರಲಾರಂಭಿಸಿದ್ದಾರೆ. ಕೆಲವು ಕಾರ್ಮಿಕರಿಗೆ ಹೊಟೇಲ್‌ ಮಾಲಕರು ಸ್ವತಃ ಟಿಕೆಟ್‌ ಮತ್ತು ಪ್ರಮಾಣದ ವೆಚ್ಚ ಭರಿಸಿ ಬರಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಭೀತಿ ಇದ್ದರೂ ಮೊದಲಿನಂತೆ ಗ್ರಾಹಕರು ಬರುತ್ತಾರೆಯೇ, ರೈಲು ಸೇವೆಗಳಿಲ್ಲದೆ ಕೆಲಸಕ್ಕೆ ತಲುಪುವುದು ಹೇಗೆ ಎನ್ನುವ ಅನೇಕ ಪ್ರಶ್ನೆಗಳು ಕಾರ್ಮಿಕರದ್ದು. ಹೊಟೇಲ್‌, ರೆಸ್ಟೋರೆಂಟ್‌ಗಳು ಸ್ಥಳೀಯ ಅತಿಥಿಗಳಿಗೆ ಮಾತ್ರ ಸೇವೆ ಒದಗಿಸುತ್ತಿವೆ.

ಮತ್ತೆ ಬದುಕು ಕಟ್ಟಿಕೊಳ್ಳುತ್ತೇವೆ : ಈಗ ಮತ್ತೆ ಕೆಲಸ ಪ್ರಾರಂಭವಾಗುತ್ತಿವೆ. ಆದರೂ ಮೊದಲಿನಂತೆ ಗ್ರಾಹಕರು ಬರುವುದು ಕಷ್ಟ. ಆರು ತಿಂಗಳು ಕೆಲಸವಿಲ್ಲದೆ ಇದ್ದಿದ್ದರಿಂದ ಸಮಸ್ಯೆಗಳಾಗಿದ್ದವು. ಸರಕಾರದ ನಿಯಮ ಪಾಲಿಸಲು ಮಾಲಕರು ಸೂಚಿಸಿದ್ದಾರೆ. ಅದರಂತೆ ನಾವು ಪೂರ್ಣ ಕಾಳಜಿ ವಹಿಸುತ್ತೇವೆ. ಎಲ್ಲ ದಿನ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಮತ್ತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತೇವೆ.-ಭಾಸ್ಕರ್‌ ಪೂಜಾರಿ, ಕ್ಯಾಪ್ಟನ್‌, ಅಂಧೇರಿ ರಿಕ್ರಿಯೇಷನ್‌ ಕ್ಲಬ್‌.

ಕೆಲಸ ಆರಂಭವಾಗಿದೆ; ದೂರ ಪ್ರಯಾಣಕ್ಕೆ ಸಮಸ್ಯೆ  : ಕ್ಯಾಂಟೀನ್‌ ಪ್ರಾರಂಭಿಸಲಾಗಿದೆ. ಆದರೂ ಮೊದಲಿನಂತೆ ಗ್ರಾಹಕರಿಲ್ಲ. ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದ ನಮಗೆ ಮತ್ತೆ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರೈಲು ಸೇವೆ ಇಲ್ಲದ ಕಾರಣ ದೂರ ಪ್ರಯಾಣಕ್ಕೆ ಸಮಸ್ಯೆಯಾಗುತ್ತಿದೆ. ಹೆಚ್ಚಿನ ಸಮಯ ಬಸ್ಸಿನಲ್ಲಿ ಪ್ರಯಾಣಕ್ಕೆ ಹೋಗುವುದರಿಂದ ಸಮಯಕ್ಕೆ ಬಂದು ತಲುಪುವುದು ಕಷ್ಟ. -ಸಚಿನ್‌ ಚಂದನ್‌, ಗೌವೇಲ್‌ ಮಾಲ್‌ ಕ್ಯಾಂಟೀನ್‌ ಸಿಎಸ್‌ಟಿ

ರೈಲು ಪ್ರಯಾಣದ ಸೌಲಭ್ಯವಿಲ : ಹೊಟೇಲ್, ಕ್ಯಾಂಟಿನ್‌ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ರೈಲು ಪ್ರಯಾಣದ ಸೌಲಭ್ಯವಿಲ್ಲ. ಆದ್ದರಿಂದ ಅಲ್ಲಿ ಕೆಲಸಕ್ಕೆ ಹೋಗುವುದು ಕಷ್ಟ. ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಇದೆ. ಲೋಕಲ್‌ ರೈಲುಗಳು ಪ್ರಾರಂಭವಾಗುವವರೆಗೆ ಮನೆಯ ಹತ್ತಿರದಲ್ಲೇ ಉಪಾಹಾರ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದೇವೆ. ವ್ಯಾಪಾರ ಕಡಿಮೆಯಿದ್ದರೂ ಅದನ್ನು ಕೈ ಬಿಡುವ ಸ್ಥಿತಿಯಲ್ಲಿಲ್ಲ. -ಲಕ್ಷ್ಮಣ್‌ ಮೊಗವೀರ, ಭಾಯಂದರ್‌, ಕ್ಯಾಂಟೀನ್‌ ಕಾರ್ಮಿಕರು

ಜವಾಬ್ದಾರಿಯಿಂದ ಕಾರ್ಯನಿರ್ವಹಣೆ : ಹೊಟೇಲ್‌ಗ‌ಳಲ್ಲಿ ಶೇ. 50ರಷ್ಟು ಗ್ರಾಹಕರನ್ನು ಸೇರಿಸಲು ಅನುಮತಿ ಇರುವುದರಿಂದ ನಿಯಮದ ಪಾಲನೆ ಮಾಡುತ್ತೇವೆ. ಗ್ರಾಹಕರನ್ನು ಹೊಂದಿಸುವುದು ಕಷ್ಟವಾಗಬಹುದು. ಆದರೆ ಪೂರ್ಣ ಕಾಳಜಿ ವಹಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇವೆ. -ದೊರೆರಾಜ್‌ ರೈ, ಮೀರಾರೋಡ್‌, ಹೊಟೇಲ್‌ ಕಾರ್ಮಿಕರು.

 

-ಗಣಪತಿ ಮೊಗವೀರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.