ಕನ್ನಡ ಸಂಘ ಪುಣೆ: ವೈಶಿಷ್ಟ್ಯ ಪೂರ್ಣ ಸಂಗೀತ ಕಾರ್ಯಕ್ರಮ


Team Udayavani, Sep 23, 2019, 4:16 PM IST

mumbai-tdy-1

ಪುಣೆ, ಸೆ. 22: ಕನ್ನಡ ಸಂಘ ಪುಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸೆ. 13ರಂದು ಎರಡು ವಿಶೇಷ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

ಮೊದಲಿನ ಎರಡು ದಿನ ಮೃದಂಗಾಚಾರ್ಯ ಶಂಕರ್‌ ವಸಂತ್‌ ಸ್ಮತಿ ಮಹೋತ್ಸವದಲ್ಲಿ ಪ್ರಸಿದ್ಧ ತಬಲಾ ವಾದಕ ಪ್ರಮೋದ್‌ ಗೊಪರ್‌ದ್ಕರ್‌ ಅವರ ಶಿಷ್ಯವೃಂದದ ಅಭೂತಪೂರ್ವ ಮೃದಂಗ ವಾದನದ ಜತೆಗೆ ಕಥಕ್‌ ನೃತ್ಯ ಶಿಕ್ಷಕಿ ಮನೀಷಾ ಅಭಯ ಮತ್ತು ಶಿಷ್ಯಯರಿಂದ ಶಿವೋಹಂ ನೃತ್ಯದ ಮೂಲಕ ಒಂದು ಅಭೂತಪೂರ್ವ ಅನುಭವ ಪ್ರಥಮ ಬಾರಿಗೆ ಪುಣೆಯ ರಸಿಕರಿಗೆ ನೃತ್ಯ ಮೃದಂಗದ ಜುಗಲಬಂದಿಯನ್ನು ನೋಡುವ ಅವಕಾಶ ಸಿಕ್ಕಿತು. ಎರಡನೆಯ ದಿನ ಜಗತøಸಿದ್ಧ ಮೋಹನ ವೀಣಾ ವಾದಕ ಪದ್ಮ ಭೂಷಣ ಪಂಡಿತ್‌ ವಿಶ್ವಮೋಹನ್‌ ಭಟ್‌ ಅವರಿಗೆ ಮೃದಂಗಾಚಾರ್ಯ ಶಟಕರ ಭೈಯ್ಯ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಸಮ್ಮಾನಕ್ಕೆ ಉತ್ತರಿಸಿದ ಪಂಡಿತ್‌ ವಿಶ್ವಮೋಹನ್‌ ಭಟ್‌ ಅವರು ಸಂಗೀತ ನೃತ್ಯ ಮತ್ತು ವಿದ್ಯೆಯತವರುಮನೆ ಪುಣೆಯಲ್ಲಿ ಕಲಾರಸಿಕರ ಉತ್ಸಾಹ ಮತ್ತು ಕಲಾಭಿರುಚಿಯನ್ನು ಪ್ರಶಂಸಿಸಿ ಈ ಗೌರವ ನನಗೆ ಮತ್ತು ನನ್ನ ವಿಚಿತ್ರ ವೀಣೆಗೆ ದೊರೆತ ಅವಿಸ್ಮರಣೀಯ ಪುರಸ್ಕಾರವೆಂದು ಪುಣೆಯ ನಾಗರಿಕರಿಗೆ ಧನ್ಯವಾದ ಸಮರ್ಪಿಸಿದರು.

ಅನಂತರ ಅವರ ಅಮೋಘ ವಿನೂತನ ಮೋಹನ ವೀಣಾ ವಾದನ ರಸಿಕರನ್ನು ಮಂತ್ರಮುಗ್ಧಗೊಳಿಸಿತು. ಮೂರನೆಯ ದಿನ ಇತ್ತೀಚೆಗೆ ಮಹಾರಾಷ್ಟ್ರದ ಕೊಲ್ಹಾಪುರ ಸಾಂಗ್ಲಿ ಪ್ರದೇಶಗಳಲ್ಲಿ ಬಂದ ಪ್ರಾಕೃತಿಕ ಆಪತ್ತಿನಿಂದ ತಮ್ಮ ಮನೆ ಮತ್ತು ವಾದಕ ಸಾಮಗ್ರಿಗಳನ್ನು ಕಳೆದುಕೊಂಡ ಕಲಾಕಾರರ ಸಹಾಯಕ್ಕಾಗಿ ಕಲಾಕಾರರಿಗಾಗಿ ಕಲಾಕಾರರು ಎಂಬ ಅತ್ಯಂತ ವೈಶಿಷ್ ಪೂರ್ಣ ಸಂಗೀತ ನೃತ್ಯ ಮತ್ತು ವಾದ್ಯ ವಾದನದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾಕಾರರು ತಬಲ, ಜಲತರಂಗ, ಜೆಬೆ ಮುಂತಾದ ವಿಶೇಷ ವಾದನಗಳ ಜತೆಗೆ ಪ್ರಸಿದ್ಧ ನೃತ್ಯ ಕಲಾವಿದೆ ಅಮೀರಾ ಪಾಟಂಕರ್‌ ಮತ್ತು ಬಳಗದ ನಾದರೂಪ ಸಂಸ್ಥೆಯ  ಶಮಾ ಬಾಟೆ ಅವರ ನೇತೃತ್ವದಲ್ಲಿ ಮನಮೋಹಕ ನೃತ್ಯ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಗಳಿಸಿದ ಎಲ್ಲ ಹಣದ ಮೊತ್ತವನ್ನು ಸಂತ್ರಸ್ತ ಕಲಾಕಾರರಿಗೆ ಕಳುಹಿಸಲಾಯಿತು. ಒಟ್ಟಿನಲ್ಲಿ ಮೂರು ದಿನಗಳ ಈ ಸಂಗೀತ ನೃತ್ಯ ಮಹೋತ್ಸವ ಕನ್ನಡ ಸಂಘದ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರಿಗೆ ರಸದೌತಣವನ್ನಿತ್ತು ಪ್ರಶಂಸೆ ಗಳಿಸಿತು.

ಇಂತಹ ಸಮಾಜೋಪಯೋಗಿ ಮತ್ತು ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಸಂಘ ನಿರಂತರ ಪೋ›ತ್ಸಾಹ ನೀಡುತ್ತಿರುವ ಬಗ್ಗೆ ಆಯೋಜಕರು ಧನ್ಯವಾದ ವ್ಯಕ್ತಪಡಿಸುತ್ತಾ ಮುಖ್ಯ ಅತಿಥಿ ಪಂಡಿತ್‌ ಪದ್ಮ ಭೂಷಣ ವಿಶ್ವಮೋಹನ ಭಟ್‌ ಅವರ ಶುಭ ಹಸ್ತದಿಂದ ಪುಷ್ಪಗುತ್ಛವನ್ನು ನೀಡಿ ಜನಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯರನ್ನು ಕನ್ನಡ ಸಂಘದ ಪರವಾಗಿ ಸತ್ಕರಿಸಿದರು. ವರ್ಷವಿಡೀ ಹತ್ತು ಹಲವು ಕಾರ್ಯಕ್ರಮಗಳಿಗೆ ಕನ್ನಡ ಸಂಘ ವೇದಿಕೆಯನ್ನು ಒದಗಿಸುತ್ತಾ ಬಂದಿದೆ.

 

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.