GSB ಸಭಾ ಮುಂಬಯಿ ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ಪ್ರಭು ಮರು ಆಯ್ಕೆ
Team Udayavani, Feb 28, 2019, 4:04 PM IST
ಮುಂಬಯಿ: ನಗರದ ಮಾಟುಂಗದಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮುಂಬಯಿ ಇದರ 79 ನೇವಾರ್ಷಿಕ ಮಹಾಸಭೆಯು ಇತ್ತೀಚೆಗೆ ಗೋಪಾಲ್ ನಾಯಕ್ ಮೆಮೋರಿಯಲ್ ಕ್ರೀಡಾ ಮಂದಿರದ ಟಿ. ಎಂ. ಪೈ ಸಭಾಗೃಹದಲ್ಲಿ ನಡೆಯಿತು.
ಸಭಾದ ಅಧ್ಯಕ್ಷ ಲಕ್ಷ್ಮೀಕಾಂತ್ ಟಿ. ಪ್ರಭು ಇವರು ಸ್ವಾಗತಿಸಿ, ಸಂಸ್ಥೆಯ ವಾರ್ಷಿಕ ಸಿದ್ಧಿ-ಸಾಧನೆಗಳನ್ನು ವಿವರಿಸಿ ವರದಿ ವಾಚಿಸಿದರು. ಅಲ್ಲದೆ 2017-18ನೇ ಸಾಲಿನಲ್ಲಿ ಸಹಕರಿಸಿದ ಎಲ್ಲಾ ದಾನಿಗಳನ್ನು, ಪ್ರಾಯೋಜಕರನ್ನು
ಹಾಗೂ ಜಾಹೀರಾತುದಾರರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಜಿಎಸ್ಬಿ ಸಭಾದ 83ನೇ ವಾರ್ಷಿಕ ವರದಿ ಸಹಿತ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು. ಇದೇ ಸಂದರ್ಭದಲ್ಲಿ 2018-19ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ಟಿ. ಪ್ರಭು ಇವರನ್ನು ಅವಿರೋಧವಾಗಿ ಪುನರಾಯ್ಕೆಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ಶಾಂತೇರಿ ಎನ್. ನಾಯಕ್, ಸುಬ್ರಾಯ ಡಿ. ಶೆಣೈ, ಭರತ್ ಎಸ್. ಕಿಣಿ, ಜತೆ ಕಾರ್ಯದರ್ಶಿಗಳಾಗಿ ಅಮಿತಾ ಎ. ಕಿಣಿ, ಬೀನಾ ಎನ್. ಶೆಣೈ, ಸತೀಶ್ ವಿ. ಮನೇಲ್, ಮೋಹಿನಿ ಎಂ. ಹೆಗ್ಡೆ, ಉದಯ ವಿ. ಮಲ್ಯ, ಪ್ರತಿಮಾ ಪಿ. ಪೈ, ಕೆ. ಆರ್. ಭಕ್ತ ಅವರನ್ನು ನೇಮಿಸಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಭಾಶ್ಚಂದ್ರ ಆರ್. ರಾವ್, ತನುಶ್ರೀ ಎ. ಶೆಣೈ, ದಿನೇಶ್ ಎಂ. ಭಂಡಾರ್ಕರ್, ಶಿಲ್ಪಾ ಕಾಮತ್, ದಾಮೋದರ ಮಲ್ಯ, ಭಾರತಿ ವಿ. ಭಂಡಾರ್ಕರ್, ಪ್ರಕಾಶ್ ಎಂ. ಪೈ, ಪಾಂಡುರಂಗ ವಿ. ನಾಯಕ್ ಇವರನ್ನು ಆಯ್ಕೆಮಾಡಲಾಯಿತು. ಗೌರವ ಜತೆ ಕಾರ್ಯದರ್ಶಿ ಸತೀಶ್ ವಿ. ಮನೇಲ್ ಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ