ಎಂಡಿಎಫ್ಎ ಫುಟ್ಬಾಲ್:HDFC ಬ್ಯಾಂಕ್ ತಂಡಕ್ಕೆ ಪ್ರಶಸ್ತಿ
Team Udayavani, Mar 13, 2018, 2:18 PM IST
ಮುಂಬಯಿ: ಮಹಾರಾಷ್ಟ್ರ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಪ್ರತೀ ವರ್ಷ ಗಣರಾಜ್ಯೋತ್ಸವದ ನಿಮಿತ್ತ ಆಯೋಜಿಸುವ ನಿತ್ತು ಮೆಮೋರಿಯಲ್ ಫುಟ್ಬಾಲ್ ಪಂದ್ಯಾಟವು ಇತ್ತೀಚೆಗೆ ಎರಡು ದಿನಗಳ ಕಾಲ ನಾಕೌಟ್ ಮಾದರಿಯಲ್ಲಿ ಪರೇಲ್ನ ಸೈಂಟ್ ಕ್ಸೇವಿಯರ್ ಮೈದಾನದಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಮುಂಬಯಿಯ ಸುಮಾರು ಹದಿನಾರು ತಂಡಗಳು ಪಾಲ್ಗೊಂಡಿದ್ದು, ಫೈನಲ್ನಲ್ಲಿ ಹೆಚ್ಚಿನ ಕನ್ನಡಿಗರ ಆಟಕಾರರು ಇರುವ ಎಚ್ಡಿಎಫ್ಸಿ ಬ್ಯಾಂಕ್ ತಂಡ ಮತ್ತು ಮಿಲ್ಲರ್ ನ್ಪೋರ್ಟ್ಸ್ ಕ್ಲಬ್ ತಂಡಗಳು ಸೆಣಸಾಡಿತು. ಅಂತಿಮವಾಗಿ ಎಚ್ಡಿಎಫ್ಸಿ ತಂಡವು 3-0 ಅಂತರಗಳಿಂದ ಮಿಲ್ಲರ್ ನ್ಪೋರ್ಟ್ಸ್ ಕ್ಲಬ್ ತಂಡವನ್ನು ಭರ್ಜರಿಯಾಗಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ವಿಜೇತ ತಂಡದ ಪರವಾಗಿ ಉತ್ತಾಂಕರ್, ತಿರೋಯ್ ಅಲ್ಮೇಡಾ, ಬ್ಲಾಸಿ ಫೆರ್ನಾಂಡಿಸ್ ಅವರು ತಲಾ ಒಂದೊಂದು ಗೋಲು ಹೊಡೆದರು. ತಂಡದ ತರಬೇತುದಾರರುಗಳಾದ ದೇವದಾಸ್ ಶ್ರೀಯಾನ್ ಮತ್ತು ಜೂಲಿಯನ್ ಡಿಸಿಲ್ವಾ ಅವರು ಉತ್ತಮವಾಗಿ ಆಡಿ ಪ್ರಶಸ್ತಿಯನ್ನು ಪಡೆದ ಎಚ್ಡಿಎಫ್ಸಿ ತಂಡವನ್ನು ಅಭಿನಂದಿಸಿದರು. ಕನ್ನಡಿಗ ಆಟಗಾರುಗಳಾದ ಸಂದೇಶ್ ಪೂಜಾರಿ, ತುಷಾರ್ ಅಂಚನ್, ಸಿದ್ಧಾರ್ಥ್ ಪುತ್ರನ್, ಪ್ರಖ್ಯಾತ್ ಶೆಟ್ಟಿ ಇವರು ಉತ್ತಮವಾಗಿ ಆಡಿ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ತಂಡದ ಮ್ಯಾನೇಜರ್ ಆಗಿ ವಾಲ್ಟರ್ ಇವರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ