ಜವಾಬ್‌ ವತಿಯಿಂದ  ವೈದ್ಯಕೀಯ ವಿಚಾರ ಸಂಕಿರಣ


Team Udayavani, Jul 31, 2018, 4:06 PM IST

3007mum08.jpg

ಮುಂಬಯಿ: ಜುಹೂ-ಅಂಧೇರಿ- ವಸೋìವಾ- ವಿಲೆಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌ -ಜವಾಬ್‌ ಇದರ ಆಶ್ರಯದಲ್ಲಿ ವೈದ್ಯಕೀಯ ವಿಚಾರ ಸಂಕಿರಣವು ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜು. 29 ರಂದು ಬೆಳಗ್ಗೆ ಅಂಧೇರಿ ಪೂರ್ವ ಫೋರ್‌ ಬಂಗ್ಲೋ ಕೋಕಿಲಾ ಬೆನ್‌ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ಕಾನ್ಫರೆನ್ಸ್‌ ಹಾಲ್‌ನಲ್ಲಿ ಪ್ರಸಿದ್ಧ ಮೂವರು ವೈದ್ಯರುಗಳಿಂದ ಜರಗಿತು.

ಖ್ಯಾತ ಬೆನ್ನೆಲುಬು ಶಸ್ತ್ರ ಚಿಕಿತ್ಸಾ ತಜ್ಞ ಡಾ| ವಿಶಾಲ್‌ ಪೇಶಟ್ಟಿವರ್‌ ಅವರು ಮಾತನಾಡಿ, ಸಾಮಾನ್ಯವಾಗಿ ಈ ರೋಗವು ಸುಮಾರು 40 ವರ್ಷ ವಯಸ್ಸಿನಿಂದ 70 ವರ್ಷ ವಯಸ್ಸಿನವರಲ್ಲಿ ಕಂಡು ಬರುತ್ತದೆ. ನೂರರಲ್ಲಿ ಶೇ. 90 ರಷ್ಟು ಮಂದಿ  ಬೆನ್ನುನೋವು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದು, ನೋವು ಶಮನ ಔಷಧಿ ಹಾಗೂ ವ್ಯಾಯಾಮದಿಂದ ಗುಣಮುಖರಾಗುವ  ಸಂಭವವಿದೆ. ಆದರೆ ಸುಮಾರು ಶೇ. 10 ರಷ್ಟು ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಬೆನ್ನುನೋವು ನಾವು ಸಾಮಾನ್ಯವಾಗಿ ಕುಳಿತುಕೊಳ್ಳುವ ಭಂಗಿಯಿಂದ ಬರುತ್ತದೆ. ಹೆಚ್ಚು ಸಮಯ ಕುಳಿತುಕೊಂಡು ಕೆಲಸ ಮಾಡುವವರು ಪ್ರತಿ ಗಂಟೆಗೊಮ್ಮೆ ಇದರಿಂದ ಆರಾಮ ಪಡೆದುಕೊಳ್ಳಬೇಕು. ಕುಳಿತುಕೊಳ್ಳುವ ಭಂಗಿಯನ್ನುಬದಲಾಯಿಸಿಕೊಳ್ಳುತ್ತಿರಬೇಕು. ನೇರವಾಗಿ ಕುಳಿತುಕೊಳ್ಳುವ ಅಭ್ಯಾಸ ಅತೀ ಅವಶ್ಯಕ. ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವಾಗ ಬಗ್ಗಿ ಮಾತನಾಡಬಾರದು. ಸಿಗರೇಟ್‌ ಸೇವನೆಯಿಂದ ಮೂಳೆ ಸವೆತ ಇನ್ನಿತರ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ವ್ಯಾಯಾಮ ಅತ್ಯಗತ್ಯವಾಗಿದೆ. ಕ್ಯಾಲ್ಸಿಯಂ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮೂಳೆಗೆ ಶಕ್ತಿ ಸಿಗುತ್ತದೆ. ಮುಖ್ಯವಾಗಿ ನಡೆಯುವ ಮತ್ತು ಯೋಗ ಮಾಡುವ ಅಭ್ಯಾಸ ಬಹಳ ಮುಖ್ಯವಾಗಿದೆ ಎಂದರು.

ಜೇಷ್ಠ ನಾಗರಿಕ ಕಾಯಿಲೆಗಳ ಚಿಕಿತ್ಸಾ ತಜ್ಞ ಡಾ| ಎನ್‌. ಆರ್‌. ಶೆಟ್ಟಿ ಅವರು ಮಾತನಾಡಿ, ವಯಸ್ಕರಲ್ಲಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆ, ಹೆಣಗಾಟ, ಉದ್ವಿಗ್ರತೆ, ಮಧುಮೇಹ, ಚರ್ಮರೋಗ, ಅಂಗಾಂಗಳ ಕಾಯಿಲೆ, ಮೂಳೆ ಮುರಿತ, ನೆನಪು ಶಕ್ತಿ ಕಡಿಮೆಯಾಗುವುದು, ಪಕ್ಷವಾತ, ಮನೋರೋಗ ಇತ್ಯಾದಿ ಕಾಯಿಲೆಗಳು ರೋಗಿಯ ಮಾನಸಿಕ ಸ್ಥಿರತೆಯನ್ನು ಕಡಿಮೆ ಮಾಡುತ್ತದೆ. ವ್ಯಾಯಾಮ, ಯೋಗದ ಅಭ್ಯಾಸ, ಪ್ರತಿದಿನ ಧ್ಯಾನ ಮಾಡುವುದರ ಜೊತೆಗೆ ಮಾನಸಿಕ, ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಬೇಕು. ದುಶ್ಚಟಗಳನ್ನು ದೂರ ಮಾಡಬೇಕು. ದೈಹಿಕ ನೆರವಿಗಾಗಿ ನಡೆದಾಡುವ ಕೋಲು, ಕಿವಿ ಕೇಳಿಸುವ ಸಾಧನ ಹೊಂದಿರಬೇಕು. ಕನ್ನಡಕ, ಗಾಯಗಳಾದಾಗ ಎಚ್ಚರಿಕೆ ಯಿಂದಿರಬೇಕು. ವಯಸ್ಕರು ಘನ ಗಂಭೀರತೆಯ ಗೌರವ ಪೂರ್ಣ ಬದುಕನ್ನು ಹೊಂದಬೇಕು. ವಯಸ್ಕರ ಬಗ್ಗೆ ಮನೆಯವರನ್ನು ಪ್ರೀತಿ, ಗೌರವದ ಬಾಂಧವ್ಯದಿಂದ ಇರುವಂತೆ ವಿನಂತಿಸಿದರು.
ಸಭಿಕರ ಸಂಶಯಾತ್ಮಕ ಪ್ರಶ್ನೆಗಳಿಗೆ ವೈದ್ಯರೆಲ್ಲರು ಸಮರ್ಪಕವಾಗಿ ಉತ್ತರಿಸಿದರು. ವಿಚಾರ ಸಂಕಿರಣದ ಆರಂಭಕ್ಕೆ ಮುನ್ನ ಜವಾಬ್‌ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಜವಾಬ್‌ ಪದಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುಚ್ಚ ನೀಡಿ ಸಮ್ಮಾನಿಸಿದರು.

ಕೋಕಿಲಾಬೆನ್‌ ಆಸ್ಪತ್ರೆಯ ಸಿಇಒ ಡಾ| ಸಂತೋಷ್‌ ಶೆಟ್ಟಿ, ಡಾ| ದವಲ್‌ ಪ್ರಕಾಶ್‌ ಅವರು ಜವಾಬ್‌ ಕುಟುಂಬವನ್ನು ಆದರದಿಂದ ಬರಮಾಡಿಕೊಂಡರು. ಜವಾಬ್‌ನ ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕಡಂದಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಜವಾಬ್‌ನ ಮಾಜಿ ಅಧ್ಯಕ್ಷ ವಿಶ್ವನಾಥ ಹೆಗ್ಡೆ, ಜತೆ ಕೋಶಾಧಿಕಾರಿ ಎಚ್‌. ಶೇಖರ್‌ ಹೆಗ್ಡೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜವಾಬ್‌ ಕುಟುಂಬ, ಅಂಧೇರಿಯ ನಾಗರಿಕರು  ಉಪಸ್ಥಿತರಿದ್ದರು. 

ಸ್ತನದ ಕ್ಯಾನ್ಸರ್‌ ಯಾಕೆ ಬರುತ್ತದೆ ಎಂಬುವುದು  ಜಿಜ್ಞಾಸೆಯಾಗಿಯೇ ಉಳಿದಿದೆ. ಕಳೆದ 15 ವರ್ಷಗಳಿಂದ ಈ ಕಾಯಿಲೆ ಹೆಚ್ಚಾಗುತ್ತಿದೆ. ಪುರುಷರಿಗೂ ಸ್ತನ ಕ್ಯಾನ್ಸರ್‌ ಸಾಮಾನ್ಯವಾಗಿದೆ. ಸಾಮಾನ್ಯವಾಗಿ 40-80 ವರ್ಷದೊಳಗಿನವರ ಸ್ತನದಲ್ಲಿ ಗಡ್ಡೆ ಬೆಳೆಯಲಾರಂಭಿಸುತ್ತದೆ. ಸಿಗರೇಟು ಸೇವನೆಯಿಂದ ಇದು ಹೆಚ್ಚಾಗಿ ಬರುತ್ತದೆ. ವ್ಯಾಯಾಮ, ಉತ್ತಮ ಆಹಾರ ಸೇವನೆ, 9-26 ವರ್ಷದೊಳಗೆ ಎಚ್‌ಪಿವಿ ಪ್ಯಾಸಿನೇಶನ್‌ ಹಾಕಿಸಿಕೊಳ್ಳುವುದು, ಸಂದೇಹ ಬಂದಾಗಲೆಲ್ಲಾ ವೈದದ್ಯರ ಬಳಿ ಪರೀಕ್ಷೆ ಮಾಡಿಸುವುದರಿಂದ ಈ ರೋಗವನ್ನು ಹತೋಟಿಗೆ ತರಬಹುದು. ಸುಮಾರು 40 ವರ್ಷ ವಯಸ್ಸಿಗಿಂತ ಅಧಿಕ ವಯಸ್ಸಿನವರಿಗೆ ಮೆಮೋಗ್ರಾಂ ಪರೀಕ್ಷೆ ನೀಡಲಾಗುತ್ತದೆ. ಸರ್ಜರಿ, ರೇಡಿಯೋ ಥೆರಫಿ, ಕಿಮೋ ಥೆರಫಿ ಮೂಲಕವೂ ರೋಗವನ್ನು ಗುಣಪಡಿಸಬಹುದು. 
ಈ ರೋಗವು ವಂಶಪಾರಂಪರ್ಯದಿಂದ ಬರುವುದಿಲ್ಲ ಎಂಬುವುದು ಸತ್ಯವಾದ ಮಾತಾಗಿದೆ
– ಡಾ| ಅರ್ಚನಾ ಶೆಟ್ಟಿ ಮುಂಡ್ಕೂರು  ಸ್ತನ ಶಸ್ತ್ರ ಚಿಕಿತ್ಸಾ ತಜ್ಞೆ.

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.