ಪೂಜೆ ಸ್ತ್ರೀ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ: ಹರಿಭಟ್
Team Udayavani, Aug 26, 2018, 5:01 PM IST
ಮುಂಬಯಿ: ಕೂಡು ಕುಟುಂಬವನ್ನು ಒಗ್ಗೂಡಿಸುವ ವಿಶೇಷತೆ ಶ್ರಾವಣ ಮಾಸದಲ್ಲಿದೆ. ಬಂಧುತ್ವ ಬೆಳೆಸುವ, ಮಾತೃತ್ವ ಪ್ರೇಮ ಉಳಿಸುವ, ಆಧ್ಯಾತ್ಮಿಕ ಚಿಂತನೆಗಳ ಹಬ್ಬಗಳು ಬದುಕನ್ನು ನಿರೂಪಿಸುತ್ತದೆ. ತನು, ಮನ, ಮನೆಗಳನ್ನು ಶುದ್ಧಿಗೊಳಿಸುವುದಕ್ಕೆ ವರಮಹಾಲಕ್ಷ್ಮೀ ಪೂಜೆಯ ಹಿನ್ನೆಲೆಯಾಗಿದೆ. ಮಹಿಳೆಯರು ಒಟ್ಟಾಗಿ, ಸಮಾನ ಮನಸ್ಕರಾಗಿ ಆಚರಿಸುವ ವರಮಹಾಲಕ್ಷ್ಮೀ ಪೂಜೆ ಸ್ತ್ರೀ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪಲಿಮಾರು ಮಠದ ವಿದ್ವಾನ್ ಹರಿಭಟ್ ಅವರು ನುಡಿದರು.
ಆ. 24 ರಂದು ಸಂಜೆ ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಆರಾಧನೆಗಳು ನಿರ್ಮಲ ಮನಸ್ಸಿನಿಂದ ಕೂಡಿರಬೇಕು. ನಮ್ಮ ಸಂಸ್ಕೃತಿ ಪದ್ಧತಿಗಳನ್ನು ಉಳಿಸಿಕೊಂಡು ಮುನ್ನಡೆಯಬೇಕು. ಅನ್ಯರ ಕಷ್ಟ, ಕಾರ್ಪಣ್ಯಗಳಲ್ಲಿ ಸಹಭಾಗಿತ್ವ ವಹಿಸಿ ಶ್ರೀ ವರಮಹಾಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರ ರಾಗೋಣ ಎಂದು ನುಡಿದು ಶುಭಹಾರೈಸಿದರು.
ಪವಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್ ಇವರು, ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ನಾಗಾರಾಧನೆ ದೇವತರಾಧನೆಗಳ ಬಗ್ಗೆ ವಿವರಿಸಿದರು.
ಪಾಶ್ಚಿಮಾತ್ಯ ಜೀವನ ನಮ್ಮನ್ನು ಅವರಿಸಿದರೂ ನಮ್ಮ ಪೂರ್ವ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎಂದು ವರಮಹಾಲಕ್ಷ್ಮೀ ಪೂಜೆಯ ಆಚರಣೆಯಲ್ಲಿ ಉಪಸ್ಥಿತರಿದ್ದ ಅಪಾರ ಸಂಖ್ಯೆಯ ಮಹಿಳೆಯರೇ ಸ್ಪಷ್ಟಡಿಸಿದ್ದಾರೆ. ತಮಗೆಲ್ಲ ಆರೋಗ್ಯ, ಆಯಸ್ಸು, ಸಂಪತ್ತುನ್ನು ಜಗನ್ಮಾತೆ ನೀಡಲೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಮಹಿಳೆಯರು ದೇವಿಯ ಮೂರ್ತಿಗೆ ಅರಸಿನ ಕುಂಕುಮ, ಹೂವು, ಅಕ್ಷತೆಯಿಂದ ಪೂಜೆ ಸಲ್ಲಿಸಿದ ಬಳಿಕ 9 ಸುತ್ತಿನ ದಾರವನ್ನು ಕಂಕಣದಂತೆ ಕೈಗೆಕಟ್ಟಿಕೊಂಡು ಆಶೀರ್ವಾದ ಪಡೆದರು. ಗಂಧಾಕ್ಷತೆ, ತುಳಸಿದಳ ದೇವಿಯ ಸಹಸ್ರ ನಾಮಾವಳಿಯ ಮೂಲಕ ವಿವಿಧ ಪೂಜಾ ಕೈಂಕರ್ಯಗಳಿಂದ ಪೂಜಿಸಿದರು. ಜಯರಾಮ ಭಟ್, ಯತಿರಾಜ ಉಪಾಧ್ಯಾಯ, ಗಣೇಶ್ ಭಟ್, ಟ್ರಸ್ಟಿ ಸಚ್ಚಿದಾನಂದ ರಾವ್ ಸಹಕರಿಸಿದರು. ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ