ಮೀರಾರೋಡ್ ಶ್ರೀ ಲಕ್ಷ್ಮೀ ನಾರಾಯಣ ಭಜನ ಸಮಿತಿ: ಮಂಗಳ್ಳೋತ್ಸವ
Team Udayavani, Feb 19, 2020, 5:39 PM IST
ಮುಂಬಯಿ, ಫೆ. 18: ಮೀರಾರೋಡ್ ಪೂರ್ವದ ಭಾರತಿ ಪಾರ್ಕಿನ, ಶ್ರೀ ಲಕ್ಷ್ಮೀನಾರಾಯಣ ಮಂದಿರ ಮಾರ್ಗ, ಯುನಿಟ್ ಅಪಾರ್ಟ್ಮೆಂಟ್ನಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ 19ನೇ ವಾರ್ಷಿಕ ಮಂಗಳ್ಳೋತ್ಸವದ ಅಂಗವಾಗಿ ಫೆ. 15ರಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಏಕಾಹ ಭಜನೆಯು ವಿವಿಧ ಪೂಜಾ ಕೈಂಕರ್ಯದೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಕೃಷ್ಣರಾಜ ತಂತ್ರಿ ಅವರ ಪೌರೋಹಿತ್ಯದಲ್ಲಿ ಗಣಹೋಮ, ಕಲಶ ಪ್ರತಿಸ್ಥಾಪನೆ, ದೀಪಪ್ರಜ್ವಲನೆ, ಏಕಾಹ ಭಜನೆಗೆ ಚಾಲನೆ, ಮಧ್ಯಾಹ್ನ ಮಹಾ ಆರತಿ ತದನಂತರ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆವಿತರಣೆಯಾಯಿತು. ವಸಂತ ಕೋಟ್ಯಾನ್ ದಂಪತಿ ಮತ್ತು ಶಂಕರ ಶೇರಿಗಾರ್ ದಂಪತಿ ಪೂಜಾವ್ರತ ಕೈಗೊಂಡಿದ್ದರು.
ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಅಧ್ಯಕ್ಷ ಹರೀಶ್ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ಮಾಧವ ಬಿ. ಐಲ್, ಕೋಶಾಧಿಕಾರಿ ಸುಂದರ ಎ. ಪೂಜಾರಿ, ಉಪಾಧ್ಯಕ್ಷ ರಮೇಶ್ ಎಸ್. ಅಮೀನ್, ಜತೆ ಕಾರ್ಯದರ್ಶಿ ಸಂಪತ್ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಭಾಸ್ಕರ ಕುಂದರ್, ಭುವಾಜಿ ಶ್ರೀಧರ ಶೆಟ್ಟಿ, ಜಯಶೀಲ ಬಿ. ತಿಂಗಳಾಯ ಮಹಿಳಾ ವಿಭಾಗದ
ಕಾರ್ಯಧ್ಯಕ್ಷೆ ವಾರಿಜಾ ಜಿ. ಪೂಜಾರಿ, ಕಾರ್ಯದರ್ಶಿ ಸಂಗೀತಾ ಎಂ. ಐಲ್, ಆರ್ಚಕರಾದ ಜನಾರ್ಧನ ಪೂಜಾರಿ, ಶಂಕರ ಬಿ. ಶೇರಿಗಾರ್, ಕಾರ್ಯಕಾರಿ ಸಮಿತಿ, ಸದಸ್ಯರಾದ ಮಾಧವ ಸಿ. ಕೋಟ್ಯಾನ್, ಸುದರ್ಶನ್ರಾಜ್ ಕೊಡಿಯಾಲ್ ಬೈಲ್ , ವಸಂತ್ ಸಿ. ಕೋಟ್ಯಾನ್, ಹೇಮಂತ್ ಮುಚ್ಚಾರು, ಸುರೇಶ್ ಜೆ. ಕರ್ಕೇರ, ಜಿತೇಂದ್ರ ಏ. ಸನಿಲ್ , ಶಶಿಕಲಾ ಎಸ್. ಶೆಟ್ಟಿ, ವಿನೋದಾ ಎಂ. ಕೋಟ್ಯಾನ್, ಗೀತಾ ಎಸ್. ಪೂಜಾರಿ, ಕಲಾವತಿ ವಿ. ತಿಂಗಳಾಯ, ಕುಶಲಾ ಎಂ. ಬಂಗೇರ, ಲಕ್ಷ್ಮೀ ಜೆ. ಸನಿಲ್ , ಮನೋರಮಾ ಆರ್. ಅಮೀನ್, ಪ್ರತಿಭಾ ಕೋಟ್ಯಾನ್, ರತ್ನಾ ಎನ್. ಪೂಜಾರಿ, ಸರೋಜಿನಿ ಎಸ್. ಕೋಟ್ಯಾನ್, ನಳಿನಿ ಜಿ. ಪೂಜಾರಿ, ಉಷಾ ವಿ. ಶೆಟ್ಟಿ, ವಿನಯಾ ಎಸ್. ಸನಿಲ್ ಮೊದಲಾದವರು ಚಾಲನೆ ನೀಡಿದರು. ಸಮಾರಂಭದಲ್ಲಿ ಸ್ಥಳೀಯ ಮಾಜಿ ಶಾಸಕ ನರೇಂದ್ರ ಮೆಹ್ತಾ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕುಣಿತ ಭಜನ ಕಾರ್ಯಕ್ರಮ ನಡೆಯಿತು. ಏಕಾಹ ಭಜನೆಯಲ್ಲಿ ಶ್ರೀ ವಿಠಲ ಭಜನ ಮಂಡಳಿ ಮೀರಾರೋಡ್, ಬಂಟ್ಸ್ ಪೋರಮ್ ಮೀರಾ-ಭಾಯಂದರ್, ಶ್ರೀ ಹನುಮಾನ್ ಮಣಿಕಂಠ ಭಜನ ಮಂಡಳಿ ಭಾಯಂದರ್, ಶ್ರೀ ಹನುಮಾನ್ ಮಹಿಳಾ ಭಜನ ಮಂಡಳಿ ದಹಿಸರ್, ಶ್ರೀ ಕುಲಮಾಹಾಸ್ತಿಯಮ್ಮ ಭಜನ ಮಂಡಳಿ ಮೀರಾ – ಭಾಯಂದರ್, ಬಂಟ್ಸ್ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್ ಮೀರಾರೋಡು ಸ್ಥಳೀಯ ಸಮಿತಿ, ದುರ್ಗಾ ಭಜನ ಸಮಿತಿ ಸಿಲ್ವರ್ಪಾರ್ಕ್ ಮೀರಾರೋಡ್, ಶ್ರೀ ಬಾಲಾಜಿ ಸನ್ನಿಧಿ ಭಜನ ಮಂಡಳಿ ಮೀರಾರೋಡ್, ಬಿಲ್ಲವರ ಅಸೋಸಿಯೇಶನ್ ವಸಾಯಿ ಸ್ಥಳೀಯ ಸಮಿತಿ, ಗೀತಾಂಬಿಕಾ ಭಜನ ಮಂಡಳಿ ಆಸಲ್ಪ ಘಾಟ್ಕೋಪರ್, ಜಗದಂಬಾ ಸೇವಾ ಸಮಿತಿ ವಿಕ್ರೋಲಿ, ಶ್ರೀ ವಿಷ್ಣು ಭಜನ ಮಂಡಳಿ ವಿರಾರ್, ಶ್ರೀ ಉಮಾಮಹೇಶ್ವರಿ ಭಜನ ಜರಿಮರಿ ಸಾಕಿನಾಕ, ಶ್ರೀ ಮಹಾಲಕ್ಷ್ಮೀ ಭಜನ ಮಂಡಳಿ ಅಂಧೇರಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಶ್ರೀ ಶನೀಶ್ವರ ಸೇವಾ ಸಮಿತಿ ನೆರೊಲ್, ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಭಜನ ಮಂಡಳಿ ಅಸಲ್ಪ, ಮುಂಬ್ರಾ ಮಿತ್ರ ಭಜನ ಮಂಡಳಿ ಡೊಂಬಿವಲಿ ಇವರು ಪಾಲ್ಗೊಂಡರು. ವಿವಿಧ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಪರಿಸರದ ಸಂಘಟನೆಗಳ ಪ್ರತಿನಿಧಿಗಳು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
-ಚಿತ್ರ-ವರದಿ: ರಮೇಶ್ ಅಮೀನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ