ಹೊಟೇಲ್‌ ಉದ್ಯಮದ ಸಮಸ್ಯೆಗೆ ಸ್ಪಂದನೆ ನಮ್ಮ ಮುಖ್ಯ ಧ್ಯೇಯ: ಮಧುಕರ ಶೆಟ್ಟಿ


Team Udayavani, Apr 20, 2022, 12:13 PM IST

Untitled-1

ಮುಂಬಯಿ: ಕಳೆದ ಎರಡು ವರ್ಷಗಳ ಕೊರೊನಾ ಮಹಾಮಾರಿಯ ಸಂದರ್ಭ ಹೊಟೇಲ್‌ ಉದ್ಯಮಕ್ಕೆ ಬಹಳಷ್ಟು ಅಡೆತಡೆಗಳಿದ್ದರೂ ಸಂಘಟನೆ ಕೆಲವೊಂದು ಸರಕಾರಿ ನಿಯಮಗಳಲ್ಲಿ  ಹೊಟೇಲಿಗರಿಗೆ ಪರಿಹಾರ ದೊರಕಿಸಿ ಕೊಡು ವಲ್ಲಿ ಯಶಸ್ವಿಯಾಗಿದೆ. ಅತೀ ಕಡಿಮೆ ಖರ್ಚಿನಲ್ಲಿ ಪರವಾನಿಗೆ ನವೀಕರಣ ಮಾಡಿಸಿದೆ. ಮಹಾನಗರ ಪಾಲಿಕೆ ಹೆಚ್ಚಿಸಿದ್ದ ನೀರಿನ ಬಿಲ್ಲಿನಲ್ಲಿ  ಕಡಿತಗೊಳಿಸಿದೆ. ಅಸೋಸಿಯೇಶನ್‌ನ ಇತಿ ಹಾಸದಲ್ಲೇ ಮೊದಲು ಎಂಬಂತೆ ಮೀರಾರೋಡ್‌ ವಕಾರ್ಡ್‌ ಮತ್ತು ದೀಪಕ್‌ ಆಸ್ಪತ್ರೆಗಳ ಸಹಕಾರದಿಂದ ಹೊಟೇಲ್‌ ಕಾರ್ಮಿಕರಿಗಾಗಿ ವೈದ್ಯಕೀಯ ಶಿಬಿರ ಆಯೋಜಿಸಿ ರೋಗಿಗಳಿಗೆ ಉಚಿತವಾಗಿ ಔಷಧ ನೀಡಿ ಸಹಕರಿಸಿದೆ. ಮೀರಾ-ಭಾಯಂದರ್‌ ಮಹಾನಗರಪಾಲಿಕೆಯ ವೈದ್ಯಕೀಯ ವಿಭಾಗದ ಸಹಯೋಗದಿಂದ ಹೊಟೇಲ್‌ ಕಾರ್ಮಿಕರು ಮತ್ತವರ ಕುಟುಂಬದ ಸದಸ್ಯರಿಗೆ ಕೊರೊನಾ ವಿರುದ್ಧದ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್‌ ಅನ್ನು ಉಚಿತವಾಗಿ ನೀಡಿದೆ ಎಂದು ಮೀರಾ-ಭಾಯಂದರ್‌ ಹೊಟೇಲ್‌ ಅಸೋಸಿಯೇಶನ್‌ನ ಅಧ್ಯಕ್ಷ ಮಧುಕರ ಶೆಟ್ಟಿ  ತಿಳಿಸಿದರು.

ಮೀರಾರೋಡ್‌ ಪೂರ್ವದ ಬ್ರೆವಲೀರ್‌ ಪಾರ್ಕ್‌ನ ಕೃಷ್ಣ ಪ್ಯಾಲೇಸ್‌ ಹೊಟೇಲ್‌ ಸಭಾಗೃಹದಲ್ಲಿ  ಎ. 13ರಂದು ಸಂಘಟನೆಯ 16 ಮತ್ತು 17ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘಟನೆಯ ಸದಸ್ಯರಲ್ಲಿ  ಪ್ರತೀ ಹೊಟೇಲಿಗೊಬ್ಬರಿಗೆ ಫೋಸ್ಟ್ಯಾಕ್‌ ತರಬೇತಿ ನೀಡಿ ಪ್ರಮಾಣಪತ್ರ ಕೊಡಿಸಿದೆ. ಆಹಾರ್‌ ಸಂಘಟ ನೆಯೊಂದಿಗೆ ಹೊಂದಿಕೊಂಡು ಎಫ್‌ಎಲ್‌ 3 ಪರ ವಾನಿಗೆ ಶುಲ್ಕ ಕಡಿಮೆ ಮಾಡಲು ಶ್ರಮಿಸಿ, ಪ್ರತಿಫಲ ಪಡೆದಿದೆ. ಸದಸ್ಯರು ಹೊಸ ಸದಸ್ಯತ್ವಕ್ಕೆ ಪ್ರಾಮುಖ್ಯತೆ ನೀಡುವುದರೊಂದಿಗೆ ಸಂಘಟನೆಯ ಉದ್ದೇಶವನ್ನು ತಿಳಿಸಬೇಕು. ಅಸೋಸಿಯೇಶನ್‌ನನ್ನು ಬಲಪಡಿಸಲು ಸದಸ್ಯರ ಸಹಕಾರ ಅಗತ್ಯ ಎಂದರು.

ಆರಂಭದಲ್ಲಿ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಮಹಾಸಭೆಯನ್ನು ಉದ್ಘಾಟಿಸಿದರು. ಗೌರವ ಕಾರ್ಯ ದರ್ಶಿ ಶ್ರೇಯಸ್‌ ಆರ್‌. ಶೆಟ್ಟಿ  ಸ್ವಾಗತಿಸಿ, ಗತ ವರ್ಷ ಗಳ ವಾರ್ಷಿಕ ವರದಿ ಓದಿದರು. ಕೋಶಾಧಿಕಾರಿ ಚಂದ್ರಹಾಸ್‌ ಕೆ. ಶೆಟ್ಟಿ ಲೆಕ್ಕಪತ್ರ ಮಂಡಿಸಿ, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿಕೊಂಡರು. ಕಾಮತ್‌ ಆ್ಯಂಡ್‌ ಕಂಪೆನಿಯವರನ್ನು ಮುಂದಿನ ವರ್ಷದ ಲೆಕ್ಕಪರಿಶೋಧಕರನ್ನಾಗಿ ಪುನರ್‌ ನೇಮಿಸಲಾಯಿತು. ಇದೇ ಸಂದರ್ಭ ರೇಣುಕಾ ಎಂಟರ್‌ಪ್ರೈಸಸ್‌, ವೈಟಲ್‌ ಎಂಟರ್‌ಪ್ರೈಸಸ್‌, ವಿಜನ್‌ ಫಯರ್‌ ಸಿಸ್ಟಮ್ಸ್  ಹಾಗೂ ಮೆನ್ಶನ್‌ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಸಂಸ್ಥೆಯ ಉತ್ಪನ್ನಗಳ ಬಗ್ಗೆ ವಿವರಿಸಿದರು.

ಜೀವನ್‌ ಶೆಟ್ಟಿ ಅವರು ನೂತನ ಬಿಲ್ಲಿಂಗ್‌ ಸಿಸ್ಟಮ್‌ನ ತಂತ್ರಾಂಶದ ಬಗ್ಗೆ ಪರಿಚಯಿಸಿದರು. ಎಯು ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಬಂದಿ ಹೊಟೇಲ್‌ ಉದ್ಯಮಕ್ಕೆ ಕೆಲವೊಂದು ಖಾತೆಗಳಿಂದ ಆಗುವ ಲಾಭದ ಬಗ್ಗೆ ತಿಳಿಸಿದರು. ಇದೇ ಸಂದರ್ಭ ಸಂಘಟನೆಯ ಹಿರಿಯ ಸದಸ್ಯರಾದ ಪಿಂಕ್‌ ಡ್ರಾಗನ್‌ ಫ್ಯಾಮಿಲಿ ರೆಸ್ಟೋರೆಂಟ್‌ನ ಲಿಯೋ ವಿತುಂಗ್‌, ಶುಭಂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ

ಆನಂದ್‌ ಎನ್‌. ಶೆಟ್ಟಿ ಕುಕ್ಕುಂದೂರು, ಕೃಷ್ಣ ಪ್ಯಾಲೇಸ್‌ ಮೀರಾರೋಡ್‌ ಇದರ ಕೃಷ್ಣ ವೈ. ಶೆಟ್ಟಿ, ಸಾಯಿ ಪ್ಯಾಲೇಸ್‌ ಗಾರ್ಡನ್‌ ರೆಸ್ಟೋರೆಂಟ್‌ನ ಗುಣಪಾಲ್‌ ಶೆಟ್ಟಿ, ಸಂಘಟನೆಗೆ ವಿಶೇಷ ಸಹಕಾರ ನೀಡಿದ ಮಹಾರಾಷ್ಟ್ರ ಫೆಡರೇಶನ್‌ ಆಫ್‌ ಹೊಟೇಲ್ಸ… ಆ್ಯಂಡ್‌ ರೆಸ್ಟೋರೆಂಟ್‌ ಅಧ್ಯಕ್ಷ ಡಾ| ವಿರಾರ್‌ ಶಂಕರ್‌ ಬಿ. ಶೆಟ್ಟಿ, ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ, ಆಹಾರ್‌ನ ಕಾರ್ಯದರ್ಶಿಗಳಾದ ಸುಧಾಕರ್‌ ಶೆಟ್ಟಿ, ಸುಕೇಶ್‌ ಶೆಟ್ಟಿ, ಹಿರಿಯ ಹೊಟೇಲ್‌ ಉದ್ಯಮಿ ಮನ್ಮಥ ಕಡಂಬ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ಸಂಘಟನೆಯ ಮುಖ್ಯ ಸಲಹೆಗಾರ ಹಾಗೂ ಮಹಾರಾಷ್ಟ್ರ ಫೆಡರೇಶನ್‌ ಆಫ್‌ ಹೊಟೇಲ್ಸ್‌ ಆ್ಯಂಡ್‌ ರೆಸ್ಟೋರೆಂಟ್‌ನ ಕಾರ್ಯದರ್ಶಿ ದುರ್ಗಾಪ್ರಸಾದ್‌ ಸಾಲ್ಯಾನ್‌ ಅವರು ಕೊರೊನಾ ಸಮಯದಲ್ಲಿ  ತೊಂದರೆಗೊಳಗಾದ ಸರ್ವಸದಸ್ಯರಿಗೆ ಮುಂದಿನ ಸಮಯದಲ್ಲಿ  ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿ ಸಂಘಟನೆಯು ಕೊರೊನಾ ಸಮಯದಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಹಾಗೂ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಜತೆ ಕೋಶಾಧಿಕಾರಿ ಅನಿಲ್‌ ಶೆಟ್ಟಿ  ವಂದಿಸಿದರು. ಮಹಾಸಭೆಯನ್ನು ಡಾ| ಕಮಲೇಶ್‌ ಗಗ್ಲಾನಿ ನಿರೂಪಿಸಿದರು.  ಉಪಾಧ್ಯಕ್ಷರಾದ ಚಂದ್ರಕಾಂತ ಶೆಟ್ಟಿ, ಮೋಹನ್‌ ಶೆಟ್ಟಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಪ್ರಶಾಂತ್‌ ಪೂಜಾರಿ, ಸಲಹೆಗಾರ ರಾದ ರತ್ನಾಕರ ಶೆಟ್ಟಿ ತಾಳಿಪಾಡಿಗುತ್ತು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೀವನ್‌ ಎಸ್‌. ಶೆಟ್ಟಿ, ಧೀರಜ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಹರೀಶ್‌ ಶೆಟ್ಟಿ  ಸಹಕರಿಸಿದರು. ಸದಸ್ಯರು ಅಪಾರ ಸಂಖ್ಯೆಯಲ್ಲಿ  ಭಾಗವಹಿಸಿದ್ದರು.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.