ಅಧ್ಯಕರಾಗಿ ಮುಂಬಯಿ ಸಾಹಿತಿ ಬಾಬು ಶಿವ ಪೂಜಾರಿ ಆಯ್ಕೆ
Team Udayavani, Jan 23, 2021, 7:24 PM IST
ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮುಂಬಯಿ ಸಾಹಿತಿ, ಸಂಶೋ ಧಕ ಬಾಬು ಶಿವ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಜ. 24 ರಂದು ಬ್ರಹ್ಮಾವರದ ಸಾೖಬ್ರಕಟ್ಟೆಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬಾಕೂìರಿನಲ್ಲಿ ಜನಿಸಿದ ಬಾಬು ಶಿವ ಪೂಜಾರಿ ಅವರು ಪತ್ರಿಕೋದ್ಯಮದ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಹೊಟೇಲ್ ಉದ್ಯಮದಲ್ಲಿ ತೊಡಗಿಕೊಂಡಿರುವ ಅವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಕುರಿತು ವಿಶೇಷವಾದ ಆಸ್ಥೆಯನ್ನಿಟ್ಟುಕೊಂಡಿದ್ದಾರೆ.
ಗುರುತು ಮಾಸಿಕದ ಸಂಪಾದಕರಾಗಿದ್ದ ಅವರು ವಿಶೇಷವಾಗಿ ಸಾಂಸ್ಕೃತಿಕ ಅಧ್ಯಯನ ದಲ್ಲಿ ನಿರತರಾಗಿದ್ದಾರೆ. “ಬಿಲ್ಲವರು ಒಂದು ಅಧ್ಯಯನ’ ಅವರ ಮಹತ್ವದ ಸಂಶೋಧನ ಕೃತಿ. ಬಿಲ್ಲವ ಜನಾಂಗದ ಚರಿತ್ರೆ, ಅವರ ಹಿನ್ನೆಲೆ, ವೃತ್ತಿ, ಜೀವನ ಪದ್ಧತಿ ಮೇಲೆ ಹೊಸ ಬೆಳಕು ಚೆಲ್ಲುವ ಕೃತಿಗಳನ್ನು ಅವರು ರಚಿಸಿದ್ದಾರೆ.
ಜಾಗೃತಿ ಬಳಗದ ಮುಖವಾಣಿ ಗುರುತು ಮಾಸಿಕ ದಲ್ಲಿ ಬಿಲ್ಲವರ ಇತಿಹಾಸವನ್ನೊಳಗೊಂಡ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸಿದ ಶ್ರೇಯಸ್ಸನ್ನು ಹೊಂದಿದ್ದಾರೆ. “ಬಿಲ್ಲವರ ಗುತ್ತು ಮನೆತನಗಳು’ ಎಂಬ ಸಂಶೋಧನಾತ್ಮಕ ಗ್ರಂಥವು ಇತ್ತೀಚೆಗೆ ಬೆಳಕು ಕಂಡಿದೆ. ಅವರು ಜನಾಂಗಿಕ ಅಧ್ಯಯನ, ಜಾನಪದ ಅಧ್ಯಯನದ ಕುರಿತು ಅನೇಕ ಲೇಖನ ಗಳನ್ನು ಬರೆದಿದ್ದಾರೆ.
ಇದನ್ನೂ ಓದಿ:ಇಷ್ಟದ ಕೆಲಸದಿಂದ ಯಶಸ್ಸು: ನಂಜುಂಡಸ್ವಾಮಿ
ದಾರ್ಶನಿಕ, ಸುಧಾರಣಾವಾದಿ ನಾರಾಯಣಗುರು ಗಳ ಜೀವನ ಸಾಧನೆ ಯನ್ನು ತಿಳಿ ಹೇಳುವ “ಶ್ರೀ ನಾರಾಯಣಗುರು ವಿಜಯ ದರ್ಶನ’ ಎಂಬ ಕೃತಿಯನ್ನು ರಚಿಸಿದ್ದಾರೆ. ಕನ್ನಡ, ತುಳು ಚಟುವಟಿಕೆಗಳಿಗೆ ಎಲ್ಲ ರೀತಿಗಳಿಂದಲೂ ಸಹಕರಿಸುತ್ತಿರುವ ಅವರು ಸರಳ ಸಜ್ಜನಿಕೆಗೆ ಹೆಸರಾದರು. ಗುರುತು ಪತ್ರಿಕೆಯ ಮೂಲಕ ಕನ್ನಡ ನಾಡು-ನುಡಿಯನ್ನು ಬಿಂಬಿಸುವ ಅವರ ಕೃತಿಗಳು ಪ್ರಕಟಗೊಂಡಿದೆ. ಪ್ರಾರಂಭದಲ್ಲಿ ಅಕ್ಷಯ ಮಾಸಿಕದಲ್ಲಿ ಪ್ರಸ್ತುತ ಗುರುತು ಪತ್ರಿಕೆಯ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ