ಮುಂಬಯಿ ಚಲನಚಿತ್ರ ಮತ್ತು ದೂರದರ್ಶನ ಮಹಿಳಾ ವಿಭಾಗ:ಕ್ರಿಕೆಟ್ ಪಂದ್ಯಾಟ
Team Udayavani, May 9, 2018, 12:06 PM IST
ಮುಂಬಯಿ: ಚಲನಚಿತ್ರ ಮತ್ತು ದೂರದರ್ಶನ ಮಹಿಳಾ ವಿಭಾಗ ಮುಂಬಯಿ ವತಿಯಿಂದ ಕ್ರಿಕೆಟ್ ಫಾರ್ ಯುನಿಟಿ ಟ್ರೋಫಿ ಮಹಿಳಾ ಕ್ರಿಕೆಟ್ ಪಂದ್ಯಾಟವು ಇತ್ತೀಚೆಗೆ ಮೀರಾರೋಡ್ ಪೂರ್ವದ ಸೆಕ್ಟರ್-10 ರ ಸರ್ದಾರ್ ವಲ್ಲಭಭಾಯಿ ಪಟೇಲ್ ಮೈದಾನದಲ್ಲಿ ನಡೆಯಿತು.
ಸ್ಥಳೀಯ ನಗರ ಸೇವಕಿ ಮತ್ತು ಚಲನಚಿತ್ರ ಮತ್ತು ದೂರರ್ಶನ ಜಿಲ್ಲಾ ಮಹಿಳಾಧ್ಯಕ್ಷೆ ಹೇತಲ್ ಪರ್ಮಾರ್ ಅವರ ಪ್ರಾಯೋಜಕತ್ವದಲ್ಲಿ ನಡೆದ ಪಂದ್ಯಾಟವನ್ನು ಸ್ಥಳೀಯ ನಗರ ಸೇವಕಿ ಹೇತಲ್ ಪರ್ಮಾರ್ ಮತ್ತು ನಗರ ಸೇವಕ ಪ್ರಶಾಂತ್ ದಳ್ವಿ ಇವರು ಉದ್ಘಾಟಿಸಿ ಕ್ರೀಡಾಳುಗಳಿಗೆ ಶುಭಹಾರೈಸಿದರು.
ಉದ್ಘಾಟನ ಪಂದ್ಯದಲ್ಲಿ ರಾಯರ ಬಳಗ ಮೀರಾರೋಡ್ ತಂಡವು ಪ್ರತಾಂಜಲಿ ಇಲೆವೆನ್ ತಂಡವನ್ನು ಎದುರಿಸಿದ್ದು, ಮೊದಲು ಬ್ಯಾಟಿಂಗ್ ಮಾಡಿದ ರಾಯರ ಬಳಗ ತಂಡವು ವಿಕೆಟ್ ನಷ್ಟವಿಲ್ಲದೆ ಐದು ಓವರ್ಗಳಲ್ಲಿ 93 ರನ್ ಬಾರಿಸಿತು. ಸತತ ಮೂರು ಪಂದ್ಯ ಆಡಿದ ರಾಯರ ಬಳಗ ತಂಡವು ಅಂತಿಮವಾಗಿ ಫೈನಲ್ ಪ್ರವೇಶಿಸಿತು.
ಫೈನಲ್ನಲ್ಲಿ ಕ್ವೀನ್ಸ್ ಇಲೆವೆನ್ ತಂಡವು ವಿನ್ನರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಮೀರಾರೋಡ್ ರಾಯರ ಬಳಗ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ರಾಯರ ಬಳಗ ತಂಡದ ನಿಶಾ ಶೆಟ್ಟಿ ಇವರು ಪಂದ್ಯ ಪುರುಷೋತ್ತಮ, ರಾಯರ ಬಳಗ ತಂಡದ ನೈವೇದ್ಯಾ ಬಂಗೇರ ಇವರು ಪಂದ್ಯ ಪುರುಷೋತ್ತಮ ಹಾಗೂ ರಾಯರ ಬಳಗದ ಸ್ಟಾÂನ್ಸಿ ಮೆಂಡೋನ್ಸಾ ಇವರು ಉತ್ತಮ ಎಸೆಗಾರ್ತಿ ಪ್ರಶಸ್ತಿಯನ್ನು ಪಡೆದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮೀರಾ-ಭಾಯಂದರ್ ಶಾಸಕ ನರೇಂದ್ರ ಮೆಹ್ತಾ, ಮೀರಾ-ಭಾಯಂದರ್ ಮೇಯರ್ ಡಿಂಪಲ್ ಮೆಹ್ತಾ, ಮೀರಾ-ಭಾಯಂದರ್ ನಗರ ಸೇವಕಿ ವಂದನಾ ಭಾವ್ಸರ್, ಮೀರಾ-ಭಾಯಂದರ್ ನಗರ ಸೇವಕ ಪ್ರಶಾಂತ್ ದಳ್ವಿ, ಎಂಬಿಎಂಸಿ ನಗರ ಸೇವಕಿ ಹೇತಲ್ ಪಾರ್ಮರ್, ಧಾರವಾಹಿ ನಟ ಗುಲ್ಶನ್ ಪಾಂಡೆ ಮೊದಲಾದವರು ಉಪಸ್ಥಿತರಿದ್ದರು.
ಚಲನಚಿತ್ರ, ದೂರದರ್ಶನ ಜಿಲ್ಲಾ ಮಹಿಳಾಧ್ಯಕ್ಷೆ, ನಗರ ಸೇವಕಿ ಹೇತಲ್ ಪಾರ್ಮರ್ ಇವರ ಸಹಕಾರದೊಂದಿಗೆ ನಡೆದ ಪಂದ್ಯಾಟದಲ್ಲಿ ಭಾರತೀಯ ಜನ ಪಕ್ಷದ ಮೀರಾ-ಭಾಯಂದರ್ ಘಟಕವು ಸಂಪೂರ್ಣವಾಗಿ ಸಹಕರಿಸಿತು. ಹೇತಲ್ ಪಾರ್ಮರ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ