ಮುಂಬಯಿ ರಂಗಕಲಾವಿದ, ನಿರ್ದೇಶಕ ಸುಂದರ್‌ ಮೂಡಬಿದ್ರೆ ಅವರಿಗೆ ಸಮ್ಮಾನ


Team Udayavani, May 8, 2021, 12:52 PM IST

Mumbai theater artist

ಮುಂಬಯಿ: ಮುಂಬಯಿ ಯ ತುಳು ರಂಗಭೂಮಿಯಲ್ಲಿ ನಾಟಕ ರಚನೆಗಾರರಾಗಿ, ನಿರ್ದೇಶಕರಾಗಿ, ನಟನಾಗಿ ಸುದೀರ್ಘ‌ ಕಾಲ ಸೇವೆ ಮಾಡಿದ ರಂಗ ಸಾಮ್ರಾಟ ಸುಂದರ್‌ ಮೂಡಬಿದ್ರೆ ಅವರಿಗೆ ಓಮಾನ್‌ ತುಳುವೆರ್‌ ಸಮಿತಿ ವತಿಯಿಂದ ಎ. 16ರಂದು ಕಲಾ ಸಾಧಕ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಸುಲ್ತನೇಟ್‌ ಆಫ್‌ ಓಮಾನ್‌ನ ಮಸ್ಕತ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರ, ನಮ್ಮ ಟಿವಿ ನಿರೂಪಕ ನವೀನ್‌ ಶೆಟ್ಟಿ ಎಡ್ಮೇಮಾರ್‌, ಚಿತ್ರನಟಿ ಹಾಗೂ ನಿರೂಪಕಿ ಶ್ವೇತಾ ಸುವರ್ಣ ಅವರು ಸುಂದರ್‌ ಮೂಡಬಿದ್ರೆ ಮತ್ತವರ ಪತ್ನಿ ರತ್ನಾ ಸುಂದರ ಅವರನ್ನು ಸಮ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಝೂಮ್‌ ವರ್ಚುವಲ್‌ ಮೂಲಕ ದೇಶ-ವಿದೇಶದ ತುಳು, ಕನ್ನಡಿಗರು ವೀಕ್ಷಿಸಿದರು.ಕಪ್ಪು ಬಿಳುಪು ಟಿವಿಯ ಸಮಯದಲ್ಲಿ ಮುಂಬಯಿಯ ದೂರದರ್ಶನ ತುಳು ಭಾಷೆಯ ಪ್ರಥಮ ಕಾರ್ಯಕ್ರಮ ಭೂತ ದರ್ಶನ ಪ್ರಸಾರ ಮಾಡಿದ ಇವರು ಈ ಕಾರ್ಯಕ್ರಮದಲ್ಲಿ ಗುಣಪಾಲ್‌ ಉಡುಪಿ ಅವರ ನೇತೃತ್ವದಲ್ಲಿ ಪತ್ನಿ ರತ್ನಾ ಸುಂದರ್‌ ಮೂಡಬಿದ್ರಿ ಅವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ತುಳು ಭಾಷೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಸಾಹಿತಿ, ಲೇಖಕ ಕೋಡು ಭೋಜ ಶೆಟ್ಟಿ ಬರೆದು ದಿಗªರ್ಶಿಸಿದ ಕನ್ನಡ ಬೊಂಬೆ ನಾಟಕ ಮುಂಬಯಿಯ ಷಣ್ಮುಕಾನಂದ ಸಭಾಗೃಹದಲ್ಲಿ ಎರಡು ಪ್ರದರ್ಶನ ಮಾಡಿ ಅದರಲ್ಲಿ ಸುಂದರ್‌ ಮೂಡಬಿದ್ರೆ ಅವರೊಂದಿಗೆ ಅವರ ಪತ್ನಿ ರತ್ನಾ ಸುಂದರ ಮೂಡಬಿದ್ರಿ ಅವರು ಅಭಿನಯ ಮಾಡಿದ್ದಾರೆ. ಇದಲ್ಲದೆ ಅರ್ಧ ಶತಮಾನದಿಂದ ತಾಯಿನಾಡಿನಲ್ಲಿ ಸೇವೆ ಮಾಡುತ್ತಾ ತುಳು ರಂಗಭೂಮಿಯನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸುಂದರ ಮೂಡಬಿದ್ರೆ ದಂಪತಿಯ ಕೊಡುಗೆ ಅಪಾರವಾಗಿದೆ.

ಇಂಡಿಯನ್‌ ಸೋಶಿಯಲ್‌ ಕ್ಲಬ್‌ ಓಮಾನ್‌ ತುಳುವೆರ್‌ ತುಳು ವಿಂಗ್‌ ಇದರ ಸಂಚಾಲಕ ರಮಾನಂದ ಎಂ. ಶೆಟ್ಟಿ, ಸಹ ಸಂಚಾಲಕ ಪದ್ಮಾಕರ ಮೆಂಡನ್‌, ಕೋಶಾಧಿಕಾರಿ ಸುಧೀರ್‌ ಶೆಟ್ಟಿ, ಜತೆ ಕೋಶಾಧಿಕಾರಿ ರವೀಂದ್ರ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ರಾಜೇಶ್‌ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಅರುಲ್‌ ಮೆಕೋಲಿ ಲೋಬೊ, ಕ್ರೀಡಾ ಉಪ ಕಾರ್ಯದರ್ಶಿ ಪ್ರವೀಣ್‌ ಅಮೀನ್‌, ಮಹಿಳಾ ಸಂಚಾಲಕಿ ಉಷಾ ಎಲ…. ಆಚಾರ್ಯ, ಕಮ್ಯೂನಿಟಿ ವೆಲ್ಫೆàರ್‌ ಕಾರ್ಯದರ್ಶಿ ಮೋನಬ್ಬ ಎ. ಬ್ಯಾರಿ, ಮಾಧ್ಯಮ ಸಲಹೆಗಾರ, ತಾಂತ್ರಿಕ ಸಲಹೆಗಾರ ಶರತ್‌ ಕುಮಾರ್‌ ಹಾಗೂ ಇತರ ಸದಸ್ಯರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಟಾಪ್ ನ್ಯೂಸ್

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.