ಜನಪ್ರಿಯ ಯಕ್ಷಗಾನ ಮಂಡಳಿ ಮುಂಬಯಿ: ನವೀಕೃತ ಕಚೇರಿಯ ಉದ್ಘಾಟನೆ
Team Udayavani, Aug 5, 2021, 2:20 PM IST
ಮುಂಬಯಿ: ವಿಶ್ವ ವಿಖ್ಯಾತ ಪ್ರಸಿದ್ದ ಜಿಎಸ್ಬಿ ಸೇವಾ ಮಂಡಲದ ಗಣೇಶೋತ್ಸವದ ಅಂಗ ಸಂಸ್ಥೆಯಾಗಿರುವ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ತನ್ನ ಸ್ವಂತ ಕಚೇರಿಯನ್ನು ಕುರ್ಲಾ ಪಶ್ಚಿಮದ ಶಾಂತಿ ನಿವಾಸದಲ್ಲಿ ಹೊಂದಿದೆ.
ಇದ ನವೀಕೃತ ಕಚೇರಿಯ ಉದ್ಘಾಟನ ಸಮಾರಂಭವು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ, ಶ್ರೀಮದ್ ಸಮ್ಯಮೇಂದ್ರ
ತೀರ್ಥ ಸ್ವಾಮೀಜಿಯವರ ಶುಭಾ ಶೀರ್ವಾದಗಳೊಂದಿಗೆ ಜರಗಿತು.
ಜು. 30ರಂದು ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತುಹೋಮ, ನವಗ್ರಹ ಹೋಮ, ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯ
ವಿಧಿ-ವಿಧಾನವನ್ನು ವೇದಮೂರ್ತಿ ಪ್ರಶಾಂತ್ ಭಟ್, ಹರೀಶ್ ಭಟ್ ಅವರ ಮುಂದಾಳತ್ವದಲ್ಲಿ ನಡೆಯಿತು.
ಮಂಡಳಿಯ ವತಿಯಿಂದ ದೀಪಕ್ ಶೆಣೈ, ಆರ್. ಜಿ. ಭಟ್ ಅವರನ್ನು ಗೌರವಿಸಲಾಯಿತು. ಅನ್ನ ಸಂತರ್ಪಣೆ ಪ್ರಸಾದವನ್ನು ವಿಜಯ್ ದಿನೇಶ್
ಪ್ರಭು ಅವರ ಸೇವಾರ್ಥಕವಾಗಿ ಆಯೋಜಿಸಲಾಯಿತು. ಕಚೇರಿ ನವೀಕರಣಕ್ಕೆ ದೀಪಕ್ ಶೆಣೈ, ಸಹಾಯಕರಾಗಿ ಮತ್ತು ಪೂಜಾ
ಯಜಮಾನರಾಗಿಯೂ ಮಂಡಳಿಯ ಅಧ್ಯಕ್ಷ ಮೇಲು ಗಂಗೊಳ್ಳಿ ರವೀಂದ್ರ ಪೈ, ಕಾರ್ಯದರ್ಶಿ ಕುಕ್ಕೆಹಳ್ಳಿ ವಿಠಲ್ ಪ್ರಭು, ಕೋಶಾಧಿಕಾರಿ ಯೋಗೇಶ್ ಕೃಷ್ಣ ಡಾಂಗೆ ಅವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಎಲ್ಲ ಸದಸ್ಯರು, ಕಲಾವಿದರು ಉಪಸ್ಥಿತರಿದ್ದರು.
65 ವರ್ಷಗಳ ಹಿಂದೆ ಗೌಡ ಸಾರಸ್ವತ ಬ್ರಾಹ್ಮಣ ಬಾಂಧವರು ಒಟ್ಟುಗೂಡಿ ಯಕ್ಷಗಾನ ಮಂಡಳಿಯ ಸ್ಥಾಪನೆಗಾಗಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಲ್ಲಿ ಪ್ರಸ್ತಾವನೆಯನ್ನು ಇಟ್ಟಿದ್ದರು. ಈ ಪ್ರಸ್ತಾವನೆಗೆ ಗುರುಗಳು ಸಂತೋಷದಿಂದ ಒಪ್ಪಿಗೆ ಕೊಟ್ಟು ಇದಕ್ಕೆ ಜನಪ್ರಿಯ ಯಕ್ಷಗಾನ ಮಂಡಳಿ ಎಂದು ನಾಮಕರಣ ಮಾಡಿದರು. ಇದೀಗ ಮಂಡಳಿಯು 65ನೇ ವರ್ಷಾಚರಣೆಯಲ್ಲಿದ್ದು, ವರ್ಷಪೂರ್ತಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ಪ್ರದರ್ಶಿಸುವಲ್ಲಿಮಂಡಳಿಯು ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ